newsfirstkannada.com

ಸೇಲ್ಸ್​ಮ್ಯಾನ್​, ಪೇಂಟರ್​, ಲಾರಿ ಡ್ರೈವರ್​.. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್​ಗಾಗಿ ಕಾಯುತ್ತಿದೆ ಕುಟುಂಬ

Share :

Published July 25, 2024 at 10:54am

Update July 25, 2024 at 11:08am

    ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಕೇರಳದ ಅರ್ಜುನ್​

    ದಡದಿಂದ 40 ಮೀಟರ್​ ದೂರದಲ್ಲಿರುವ ನದಿಯಲ್ಲಿ ಅರ್ಜುನ್​ ಲಾರಿ ಪತ್ತೆ

    22ನೇ ವಯಸ್ಸಿನಲ್ಲೇ ಕುಟುಂಬ ನಿರ್ವಹಣೆಗಾಗಿ ಕಠಿಣ ಕೆಲಸಕ್ಕಿಳಿದಿದ್ದ ಅರ್ಜುನ್

ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್​ಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಇಂದಿಗೆ 10 ದಿನ ಕಳೆದರೂ ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅರ್ಜುನ್ ಚಲಾಯಿಸುತ್ತಿದ್ದ ಲಾರಿ​ ದಡದಿಂದ 40 ಮೀಟರ್​ ದೂರದಲ್ಲಿರುವ ನದಿಯಲ್ಲಿ ಇರುವುದು ಪತ್ತೆಯಾಗಿದೆ. ಮಾಹಿತಿ ಪ್ರಕಾರ 15 ಮೀಟರ್​ ಅಳದಲ್ಲಿ ಲಾರಿ ಇದೆ ಎಂದು ಅಂದಾಜಿಸಲಾಗಿದೆ. ಇಂದು ಲಾರಿಯನ್ನು ಮೇಲೆಕೆತ್ತುವಲ್ಲಿ ಪ್ರಯತ್ನ ನಡೆಯಲಿದೆ. ಅದಕ್ಕಾಗಿ ದೆಹಲಿಯಿಂದ ತಜ್ಞರ ತಂಡ ಆಗಮಿಸುತ್ತಿದೆ.

ಅರ್ಜುನ್​ ಯಾರು? ಹಿನ್ನೆಲೆ ಏನು?

ಅರ್ಜುನ್​ ಶಾಲಾ ಶಿಕ್ಷಣ ಮುಗಿಸಿದ ಬಳಿಕ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಡವರು. ಪ್ರಾರಂಭದಲ್ಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್​ಮ್ಯಾನ್​ ಆಗಿ ಕೆಲಸ ಮಾಡುತ್ತಾರೆ. ಬಳಿಕ ಪೇಟಿಂಗ್​ ಕೆಲಸಕ್ಕೆ ಹೋಗುತ್ತಿದ್ದರು.

ಕುಟುಂಬ ನಿರ್ವಹಿಸುತ್ತಿದ್ದ ಆರ್ಜುನ್

22ನೇ ವರ್ಷ ವಯಸ್ಸಿರುವಾಗ ಅರ್ಜುನ್​ ಕುಟುಂಬ ನಿರ್ವಹಣೆ ಮಾಡಲು ಸಾಕಷ್ಟು ಕಠಿಣ ಕೆಲಸಗಳನ್ನು ಮಾಡುತ್ತಿದ್ದರು. ಬಳಿಕ ಅವರಿಗೆ ವಾಹನಗಳ ಮೇಲೆ ವಿಶೇಷವಾದ ಒಲವು ಮೂಡುತ್ತದೆ. ನಂತರ ಹೆವಿ ವೆಹಿಕಲ್​ ಲೈಸನ್ಸ್​ ಮಾಡಿಸಿಕೊಳ್ಳುತ್ತಾರೆ. ಬಳಿಕ ಲಾರಿ ಚಾಲಕರಾಗಿ ಕೆಲಸಕ್ಕೆ ಸೇರುತ್ತಾರೆ. ಟ್ರಕ್​ ಡ್ರೈವರಾಗಿ ಕೆಲಸಕ್ಕೆ ಸೇರಿದಾಗ ಅರ್ಜುನ್​ ಕಾಶ್ಮೀರದಿಂದ ದಕ್ಷಿಣದವರೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು.

ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆ.. ಇಂದು ಸ್ಥಳಕ್ಕೆ ಆಗಮಿಸಲಿದ್ದಾರೆ ದೆಹಲಿ ತಜ್ಞರ ತಂಡ

ಶಿರೂರಿನಲ್ಲಿ ಸಿಲುಕಿದ ಅರ್ಜುನ್​

2 ವರ್ಷಗಳ ಹಿಂದೆ ಅರ್ಜುನ್​ ಕೇರಳದಿಂದ ವಿವಿಧ ಸ್ಥಳಗಳಿಗೆ ಟಿಂಬರ್​ ಸಾಗಿಸುವ ಕೆಲಸಕ್ಕೆ ಚಾಲಕನಾಗಿ ಸೇರುತ್ತಾರೆ. ಬಳಿಕ ಅದೇ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಜುಲೈ 16ರಂದು ಸಾಗರ್​ ಕೋಯಾ ಟಿಂಬರ್ಸ್​ ಮಾಲಿಕತ್ವದ ಕೆಎ15 ಎ7427 ನೋಂದಣಿಯ ಭಾರತ್​ ಬೆಂಜ್​ ಲಾರಿಯನ್ನು ಅರ್ಜುನ್​ ಚಲಾಯಿಸಿಕೊಂಡು ಶಿರೂರು ಕಡೆಗೆ ಬಂದಿದ್ದಾರೆ. ಆದರೆ ಈ ವೇಳೆ ಅಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದಿದೆ.

ಕುಟುಂಬದ ಆಧಾರಸ್ತಂಭ

ಆದರೀಗ 30 ವರ್ಷದ ನಾಪತ್ತೆಯಾದ ಅರ್ಜುನ್​ಗಾಗಿ ಹುಡುಕಾಟ ನಡೆಯುತ್ತಿದೆ. ಇನ್ನು ಅರ್ಜುನ್​ ತಂದೆ ಬಾವಿ ತೋಡುವ ಕೆಲಸ ಮಾಡುತ್ತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆ ಬಳಿಕ ಅರ್ಜುನ್​ ಕುಟುಂಬದ ಆಧಾರಸ್ತಂಭವಾದರು. ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು.

ಇದನ್ನೂ ಓದಿ: ಮಕ್ಕಳೇ.. ಈ ಜಿಲ್ಲೆಯ ಶಾಲಾ-ಕಾಲೇಜಿಗಳಿಗೆ ಇಂದು ಮತ್ತು ನಾಳೆ ರಜೆ!

ತಾಯಿ ಮತ್ತು ಹೆಂಡತಿಯನ್ನು ಹೆಚ್ಚು ಪ್ರೀತಿಸುವ ಅರ್ಜುನ್​ ದಿನಕ್ಕೆ ಐದಾರು ಬಾರಿ ಕರೆ ಮಾಡುತ್ತಿದ್ದರಂತೆ. ಆದರೀಗ ಅರ್ಜುನ್​ ನಾಪತ್ತೆಯಾದ ಬಳಿಕದಿಂದ ಕುಟುಂಬ ಕಣ್ಣೀರಿನಲ್ಲಿ ಕುಳಿತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೇಲ್ಸ್​ಮ್ಯಾನ್​, ಪೇಂಟರ್​, ಲಾರಿ ಡ್ರೈವರ್​.. ಮನೆಯ ಆಧಾರಸ್ತಂಭವಾಗಿದ್ದ ಅರ್ಜುನ್​ಗಾಗಿ ಕಾಯುತ್ತಿದೆ ಕುಟುಂಬ

https://newsfirstlive.com/wp-content/uploads/2024/07/Shirur-2.jpg

    ಶಿರೂರು ಗುಡ್ಡ ಕುಸಿತ ಪ್ರಕರಣದಲ್ಲಿ ನಾಪತ್ತೆಯಾದ ಕೇರಳದ ಅರ್ಜುನ್​

    ದಡದಿಂದ 40 ಮೀಟರ್​ ದೂರದಲ್ಲಿರುವ ನದಿಯಲ್ಲಿ ಅರ್ಜುನ್​ ಲಾರಿ ಪತ್ತೆ

    22ನೇ ವಯಸ್ಸಿನಲ್ಲೇ ಕುಟುಂಬ ನಿರ್ವಹಣೆಗಾಗಿ ಕಠಿಣ ಕೆಲಸಕ್ಕಿಳಿದಿದ್ದ ಅರ್ಜುನ್

ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾದ ಅರ್ಜುನ್​ಗಾಗಿ ನಿರಂತರ ಹುಡುಕಾಟ ನಡೆಯುತ್ತಿದೆ. ಇಂದಿಗೆ 10 ದಿನ ಕಳೆದರೂ ಆತನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಅರ್ಜುನ್ ಚಲಾಯಿಸುತ್ತಿದ್ದ ಲಾರಿ​ ದಡದಿಂದ 40 ಮೀಟರ್​ ದೂರದಲ್ಲಿರುವ ನದಿಯಲ್ಲಿ ಇರುವುದು ಪತ್ತೆಯಾಗಿದೆ. ಮಾಹಿತಿ ಪ್ರಕಾರ 15 ಮೀಟರ್​ ಅಳದಲ್ಲಿ ಲಾರಿ ಇದೆ ಎಂದು ಅಂದಾಜಿಸಲಾಗಿದೆ. ಇಂದು ಲಾರಿಯನ್ನು ಮೇಲೆಕೆತ್ತುವಲ್ಲಿ ಪ್ರಯತ್ನ ನಡೆಯಲಿದೆ. ಅದಕ್ಕಾಗಿ ದೆಹಲಿಯಿಂದ ತಜ್ಞರ ತಂಡ ಆಗಮಿಸುತ್ತಿದೆ.

ಅರ್ಜುನ್​ ಯಾರು? ಹಿನ್ನೆಲೆ ಏನು?

ಅರ್ಜುನ್​ ಶಾಲಾ ಶಿಕ್ಷಣ ಮುಗಿಸಿದ ಬಳಿಕ ಕುಟುಂಬದ ಜವಾಬ್ದಾರಿಯನ್ನು ತೆಗೆದುಕೊಡವರು. ಪ್ರಾರಂಭದಲ್ಲಿ ಬಟ್ಟೆ ಅಂಗಡಿಯಲ್ಲಿ ಸೇಲ್ಸ್​ಮ್ಯಾನ್​ ಆಗಿ ಕೆಲಸ ಮಾಡುತ್ತಾರೆ. ಬಳಿಕ ಪೇಟಿಂಗ್​ ಕೆಲಸಕ್ಕೆ ಹೋಗುತ್ತಿದ್ದರು.

ಕುಟುಂಬ ನಿರ್ವಹಿಸುತ್ತಿದ್ದ ಆರ್ಜುನ್

22ನೇ ವರ್ಷ ವಯಸ್ಸಿರುವಾಗ ಅರ್ಜುನ್​ ಕುಟುಂಬ ನಿರ್ವಹಣೆ ಮಾಡಲು ಸಾಕಷ್ಟು ಕಠಿಣ ಕೆಲಸಗಳನ್ನು ಮಾಡುತ್ತಿದ್ದರು. ಬಳಿಕ ಅವರಿಗೆ ವಾಹನಗಳ ಮೇಲೆ ವಿಶೇಷವಾದ ಒಲವು ಮೂಡುತ್ತದೆ. ನಂತರ ಹೆವಿ ವೆಹಿಕಲ್​ ಲೈಸನ್ಸ್​ ಮಾಡಿಸಿಕೊಳ್ಳುತ್ತಾರೆ. ಬಳಿಕ ಲಾರಿ ಚಾಲಕರಾಗಿ ಕೆಲಸಕ್ಕೆ ಸೇರುತ್ತಾರೆ. ಟ್ರಕ್​ ಡ್ರೈವರಾಗಿ ಕೆಲಸಕ್ಕೆ ಸೇರಿದಾಗ ಅರ್ಜುನ್​ ಕಾಶ್ಮೀರದಿಂದ ದಕ್ಷಿಣದವರೆಗೆ ಲಾರಿ ಚಲಾಯಿಸಿಕೊಂಡು ಬರುತ್ತಿದ್ದರು.

ಇದನ್ನೂ ಓದಿ: ಶಿರೂರು: ನಾಪತ್ತೆಯಾದ ಲಾರಿ ನದಿಯಲ್ಲಿ ಪತ್ತೆ.. ಇಂದು ಸ್ಥಳಕ್ಕೆ ಆಗಮಿಸಲಿದ್ದಾರೆ ದೆಹಲಿ ತಜ್ಞರ ತಂಡ

ಶಿರೂರಿನಲ್ಲಿ ಸಿಲುಕಿದ ಅರ್ಜುನ್​

2 ವರ್ಷಗಳ ಹಿಂದೆ ಅರ್ಜುನ್​ ಕೇರಳದಿಂದ ವಿವಿಧ ಸ್ಥಳಗಳಿಗೆ ಟಿಂಬರ್​ ಸಾಗಿಸುವ ಕೆಲಸಕ್ಕೆ ಚಾಲಕನಾಗಿ ಸೇರುತ್ತಾರೆ. ಬಳಿಕ ಅದೇ ಕೆಲಸವನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ಜುಲೈ 16ರಂದು ಸಾಗರ್​ ಕೋಯಾ ಟಿಂಬರ್ಸ್​ ಮಾಲಿಕತ್ವದ ಕೆಎ15 ಎ7427 ನೋಂದಣಿಯ ಭಾರತ್​ ಬೆಂಜ್​ ಲಾರಿಯನ್ನು ಅರ್ಜುನ್​ ಚಲಾಯಿಸಿಕೊಂಡು ಶಿರೂರು ಕಡೆಗೆ ಬಂದಿದ್ದಾರೆ. ಆದರೆ ಈ ವೇಳೆ ಅಲ್ಲಿ ಮಳೆಯಿಂದಾಗಿ ಗುಡ್ಡ ಕುಸಿದಿದೆ.

ಕುಟುಂಬದ ಆಧಾರಸ್ತಂಭ

ಆದರೀಗ 30 ವರ್ಷದ ನಾಪತ್ತೆಯಾದ ಅರ್ಜುನ್​ಗಾಗಿ ಹುಡುಕಾಟ ನಡೆಯುತ್ತಿದೆ. ಇನ್ನು ಅರ್ಜುನ್​ ತಂದೆ ಬಾವಿ ತೋಡುವ ಕೆಲಸ ಮಾಡುತ್ತಿದ್ದಾಗ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಆ ಬಳಿಕ ಅರ್ಜುನ್​ ಕುಟುಂಬದ ಆಧಾರಸ್ತಂಭವಾದರು. ಕುಟುಂಬದ ಜವಾಬ್ದಾರಿಯನ್ನು ಹೊತ್ತಿದ್ದರು.

ಇದನ್ನೂ ಓದಿ: ಮಕ್ಕಳೇ.. ಈ ಜಿಲ್ಲೆಯ ಶಾಲಾ-ಕಾಲೇಜಿಗಳಿಗೆ ಇಂದು ಮತ್ತು ನಾಳೆ ರಜೆ!

ತಾಯಿ ಮತ್ತು ಹೆಂಡತಿಯನ್ನು ಹೆಚ್ಚು ಪ್ರೀತಿಸುವ ಅರ್ಜುನ್​ ದಿನಕ್ಕೆ ಐದಾರು ಬಾರಿ ಕರೆ ಮಾಡುತ್ತಿದ್ದರಂತೆ. ಆದರೀಗ ಅರ್ಜುನ್​ ನಾಪತ್ತೆಯಾದ ಬಳಿಕದಿಂದ ಕುಟುಂಬ ಕಣ್ಣೀರಿನಲ್ಲಿ ಕುಳಿತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More