newsfirstkannada.com

ಶಿರೂರು ದುರಂತ.. ಮೂವರಿಗಾಗಿ ಡ್ರೋನ್​ ಮೂಲಕ ನೌಕಾಪಡೆ ತೀವ್ರ ಹುಡುಕಾಟ!

Share :

Published July 26, 2024 at 6:11am

    ಮಹಾ ದುರಂತಕ್ಕೆ ಸಾಕ್ಷಿಯಾದ ಗಂಗಾವಳಿ ನದಿ ತೀರ

    ಕೆಸರಿನಲ್ಲಿ ಕಣ್ಮರೆಯಾದವರಿಗಾಗಿ ನಿರಂತರ ಹುಡುಕಾಟ

    ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಸ್ಟಂ ಬಳಸಿ ಶೋಧ

ಶಿರೂರು ಗುಡ್ಡಕುಸಿತ ಪ್ರಕರಣ ಪ್ರಕೃತಿ ವಿಕೋಪದ ಭೀಕರತೆಯನ್ನು ತೆರೆದಿಟ್ಟಿದೆ. ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 10 ದಿನಗಳು ಕಳೆದ್ರೂ ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ. ಈ ಮಧ್ಯೆ ಚಹಾ ಅಂಗಡಿ ಮಾಲೀಕ ಲಕ್ಷ್ಮಣ್ ನಾಯ್ಕ್ ಮಕ್ಕಳ ಹಾಗೂ ಕೇರಳದ ಲಾರಿ ಚಾಲಕ ಅರ್ಜುನ್ ಹಳೆಯ ವಿಡಿಯೋಗಳು ವೈರಲ್ ಆಗಿವೆ. ಕಳೆದ ಜುಲೈ 15ರಂದು ಉತ್ತರ ಕನ್ನಡ ಜಿಲ್ಲೆ ಅಂಕೋಲದ ಶಿರೂರು ಗುಡ್ಡಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ 11 ಜನರಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡಕ್ಕೆ ಬಂದ ಪೋಕ್​ಲೈನ್: ಏನಿದರ ಸಾಮರ್ಥ್ಯ? ಇಲ್ಲಿದೆ ಮಾಹಿತಿ

ಉಳಿದ ಮೂವರಿಗಾಗಿ ಸತತ ಹುಡುಕಾಟ ಮುಂದುವರಿದಿದೆ. ಮೃತ ಲಕ್ಷ್ಮಣ್ ನಾಯ್ಕ್ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜಗನ್ನಾಥ್ ಹಾಗೂ ಕುಮಟಾ ಮೂಲದ ಲೋಕೇಶ್ ಹಾಗೂ ಲಾರಿ ಚಾಲಕ ಅರ್ಜುನ್​ಗಾಗಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಶೋಧ ನಡೆಸಲಾಗ್ತಿದೆ. ಕೇರಳ ಮೂಲದ ಅರ್ಜುನ್ ಲಾರಿ ಸಮೇತ ನದಿಯಲ್ಲಿ ಕೊಚ್ಚಿಹೋಗಿರುವ ಮಾಹಿತಿ ಇದ್ದು ದೆಹಲಿಯಿಂದ ವಿಶೇಷ ತಜ್ಞರ ತಂಡ ಎಂಟ್ರಿ ಕೊಟ್ಟಿದೆ. ಗಂಗಾವಳಿ ನದಿಯಲ್ಲಿ ಅತ್ಯಾಧುನಿಕ ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸ್ತಿದೆ. ಮತ್ತೊಂದೆಡೆ ಎಲೆನಾ ಎಂಬ ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಸ್ಟಂ ಬಳಸಿ ಶೋಧ ನಡೆಸಲಾಗ್ತಿದೆ. ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗ್ತಿದೆ.

ಮೃತ ಲಕ್ಷ್ಮಣ್ ನಾಯ್ಕ್ ಅಂಗಡಿಯ ವಿಡಿಯೋ ವೈರಲ್!

ಈ ಮಧ್ಯೆ ಗುಡ್ಡಕುಸಿತದಲ್ಲಿ ಸಮಾಧಿಯಾದ ಚಹಾ ಅಂಗಡಿ ಮಾಲೀಕ ಲಕ್ಷ್ಮಣ್ ನಾಯ್ಕ್ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಕಳೆದ ಡಿಸೆಂಬರ್​​ನಲ್ಲಿ ಯೂಟ್ಯೂಬರ್ ಒಬ್ಬ ಚಹಾ ಅಂಗಡಿಯ ವಿಡಿಯೋ ಮಾಡಿದ್ದ. ಹೆದ್ದಾರಿ ಪಕ್ಕದಲ್ಲೇ ಹೋಟೆಲ್​​ ನಡೆಸುತ್ತಿದ್ದ ಲಕ್ಷ್ಮಣ್ ನಾಯಕ್​ ತಮ್ಮ ಹೋಟೆಲ್ ಮುಂದೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಫೋಟೋ ಹಾಕಿಕೊಂಡಿದ್ದರು. ದುರಂತದಲ್ಲಿ ಅಂತ್ಯ ಕಂಡ ಒಂದೇ ಕುಟುಂಬದ ಐವರಲ್ಲಿ ಲಕ್ಷ್ಮಣ್ ನಾಯ್ಕ್ ಮೊಮ್ಮಕ್ಕಳಾದ ಅವಂತಿಕಾ ಹಾಗೂ ರೋಷನ್ ಕೂಡ ಇದ್ದು ನೃತ್ಯ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಸಾರ್ವಜನಿಕರು ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ‘ದರ್ಶನ್ ತುಂಬಾ ಮುಗ್ಧ ಹುಡುಗ’.. ದಾಸನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಗಿರಿಜಾ ಲೋಕೇಶ್​

ಲಾರಿ ಚಾಲಕ ಅರ್ಜುನ್ ವಿಡಿಯೋ ಕೂಡ ಹರಿದಾಟ!

ಮತ್ತೊಂದೆಡೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ವಿಡಿಯೋ ಕೂಡ ವೈರಲ್ ಆಗಿದೆ. ಜೊಯ್ಡಾದ ರಾಮನಗರದಲ್ಲಿ ಲಾರಿ ಕೆಟ್ಟು ನಿಂತಿದ್ದಾಗ ಸ್ನೇಹಿತರ ಜೊತೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಟಿಂಬರ್ ತುಂಬಲು ಬಂದಿದ್ದಾಗ ಕಾಡಿನಲ್ಲಿ ಅಡುಗೆ ಮಾಡುವ ದೃಶ್ಯ ವೈರಲ್ ಆಗಿದೆ. ಒಟ್ಟಾರೆ, ಮಳೆ, ಭೂಕುಸಿತದ ರೂಪದಲ್ಲಿ ಮರಣಮೃದಂಗ ಬಾರಿಸಿದೆ. ನಾಪತ್ತೆಯಾಗಿರುವ ಮೂವರು ಬದುಕಿ ಬರುವ ವಿಶ್ವಾಸದಲ್ಲಿ ಕುಟುಂಬಸ್ಥರು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶಿರೂರು ದುರಂತ.. ಮೂವರಿಗಾಗಿ ಡ್ರೋನ್​ ಮೂಲಕ ನೌಕಾಪಡೆ ತೀವ್ರ ಹುಡುಕಾಟ!

https://newsfirstlive.com/wp-content/uploads/2024/07/kwr2.jpg

    ಮಹಾ ದುರಂತಕ್ಕೆ ಸಾಕ್ಷಿಯಾದ ಗಂಗಾವಳಿ ನದಿ ತೀರ

    ಕೆಸರಿನಲ್ಲಿ ಕಣ್ಮರೆಯಾದವರಿಗಾಗಿ ನಿರಂತರ ಹುಡುಕಾಟ

    ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಸ್ಟಂ ಬಳಸಿ ಶೋಧ

ಶಿರೂರು ಗುಡ್ಡಕುಸಿತ ಪ್ರಕರಣ ಪ್ರಕೃತಿ ವಿಕೋಪದ ಭೀಕರತೆಯನ್ನು ತೆರೆದಿಟ್ಟಿದೆ. ದುರಂತ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. 10 ದಿನಗಳು ಕಳೆದ್ರೂ ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ಮುಂದುವರಿದಿದೆ. ಈ ಮಧ್ಯೆ ಚಹಾ ಅಂಗಡಿ ಮಾಲೀಕ ಲಕ್ಷ್ಮಣ್ ನಾಯ್ಕ್ ಮಕ್ಕಳ ಹಾಗೂ ಕೇರಳದ ಲಾರಿ ಚಾಲಕ ಅರ್ಜುನ್ ಹಳೆಯ ವಿಡಿಯೋಗಳು ವೈರಲ್ ಆಗಿವೆ. ಕಳೆದ ಜುಲೈ 15ರಂದು ಉತ್ತರ ಕನ್ನಡ ಜಿಲ್ಲೆ ಅಂಕೋಲದ ಶಿರೂರು ಗುಡ್ಡಕುಸಿತ ಪ್ರಕರಣದಲ್ಲಿ ನಾಪತ್ತೆಯಾಗಿದ್ದ 11 ಜನರಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಶಿರೂರು ಗುಡ್ಡಕ್ಕೆ ಬಂದ ಪೋಕ್​ಲೈನ್: ಏನಿದರ ಸಾಮರ್ಥ್ಯ? ಇಲ್ಲಿದೆ ಮಾಹಿತಿ

ಉಳಿದ ಮೂವರಿಗಾಗಿ ಸತತ ಹುಡುಕಾಟ ಮುಂದುವರಿದಿದೆ. ಮೃತ ಲಕ್ಷ್ಮಣ್ ನಾಯ್ಕ್ ಚಹಾ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಜಗನ್ನಾಥ್ ಹಾಗೂ ಕುಮಟಾ ಮೂಲದ ಲೋಕೇಶ್ ಹಾಗೂ ಲಾರಿ ಚಾಲಕ ಅರ್ಜುನ್​ಗಾಗಿ ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ಶೋಧ ನಡೆಸಲಾಗ್ತಿದೆ. ಕೇರಳ ಮೂಲದ ಅರ್ಜುನ್ ಲಾರಿ ಸಮೇತ ನದಿಯಲ್ಲಿ ಕೊಚ್ಚಿಹೋಗಿರುವ ಮಾಹಿತಿ ಇದ್ದು ದೆಹಲಿಯಿಂದ ವಿಶೇಷ ತಜ್ಞರ ತಂಡ ಎಂಟ್ರಿ ಕೊಟ್ಟಿದೆ. ಗಂಗಾವಳಿ ನದಿಯಲ್ಲಿ ಅತ್ಯಾಧುನಿಕ ಡ್ರೋನ್ ಬಳಸಿ ಕಾರ್ಯಾಚರಣೆ ನಡೆಸ್ತಿದೆ. ಮತ್ತೊಂದೆಡೆ ಎಲೆನಾ ಎಂಬ ಉಪಗ್ರಹ ಆಧಾರಿತ ನ್ಯಾವಿಗೇಷನ್ ಸಿಸ್ಟಂ ಬಳಸಿ ಶೋಧ ನಡೆಸಲಾಗ್ತಿದೆ. ಅಂಡರ್ ಗ್ರೌಂಡ್ ಬರಿಡ್ ಆಬ್ಜೆಕ್ಟ್ ಡಿಟೆಕ್ಟರ್ ಬಳಸಿಕೊಂಡು ಕಾರ್ಯಾಚರಣೆ ನಡೆಸಲಾಗ್ತಿದೆ.

ಮೃತ ಲಕ್ಷ್ಮಣ್ ನಾಯ್ಕ್ ಅಂಗಡಿಯ ವಿಡಿಯೋ ವೈರಲ್!

ಈ ಮಧ್ಯೆ ಗುಡ್ಡಕುಸಿತದಲ್ಲಿ ಸಮಾಧಿಯಾದ ಚಹಾ ಅಂಗಡಿ ಮಾಲೀಕ ಲಕ್ಷ್ಮಣ್ ನಾಯ್ಕ್ ಹಳೆಯ ವಿಡಿಯೋವೊಂದು ವೈರಲ್ ಆಗಿದೆ. ಕಳೆದ ಡಿಸೆಂಬರ್​​ನಲ್ಲಿ ಯೂಟ್ಯೂಬರ್ ಒಬ್ಬ ಚಹಾ ಅಂಗಡಿಯ ವಿಡಿಯೋ ಮಾಡಿದ್ದ. ಹೆದ್ದಾರಿ ಪಕ್ಕದಲ್ಲೇ ಹೋಟೆಲ್​​ ನಡೆಸುತ್ತಿದ್ದ ಲಕ್ಷ್ಮಣ್ ನಾಯಕ್​ ತಮ್ಮ ಹೋಟೆಲ್ ಮುಂದೆ ಪವರ್​ಸ್ಟಾರ್ ಪುನೀತ್ ರಾಜ್​ಕುಮಾರ್ ಫೋಟೋ ಹಾಕಿಕೊಂಡಿದ್ದರು. ದುರಂತದಲ್ಲಿ ಅಂತ್ಯ ಕಂಡ ಒಂದೇ ಕುಟುಂಬದ ಐವರಲ್ಲಿ ಲಕ್ಷ್ಮಣ್ ನಾಯ್ಕ್ ಮೊಮ್ಮಕ್ಕಳಾದ ಅವಂತಿಕಾ ಹಾಗೂ ರೋಷನ್ ಕೂಡ ಇದ್ದು ನೃತ್ಯ ಮಾಡುತ್ತಿರುವ ವಿಡಿಯೋ ಕೂಡ ವೈರಲ್ ಆಗಿದೆ. ಸಾರ್ವಜನಿಕರು ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ‘ದರ್ಶನ್ ತುಂಬಾ ಮುಗ್ಧ ಹುಡುಗ’.. ದಾಸನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಗಿರಿಜಾ ಲೋಕೇಶ್​

ಲಾರಿ ಚಾಲಕ ಅರ್ಜುನ್ ವಿಡಿಯೋ ಕೂಡ ಹರಿದಾಟ!

ಮತ್ತೊಂದೆಡೆ ಕೇರಳ ಮೂಲದ ಲಾರಿ ಚಾಲಕ ಅರ್ಜುನ್ ವಿಡಿಯೋ ಕೂಡ ವೈರಲ್ ಆಗಿದೆ. ಜೊಯ್ಡಾದ ರಾಮನಗರದಲ್ಲಿ ಲಾರಿ ಕೆಟ್ಟು ನಿಂತಿದ್ದಾಗ ಸ್ನೇಹಿತರ ಜೊತೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಟಿಂಬರ್ ತುಂಬಲು ಬಂದಿದ್ದಾಗ ಕಾಡಿನಲ್ಲಿ ಅಡುಗೆ ಮಾಡುವ ದೃಶ್ಯ ವೈರಲ್ ಆಗಿದೆ. ಒಟ್ಟಾರೆ, ಮಳೆ, ಭೂಕುಸಿತದ ರೂಪದಲ್ಲಿ ಮರಣಮೃದಂಗ ಬಾರಿಸಿದೆ. ನಾಪತ್ತೆಯಾಗಿರುವ ಮೂವರು ಬದುಕಿ ಬರುವ ವಿಶ್ವಾಸದಲ್ಲಿ ಕುಟುಂಬಸ್ಥರು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More