newsfirstkannada.com

ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?

Share :

Published July 26, 2024 at 11:08am

    ಸೂರ್ಯಕುಮಾರ್ ವಿರುದ್ಧ ಕೇಳಿ ಬಂದ ಆರೋಪಗಳೇನು?

    ಶ್ರೀಲಂಕಾ ವಿರುದ್ಧ ಟಿ20 ಸರಣಿ ಆಡಲಿರೋ ಭಾರತ ತಂಡ

    ಸೂರ್ಯಕುಮಾರ್​ ನಾಯಕತ್ವದ ಮೇಲೆ ಹದ್ದಿನ ಕಣ್ಣು..!

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಕ್ಯಾಪ್ಟನ್​ ಸೂರ್ಯಕುಮಾರ್​ ನಡೆಯ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ. 2015ರಲ್ಲಿ ನಡೆದ ಆ ಒಂದು ಘಟನೆ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ರೂಮ್​ ವಾತಾವರಣ ಹೇಗಿರಲಿದೆ ಅನ್ನೋ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: KRS ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ರಿಲೀಸ್.. ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ​

ಟೀಮ್​ ಇಂಡಿಯಾದ ನೂತನ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​, ಮೊದಲ ಅಗ್ನಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಟೀಮ್​ ಇಂಡಿಯಾಗೆ ಕಾಲಿಟ್ಟ ಮೂರೇ ವರ್ಷಕ್ಕೆ ಟಿ20 ನಾಯಕನ ಪಟ್ಟ ಅಲಂಕರಿಸಿರೋ ನೂತನ ನಾಯಕನ ಅಡಿಯಲ್ಲಿ ಲಂಕಾ ದಹನಕ್ಕೆ ಟೀಮ್​ ಇಂಡಿಯಾ ರೆಡಿಯಾಗಿದೆ. ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಸೂರ್ಯಕುಮಾರ್​ ನಾಯಕತ್ವದ ಮೇಲೆ ಎಲ್ಲರ ಹದ್ದಿನ ಕಣ್ಣಿದೆ. 2015ರಲ್ಲಿ ನಡೆದ ಆ ಒಂದು ಘಟನೆ ಸೂರ್ಯನ ನಡೆ ಹೇಗಿರಲಿದೆ ಅನ್ನೋ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ದರ್ಶನ್​ ಪತ್ನಿ ವಿಜಯಲಕ್ಷ್ಮಿ ‘ನವಚಂಡಿಕಾ ಯಾಗ’ ಹೇಗೆ ನಡೆಸ್ತಾರೆ.. ಇದರ ಮಹತ್ವದ ಬಗ್ಗೆ ಗೂರೂಜಿ ಹೇಳುವುದೇನು?

2015ರಲ್ಲಿ ಸೂರ್ಯಕುಮಾರ್​ ಯಾದವ್​ ಮುಂಬೈ ತಂಡದ ನಾಯಕನ ಪಟ್ಟಕ್ಕೇರಿದ್ರು. ಆಗ ಸೂರ್ಯ ನಾಯಕತ್ವ ತೀವ್ರ ಟೀಕೆಗೆ ಗುರಿಯಾಗಿತ್ತು. ತಂಡದ ಸಹ ಆಟಗಾರರು ಸೂರ್ಯನ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಮೈದಾನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸ್ತಾರೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ದಬ್ಬಾಳಿಕೆ ನಡೆಸ್ತಾರೆ ಎಂದು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ಗೆ ದೂರು ನೀಡಿದ್ರು. ಇದ್ರ ಬೆನ್ನಲ್ಲೇ MCA ಸೂರ್ಯನನ್ನ ನಾಯಕತ್ವದಿಂದ ಕಿತ್ತು ಹಾಕಿತ್ತು. ಹೀಗಾಗಿ ಇದೀಗ ಸೂರ್ಯ ಟೀಮ್​ ಇಂಡಿಯಾದ ಸಾರಥ್ಯವಹಿಸಿದ ಬಳಿಕ, ಡ್ರೆಸ್ಸಿಂಗ್​ ರೂಮ್​ನ ವಾತಾವರಣ ಮುಂದೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸೂರ್ಯ ಕ್ಯಾಪ್ಟನ್ ಆದ್ರೆ ದಬ್ಬಾಳಿಕೆ ಮಾಡ್ತಾರಾ.. ಅವಾಚ್ಯ ಶಬ್ದಗಳಿಂದ ನಿಂದಿಸ್ತಾರಾ; ಏನಿದು ಸ್ಟೋರಿ?

https://newsfirstlive.com/wp-content/uploads/2024/07/SURYA-1-1.jpg

    ಸೂರ್ಯಕುಮಾರ್ ವಿರುದ್ಧ ಕೇಳಿ ಬಂದ ಆರೋಪಗಳೇನು?

    ಶ್ರೀಲಂಕಾ ವಿರುದ್ಧ ಟಿ20 ಸರಣಿ ಆಡಲಿರೋ ಭಾರತ ತಂಡ

    ಸೂರ್ಯಕುಮಾರ್​ ನಾಯಕತ್ವದ ಮೇಲೆ ಹದ್ದಿನ ಕಣ್ಣು..!

ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಕ್ಯಾಪ್ಟನ್​ ಸೂರ್ಯಕುಮಾರ್​ ನಡೆಯ ಬಗ್ಗೆ ತೀವ್ರ ಚರ್ಚೆ ಶುರುವಾಗಿದೆ. 2015ರಲ್ಲಿ ನಡೆದ ಆ ಒಂದು ಘಟನೆ ಟೀಮ್​ ಇಂಡಿಯಾದ ಡ್ರೆಸ್ಸಿಂಗ್​ರೂಮ್​ ವಾತಾವರಣ ಹೇಗಿರಲಿದೆ ಅನ್ನೋ ಕುತೂಹಲ ಹುಟ್ಟಿಸಿದೆ.

ಇದನ್ನೂ ಓದಿ: KRS ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ರಿಲೀಸ್.. ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ​

ಟೀಮ್​ ಇಂಡಿಯಾದ ನೂತನ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​, ಮೊದಲ ಅಗ್ನಿ ಪರೀಕ್ಷೆಗೆ ಸಜ್ಜಾಗಿದ್ದಾರೆ. ಟೀಮ್​ ಇಂಡಿಯಾಗೆ ಕಾಲಿಟ್ಟ ಮೂರೇ ವರ್ಷಕ್ಕೆ ಟಿ20 ನಾಯಕನ ಪಟ್ಟ ಅಲಂಕರಿಸಿರೋ ನೂತನ ನಾಯಕನ ಅಡಿಯಲ್ಲಿ ಲಂಕಾ ದಹನಕ್ಕೆ ಟೀಮ್​ ಇಂಡಿಯಾ ರೆಡಿಯಾಗಿದೆ. ನಾಳೆಯಿಂದ ಟಿ20 ಸರಣಿ ಆರಂಭವಾಗಲಿದ್ದು, ಸೂರ್ಯಕುಮಾರ್​ ನಾಯಕತ್ವದ ಮೇಲೆ ಎಲ್ಲರ ಹದ್ದಿನ ಕಣ್ಣಿದೆ. 2015ರಲ್ಲಿ ನಡೆದ ಆ ಒಂದು ಘಟನೆ ಸೂರ್ಯನ ನಡೆ ಹೇಗಿರಲಿದೆ ಅನ್ನೋ ಕುತೂಹಲ ಹೆಚ್ಚಿಸಿದೆ.

ಇದನ್ನೂ ಓದಿ: ದರ್ಶನ್​ ಪತ್ನಿ ವಿಜಯಲಕ್ಷ್ಮಿ ‘ನವಚಂಡಿಕಾ ಯಾಗ’ ಹೇಗೆ ನಡೆಸ್ತಾರೆ.. ಇದರ ಮಹತ್ವದ ಬಗ್ಗೆ ಗೂರೂಜಿ ಹೇಳುವುದೇನು?

2015ರಲ್ಲಿ ಸೂರ್ಯಕುಮಾರ್​ ಯಾದವ್​ ಮುಂಬೈ ತಂಡದ ನಾಯಕನ ಪಟ್ಟಕ್ಕೇರಿದ್ರು. ಆಗ ಸೂರ್ಯ ನಾಯಕತ್ವ ತೀವ್ರ ಟೀಕೆಗೆ ಗುರಿಯಾಗಿತ್ತು. ತಂಡದ ಸಹ ಆಟಗಾರರು ಸೂರ್ಯನ ವಿರುದ್ಧ ಗಂಭೀರ ಆರೋಪ ಮಾಡಿದ್ರು. ಮೈದಾನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸ್ತಾರೆ. ಡ್ರೆಸ್ಸಿಂಗ್​ ರೂಮ್​ನಲ್ಲಿ ದಬ್ಬಾಳಿಕೆ ನಡೆಸ್ತಾರೆ ಎಂದು ಮುಂಬೈ ಕ್ರಿಕೆಟ್​ ಅಸೋಸಿಯೇಷನ್​ಗೆ ದೂರು ನೀಡಿದ್ರು. ಇದ್ರ ಬೆನ್ನಲ್ಲೇ MCA ಸೂರ್ಯನನ್ನ ನಾಯಕತ್ವದಿಂದ ಕಿತ್ತು ಹಾಕಿತ್ತು. ಹೀಗಾಗಿ ಇದೀಗ ಸೂರ್ಯ ಟೀಮ್​ ಇಂಡಿಯಾದ ಸಾರಥ್ಯವಹಿಸಿದ ಬಳಿಕ, ಡ್ರೆಸ್ಸಿಂಗ್​ ರೂಮ್​ನ ವಾತಾವರಣ ಮುಂದೆ ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More