1 ರನ್ ಬೇಕಿದ್ದಾಗ 2 ವಿಕೆಟ್ ಕೈಚೆಲ್ಲಿದ ಇಂಡಿಯಾ!
ಲಂಕಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್
ನಿಸ್ಸಾಂಕಾ ಫಿಫ್ಟಿ.. ವೆಲ್ಲಾಲಗೆ ಆಲ್ರೌಂಡರ್ ಆಟ
ಚುಟುಕು ಸರಣಿ ಕ್ಲೀನ್ಸ್ವೀಪ್ ಮಾಡಿದ ಟೀಮ್ ಇಂಡಿಯಾ, ಏಕದಿನ ಸರಣಿಯಲ್ಲೂ ಶುಭಾರಂಭ ಮಾಡುವ ಕನಸು ಭಗ್ನವಾಯ್ತು. ಕೊಲಂಬೋದಲ್ಲಿ ಕಮಾಲ್ ಮಾಡೋ ಲೆಕ್ಕಚಾರ ಉಲ್ಟಾ ಆಯ್ತು. ಹಾವು ಏಣಿಯಂತೆ ಸಾಗಿದ ಈ ಪಂದ್ಯದಲ್ಲಿ ಕೊನೆಯಲ್ಲಿ ಮೇಲುಗೈ ಸಾಧಿಸಿದ ಶ್ರೀಲಂಕಾ, ಪಂದ್ಯವನ್ನ ಟೈ ಮಾಡಿಕೊಳ್ತು.
ಹಾಫ್ ಸೆಂಚುರಿ ಸಿಡಿಸಿ ಮಿಂಚಿದ ನಿಸ್ಸಾಂಕ
ಪಂದ್ಯದಲ್ಲಿ ಟಾಸ್ ಗೆದ್ದು ಬಿಗ್ಸ್ಕೋರ್ ಕಲೆ ಹಾಕೋ ಲೆಕ್ಕಾಚಾರದಲ್ಲಿ ಬ್ಯಾಟಿಂಗ್ಗಿಳಿದ ಶ್ರೀಲಂಕಾ ಆರಂಭದಲ್ಲೇ ಶಾಕ್ ಎದುರಿಸಿತು. ಅವಿಷ್ಕಾ ಫರ್ನಾಂಡೋ ಸಿರಾಜ್ಗೆ ಸುಲಭದ ಬಲಿಯಾದ್ರು. ಬಳಿಕ ಕಣಕ್ಕಿಳಿದ ಕುಸಾಲ್ ಮೆಂಡಿಸ್ ಆಟ 14 ರನ್ಗಳಿಗೆ ಅಂತ್ಯವಾಯ್ತು. ಸಮರವಿಕ್ರಮ, ಕ್ಯಾಪ್ಟನ್ ಚರಿತ ಅಸಲಂಕ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. ಪರಿಣಾಮ ಲಂಕಾ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ದಿಟ್ಟ ಹೋರಾಟ ನಡೆಸಿದ ಫಾತುಮ್ ನಿಸ್ಸಾಂಕ ಹಾಫ್ ಸೆಂಚುರಿ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಆದ್ರೆ, ಹಾಫ್ ಸೆಂಚುರಿ ಪೂರೈಸಿದ ಬೆನ್ನಲ್ಲೇ ನಿಸ್ಸಾಂಕ, ವಾಷಿಂಗ್ಟನ್ ಸುಂದರ್ ಸ್ಪಿನ್ ಬಲೆಗೆ ಬೀಳಿಸಿದರು.
ಇದನ್ನೂ ಓದಿ:ಪಿಎಸ್ಐ ಪರಶುರಾಮ ಸಾವು; ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಮೃತ ಅಧಿಕಾರಿಯ ಪತ್ನಿಯೂ ಭಾಗಿ
ಸಾಲಿಡ್ ಇನ್ನಿಂಗ್ಸ್ ಕಟ್ಟಿದ ದುನಿತ್ ವೆಲ್ಲಲಗೆ
ಲಂಕಾಗೆ ಜನಿತ್ ಲಿಯನಗೆ, ದುನಿತ್ ವೆಲ್ಲಲಗೆ 41 ರನ್ಗಳ ಜೊತೆಯಾಟದೊಂದಿಗೆ ಚೇತರಿಕೆ ನೀಡಲು ಯತ್ನಿಸಿದರು. ಅಕ್ಷರ್ ಪಟೇಲ್ ಅದಕ್ಕೆ ಅವಕಾಶ ನೀಡಲಿಲ್ಲ. 20 ರನ್ಗಳಿಸಿ ಜನಿತ್ ಔಟಾದರೆ, ಬಳಿಕ ಬಂದ ವನಿಂದು ಹಸರಂಗ 24, ಅಖಿಲ ಧನಂಜಯ 17 ರನ್ಗಳ ಕೊಡುಗೆ ನೀಡುವ ಮೂಲಕ ಧುನಿತ್ ವೆಲ್ಲಲಗೆಗೆ ಸಾಥ್ ನೀಡಿದರು. ಟೀಮ್ ಇಂಡಿಯಾ ಬೌಲರ್ಗಳನ್ನ ದಿಟ್ಟವಾಗಿ ಎದುರಿಸಿದ ವೆಲ್ಲಲಗೆ ಅಜೇಯ 67 ರನ್ಗಳ ಸಾಲಿಡ್ ಇನ್ನಿಂಗ್ಸ್ ಕಟ್ಟಿದ್ರು. ಪರಿಣಾಮ ಶ್ರೀಲಂಕಾ 50 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 230 ರನ್ಗಳಿಸಿತು.
ಕೊಲಂಬೋದಲ್ಲಿ ರೋಹಿತ್ ಉಗ್ರಾವತಾರ
231 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾಗೆ ಸಾಲಿಡ್ ಓಪನಿಂಗ್ ಸಿಗ್ತು. ಸಿಕ್ಸ್ ಸಿಡಿಸಿ ಅಕೌಂಟ್ ಓಪನ್ ಮಾಡಿದ ರೋಹಿತ್ ಶರ್ಮಾ, 33 ಎಸೆತಕ್ಕೆ ಹಾಫ್ ಸೆಂಚುರಿ ಕಂಪ್ಲೀಟ್ ಮಾಡಿದ್ರು. 7 ಬೌಂಡರಿ, 3 ಸಿಕ್ಸರ್ ಸಹಿತ 58 ರನ್ ಚಚ್ಚಿದ್ರು.
ಇದನ್ನೂ ಓದಿ:‘ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ..’ ಪಿಎಸ್ಐ ಪರಶುರಾಮ್ ಪತ್ನಿ ಕಣ್ಣೀರು
ಅಬ್ಬರದ ಆರಂಭ.. ಬಳಿಕ ದಿಢೀರ್ ಕುಸಿತ
ರನ್ಗಳಿಕೆಗೆ ತಿಣುಕಾಡಿದ ಶುಭ್ಮನ್ ಗಿಲ್ 35 ಎಸೆತ ಎದುರಿಸಿ 16 ರನ್ಗಳಿಸಿ ಔಟಾದ್ರೆ, ಇದ್ರ ಬೆನ್ನಲ್ಲೇ ರೋಹಿತ್ ಶರ್ಮಾ ಪೆವಿಲಿಯನ್ ಸೇರಿದ್ರು. ವಾಷಿಂಗ್ಟನ್ ಸುಂದರ್ 1 ಬೌಂಡರಿಗೆ ಸುಸ್ತಾದರು. ಬಿಗ್ ಇನ್ನಿಂಗ್ಸ್ ಕಟ್ಟುವ ಭರವಸೆ ಮೂಡಿದ್ದ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ನಿರಾಸೆ ಮೂಡಿಸಿದರು. ವಿಕೆಟ್ ನಷ್ಟವಿಲ್ಲದೇ 75 ರನ್ಗಳಿಸಿದ್ದ ಟೀಮ್ ಇಂಡಿಯಾ, 132 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಳ್ತು. ಸಂಕಷ್ಟಕ್ಕೆ ಸಿಲುಕಿತ್ತು.
ರಾಹುಲ್-ಅಕ್ಷರ್ ತಾಳ್ಮೆಯ ಆಟಕ್ಕೆ ಲಂಕಾ ಕಂಗಾಲ್
ಸತತ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾಗೆ ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್ ಆಸರೆಯಾದ್ರು. ಶ್ರೀಲಂಕಾ ಮೇಲುಗೈ ಸಾಧಿಸಿದ್ದ ಸಂದರ್ಭದಲ್ಲಿ ತಾಳ್ಮೆಯ ಆಟವಾಡಿದ ಜೋಡಿ 57 ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ರಾಹುಲ್ 31 ರನ್ಗಳಿಸಿದ್ರೆ, ಅಕ್ಷರ್ ಪಟೇಲ್ 33 ರನ್ಗಳಿಸಿ ಔಟಾದ್ರು.
ಗೆಲುವಿನ ಆಸೆ ಚಿಗುರಿಸಿದ್ದ ಶಿವಂ ದುಬೆ
ಆಕ್ಷರ್ ಔಟಾದರೂ ಶಿವಂ ದುಬೆ ಗೆಲುವಿನ ಆಸೆ ಜೀವಂತವಾಗಿರಿಸಿದ್ದರು. 2 ಸಿಕ್ಸರ್, 1 ಬೌಂಡರಿ ಒಳಗೊಂಡ 25 ರನ್ ಸಿಡಿಸಿದ್ದ ಶಿವಂ ದುಬೆ, ಪಂದ್ಯವನ್ನು ಟೈ ಮಾಡಿಕೊಂಡಿದ್ದರು. ಇನ್ನೇನು ಟೀಮ್ ಇಂಡಿಯಾ ಗೆದ್ದೇ ಬಿಟ್ಟಿತು ಎಂಬ ನಿರೀಕ್ಷೆಯಲ್ಲೇ ಇತ್ತು.
ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ..?
ಅನಿರೀಕ್ಷಿತ ತಿರುವು ನೀಡಿದ್ದೇ ಅಸಲಂಕಾ..!
48ನೇ ಓವರ್ನ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಶಿವಂ ದುಬೆ, ಪಂದ್ಯವನ್ನೈ ಟೈ ಮಾಡಿಕೊಂಡಿದ್ದರು. 15 ಎಸೆತಗಳಲ್ಲಿ 1 ರನ್ ಗಳಿಸಬೇಕಾದ ಸವಾಲು ಟೀಮ್ ಇಂಡಿಯಾ ಮುಂದಿತ್ತು. ಬಿಗ್ ಹಿಟ್ಟರ್ ಶಿವಂ ದುಬೆ ಕ್ರೀಸ್ನಲ್ಲಿದ್ದರು. ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಗೆಲುವಿನ ಆಸೆ ಮೂಡಿತ್ತು. ಇದೇ ಓವರ್ನ 4ನೇ ಎಸೆತದಲ್ಲೇ ಅಸಲಂಕಾ, ಶಿವಂ ದುಬೆ ವಿಕೆಟ್ ಪಡೆದು ಶಾಕ್ ನೀಡಿದರು.
ಈ ಬಳಿಕ ಬಂದ ಅರ್ಷದೀಪ್, ಸಿಂಗಲ್ ರನ್ ಹೊಡೆದಾದ್ರು ಗೆಲ್ಲಿಸ್ತಾರೆ ಅನ್ನೋ ನಿರೀಕ್ಷಕ್ಷೆ ಇತ್ತು. ಭಾರೀ ಹೊಡೆತಕ್ಕೆ ಕೈ ಹಾಕಿದ ಅರ್ಷದೀಪ್ ಸಿಂಗ್, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಗೆಲ್ಲಬೇಕಿದ್ದ ಪಂದ್ಯ ಟೈನಲ್ಲೇ ಅಂತ್ಯವಾಯ್ತು. ಸ್ವಯಃಕೃತ ಅಪರಾಧಕ್ಕೆ ಬೆಲೆ ತೆತ್ತುವಂತಾಯ್ತು.
ಇದನ್ನೂ ಓದಿ:ವರ್ಗಾವಣೆಗೊಂಡಿದ್ದ PSI ಪರಶುರಾಮ ಹಠಾತ್ ಸಾವು; ಕುಟುಂಬಸ್ಥರಿಂದ ಗಂಭೀರ ಆರೋಪ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
1 ರನ್ ಬೇಕಿದ್ದಾಗ 2 ವಿಕೆಟ್ ಕೈಚೆಲ್ಲಿದ ಇಂಡಿಯಾ!
ಲಂಕಾ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್
ನಿಸ್ಸಾಂಕಾ ಫಿಫ್ಟಿ.. ವೆಲ್ಲಾಲಗೆ ಆಲ್ರೌಂಡರ್ ಆಟ
ಚುಟುಕು ಸರಣಿ ಕ್ಲೀನ್ಸ್ವೀಪ್ ಮಾಡಿದ ಟೀಮ್ ಇಂಡಿಯಾ, ಏಕದಿನ ಸರಣಿಯಲ್ಲೂ ಶುಭಾರಂಭ ಮಾಡುವ ಕನಸು ಭಗ್ನವಾಯ್ತು. ಕೊಲಂಬೋದಲ್ಲಿ ಕಮಾಲ್ ಮಾಡೋ ಲೆಕ್ಕಚಾರ ಉಲ್ಟಾ ಆಯ್ತು. ಹಾವು ಏಣಿಯಂತೆ ಸಾಗಿದ ಈ ಪಂದ್ಯದಲ್ಲಿ ಕೊನೆಯಲ್ಲಿ ಮೇಲುಗೈ ಸಾಧಿಸಿದ ಶ್ರೀಲಂಕಾ, ಪಂದ್ಯವನ್ನ ಟೈ ಮಾಡಿಕೊಳ್ತು.
ಹಾಫ್ ಸೆಂಚುರಿ ಸಿಡಿಸಿ ಮಿಂಚಿದ ನಿಸ್ಸಾಂಕ
ಪಂದ್ಯದಲ್ಲಿ ಟಾಸ್ ಗೆದ್ದು ಬಿಗ್ಸ್ಕೋರ್ ಕಲೆ ಹಾಕೋ ಲೆಕ್ಕಾಚಾರದಲ್ಲಿ ಬ್ಯಾಟಿಂಗ್ಗಿಳಿದ ಶ್ರೀಲಂಕಾ ಆರಂಭದಲ್ಲೇ ಶಾಕ್ ಎದುರಿಸಿತು. ಅವಿಷ್ಕಾ ಫರ್ನಾಂಡೋ ಸಿರಾಜ್ಗೆ ಸುಲಭದ ಬಲಿಯಾದ್ರು. ಬಳಿಕ ಕಣಕ್ಕಿಳಿದ ಕುಸಾಲ್ ಮೆಂಡಿಸ್ ಆಟ 14 ರನ್ಗಳಿಗೆ ಅಂತ್ಯವಾಯ್ತು. ಸಮರವಿಕ್ರಮ, ಕ್ಯಾಪ್ಟನ್ ಚರಿತ ಅಸಲಂಕ ಬಂದಷ್ಟೇ ವೇಗವಾಗಿ ಪೆವಿಲಿಯನ್ ಸೇರಿದ್ರು. ಪರಿಣಾಮ ಲಂಕಾ ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ದಿಟ್ಟ ಹೋರಾಟ ನಡೆಸಿದ ಫಾತುಮ್ ನಿಸ್ಸಾಂಕ ಹಾಫ್ ಸೆಂಚುರಿ ಸಿಡಿಸಿ ತಂಡಕ್ಕೆ ಚೇತರಿಕೆ ನೀಡಿದ್ರು. ಆದ್ರೆ, ಹಾಫ್ ಸೆಂಚುರಿ ಪೂರೈಸಿದ ಬೆನ್ನಲ್ಲೇ ನಿಸ್ಸಾಂಕ, ವಾಷಿಂಗ್ಟನ್ ಸುಂದರ್ ಸ್ಪಿನ್ ಬಲೆಗೆ ಬೀಳಿಸಿದರು.
ಇದನ್ನೂ ಓದಿ:ಪಿಎಸ್ಐ ಪರಶುರಾಮ ಸಾವು; ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ, ಮೃತ ಅಧಿಕಾರಿಯ ಪತ್ನಿಯೂ ಭಾಗಿ
ಸಾಲಿಡ್ ಇನ್ನಿಂಗ್ಸ್ ಕಟ್ಟಿದ ದುನಿತ್ ವೆಲ್ಲಲಗೆ
ಲಂಕಾಗೆ ಜನಿತ್ ಲಿಯನಗೆ, ದುನಿತ್ ವೆಲ್ಲಲಗೆ 41 ರನ್ಗಳ ಜೊತೆಯಾಟದೊಂದಿಗೆ ಚೇತರಿಕೆ ನೀಡಲು ಯತ್ನಿಸಿದರು. ಅಕ್ಷರ್ ಪಟೇಲ್ ಅದಕ್ಕೆ ಅವಕಾಶ ನೀಡಲಿಲ್ಲ. 20 ರನ್ಗಳಿಸಿ ಜನಿತ್ ಔಟಾದರೆ, ಬಳಿಕ ಬಂದ ವನಿಂದು ಹಸರಂಗ 24, ಅಖಿಲ ಧನಂಜಯ 17 ರನ್ಗಳ ಕೊಡುಗೆ ನೀಡುವ ಮೂಲಕ ಧುನಿತ್ ವೆಲ್ಲಲಗೆಗೆ ಸಾಥ್ ನೀಡಿದರು. ಟೀಮ್ ಇಂಡಿಯಾ ಬೌಲರ್ಗಳನ್ನ ದಿಟ್ಟವಾಗಿ ಎದುರಿಸಿದ ವೆಲ್ಲಲಗೆ ಅಜೇಯ 67 ರನ್ಗಳ ಸಾಲಿಡ್ ಇನ್ನಿಂಗ್ಸ್ ಕಟ್ಟಿದ್ರು. ಪರಿಣಾಮ ಶ್ರೀಲಂಕಾ 50 ಓವರ್ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 230 ರನ್ಗಳಿಸಿತು.
ಕೊಲಂಬೋದಲ್ಲಿ ರೋಹಿತ್ ಉಗ್ರಾವತಾರ
231 ರನ್ಗಳ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾಗೆ ಸಾಲಿಡ್ ಓಪನಿಂಗ್ ಸಿಗ್ತು. ಸಿಕ್ಸ್ ಸಿಡಿಸಿ ಅಕೌಂಟ್ ಓಪನ್ ಮಾಡಿದ ರೋಹಿತ್ ಶರ್ಮಾ, 33 ಎಸೆತಕ್ಕೆ ಹಾಫ್ ಸೆಂಚುರಿ ಕಂಪ್ಲೀಟ್ ಮಾಡಿದ್ರು. 7 ಬೌಂಡರಿ, 3 ಸಿಕ್ಸರ್ ಸಹಿತ 58 ರನ್ ಚಚ್ಚಿದ್ರು.
ಇದನ್ನೂ ಓದಿ:‘ಮಗು ಅಪ್ಪ ಎಲ್ಲಿ ಎಂದು ಕೇಳಿದ್ರೆ ನಾನು ಏನ್ ಹೇಳಲಿ..’ ಪಿಎಸ್ಐ ಪರಶುರಾಮ್ ಪತ್ನಿ ಕಣ್ಣೀರು
ಅಬ್ಬರದ ಆರಂಭ.. ಬಳಿಕ ದಿಢೀರ್ ಕುಸಿತ
ರನ್ಗಳಿಕೆಗೆ ತಿಣುಕಾಡಿದ ಶುಭ್ಮನ್ ಗಿಲ್ 35 ಎಸೆತ ಎದುರಿಸಿ 16 ರನ್ಗಳಿಸಿ ಔಟಾದ್ರೆ, ಇದ್ರ ಬೆನ್ನಲ್ಲೇ ರೋಹಿತ್ ಶರ್ಮಾ ಪೆವಿಲಿಯನ್ ಸೇರಿದ್ರು. ವಾಷಿಂಗ್ಟನ್ ಸುಂದರ್ 1 ಬೌಂಡರಿಗೆ ಸುಸ್ತಾದರು. ಬಿಗ್ ಇನ್ನಿಂಗ್ಸ್ ಕಟ್ಟುವ ಭರವಸೆ ಮೂಡಿದ್ದ ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ನಿರಾಸೆ ಮೂಡಿಸಿದರು. ವಿಕೆಟ್ ನಷ್ಟವಿಲ್ಲದೇ 75 ರನ್ಗಳಿಸಿದ್ದ ಟೀಮ್ ಇಂಡಿಯಾ, 132 ರನ್ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್ ಕಳೆದುಕೊಳ್ತು. ಸಂಕಷ್ಟಕ್ಕೆ ಸಿಲುಕಿತ್ತು.
ರಾಹುಲ್-ಅಕ್ಷರ್ ತಾಳ್ಮೆಯ ಆಟಕ್ಕೆ ಲಂಕಾ ಕಂಗಾಲ್
ಸತತ ವಿಕೆಟ್ ಕಳೆದುಕೊಂಡ ಟೀಮ್ ಇಂಡಿಯಾಗೆ ಕೆ.ಎಲ್ ರಾಹುಲ್, ಅಕ್ಷರ್ ಪಟೇಲ್ ಆಸರೆಯಾದ್ರು. ಶ್ರೀಲಂಕಾ ಮೇಲುಗೈ ಸಾಧಿಸಿದ್ದ ಸಂದರ್ಭದಲ್ಲಿ ತಾಳ್ಮೆಯ ಆಟವಾಡಿದ ಜೋಡಿ 57 ರನ್ಗಳಿಸಿ ತಂಡಕ್ಕೆ ಚೇತರಿಕೆ ನೀಡಿದರು. ರಾಹುಲ್ 31 ರನ್ಗಳಿಸಿದ್ರೆ, ಅಕ್ಷರ್ ಪಟೇಲ್ 33 ರನ್ಗಳಿಸಿ ಔಟಾದ್ರು.
ಗೆಲುವಿನ ಆಸೆ ಚಿಗುರಿಸಿದ್ದ ಶಿವಂ ದುಬೆ
ಆಕ್ಷರ್ ಔಟಾದರೂ ಶಿವಂ ದುಬೆ ಗೆಲುವಿನ ಆಸೆ ಜೀವಂತವಾಗಿರಿಸಿದ್ದರು. 2 ಸಿಕ್ಸರ್, 1 ಬೌಂಡರಿ ಒಳಗೊಂಡ 25 ರನ್ ಸಿಡಿಸಿದ್ದ ಶಿವಂ ದುಬೆ, ಪಂದ್ಯವನ್ನು ಟೈ ಮಾಡಿಕೊಂಡಿದ್ದರು. ಇನ್ನೇನು ಟೀಮ್ ಇಂಡಿಯಾ ಗೆದ್ದೇ ಬಿಟ್ಟಿತು ಎಂಬ ನಿರೀಕ್ಷೆಯಲ್ಲೇ ಇತ್ತು.
ಇದನ್ನೂ ಓದಿ:ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ದೇಕೆ..?
ಅನಿರೀಕ್ಷಿತ ತಿರುವು ನೀಡಿದ್ದೇ ಅಸಲಂಕಾ..!
48ನೇ ಓವರ್ನ 3ನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಶಿವಂ ದುಬೆ, ಪಂದ್ಯವನ್ನೈ ಟೈ ಮಾಡಿಕೊಂಡಿದ್ದರು. 15 ಎಸೆತಗಳಲ್ಲಿ 1 ರನ್ ಗಳಿಸಬೇಕಾದ ಸವಾಲು ಟೀಮ್ ಇಂಡಿಯಾ ಮುಂದಿತ್ತು. ಬಿಗ್ ಹಿಟ್ಟರ್ ಶಿವಂ ದುಬೆ ಕ್ರೀಸ್ನಲ್ಲಿದ್ದರು. ಟೀಮ್ ಇಂಡಿಯಾ ಕ್ಯಾಂಪ್ನಲ್ಲಿ ಗೆಲುವಿನ ಆಸೆ ಮೂಡಿತ್ತು. ಇದೇ ಓವರ್ನ 4ನೇ ಎಸೆತದಲ್ಲೇ ಅಸಲಂಕಾ, ಶಿವಂ ದುಬೆ ವಿಕೆಟ್ ಪಡೆದು ಶಾಕ್ ನೀಡಿದರು.
ಈ ಬಳಿಕ ಬಂದ ಅರ್ಷದೀಪ್, ಸಿಂಗಲ್ ರನ್ ಹೊಡೆದಾದ್ರು ಗೆಲ್ಲಿಸ್ತಾರೆ ಅನ್ನೋ ನಿರೀಕ್ಷಕ್ಷೆ ಇತ್ತು. ಭಾರೀ ಹೊಡೆತಕ್ಕೆ ಕೈ ಹಾಕಿದ ಅರ್ಷದೀಪ್ ಸಿಂಗ್, ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಗೆಲ್ಲಬೇಕಿದ್ದ ಪಂದ್ಯ ಟೈನಲ್ಲೇ ಅಂತ್ಯವಾಯ್ತು. ಸ್ವಯಃಕೃತ ಅಪರಾಧಕ್ಕೆ ಬೆಲೆ ತೆತ್ತುವಂತಾಯ್ತು.
ಇದನ್ನೂ ಓದಿ:ವರ್ಗಾವಣೆಗೊಂಡಿದ್ದ PSI ಪರಶುರಾಮ ಹಠಾತ್ ಸಾವು; ಕುಟುಂಬಸ್ಥರಿಂದ ಗಂಭೀರ ಆರೋಪ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್