ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಧ್ಯೆ ತಾರಕಕ್ಕೇರಿದ ಬಂಡೆ ವಾರ್!
ಬಂಡೆ ಸಿದ್ದರಾಮಯ್ಯರ ಜೊತೆ ಇದೆ ಎಂದಿದ್ದ ಡಿಕೆಶಿಗೆ ಹೆಚ್ಡಿಕೆ ಟಾಂಗ್
ಬಂಡೆ ನಂಬಿ ಹೋಗಿದ್ದಕ್ಕೆ ನನ್ನ ತಲೆ ಮೇಲೆ ಬಂಡೆ ಬಿತ್ತು ಅಂತ ಕೌಂಟರ್
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಕೈಗೊಂಡಿದ್ದ ಪಾದಯಾತ್ರೆ ಮೈಸೂರಲ್ಲಿ ಸಮಾರೋಪಗೊಂಡಿದೆ. ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಡಿಕೆಶಿ ವಿರುದ್ಧ ಅಕ್ಷರಶಃ ಸಿಡಿಲಂತೆ ಸಿಡಿದಿದ್ದಾರೆ. ತಮ್ಮ ವಿರುದ್ಧ ಮಾತನಾಡಿದ ಡಿ.ಕೆ ಶಿವಕುಮಾರ್ ಅವರ ಒಂದೊಂದು ಮಾತಿಗೂ ಹೆಚ್ಡಿಕೆ ಗುಂಡು ಸಿಡಿದಂತೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಮೈತ್ರಿ ಪಾದಯಾತ್ರೆ: ಸಿದ್ದು-ಡಿಕೆಶಿಯ ಒಂದೊಂದು ಮಾತಿಗೂ ಇಂದು ಪ್ರತಿಬಾಣ ಪ್ರಯೋಗ..!
ಡಿ.ಕೆ. ಶಿವಕುಮಾರ್ಗೆ ನಾನು ನಾಗರಹಾವೇ
ನನ್ನನ್ನು ನಾಗರಹಾವು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಜರಿದಿದ್ದಾರೆ. ಹೌದು, ಈ ರಾಜ್ಯವನ್ನು ಲೂಟಿ ಮಾಡುತ್ತಿರುವ, ಬಡ ಕುಟುಂಬದ ಹೆಣ್ಣು ಮಕ್ಕಳ ಆಸ್ತಿಯನ್ನು ಲಪಟಾಯಿಸುತ್ತಿರುವ ಡಿ.ಕೆ ಶಿವಕುಮಾರ್ಗೆ ನಾನು ನಾಗರಹಾವೇ ಎಂದು ಕುಮಾರಸ್ವಾಮಿ ಗುಡುಗಿದ್ರು.
“ಬಂಡೆ ಸಿದ್ದರಾಮಯ್ಯನ ಮೇಲೆ ಬಿದ್ರೆ ಕಥೆ ಏನು”
ಸಿದ್ದರಾಮ್ಯನವರಿಗೆ ಕಾವಲಾಗಿ ನಾನು ಬಂಡೆಯಂತೆ ನಿಂತಿದ್ದೇನೆ ಎಂಬ ಡಿಕೆಶಿ ಮಾತಿಗೆ ಕೆಂಡವುಗಳಿದ ಹೆಚ್. ಡಿ ಕುಮಾರಸ್ವಾಮಿ, ಆ ಬಂಡೆಯನ್ನು ಜೊತೆಗಿಟ್ಟುಕೊಂಡಿದ್ದಕ್ಕೆ ನಾನು ಹೀಗಾಗಿದ್ದು. ಆವತ್ತು ಬಂಡೆಯನ್ನು ಬದಿಗೆ ಇಟ್ಟಿದ್ದರೆ ನನಗೆ ಈ ಸ್ಥಿತಿ ಬರುತ್ತಿಲ್ಲ. ಕಾವಲಿದ್ದ ಬಂಡೆ ಸಿದ್ದರಾಮಯ್ಯನವರ ಮೇಲೆ ಬಿದ್ದರೆ ಸಿದ್ದರಾಮಯ್ಯನವರ ಗತಿಯೇನು ಎಂದು ಕೇಂದ್ರ ಸಚಿವ ಲೇವಡಿ ಮಾಡಿದ್ರು
ಇದನ್ನೂ ಓದಿ: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ.. ಏನದು..?
ಹೀಗೆ ಒಂದಾದ ನಂತರ ಒಂದು ಸಿಡಿಲಬ್ಬರದ ಮಾತುಗಳನ್ನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾನು 50 ಡಿನೋಟಿಫಿಕೇಶನ್ ಮಾಡಿದ್ದೇನೆ ಅಂತಾರೆ, ನಾಚಿಕೆ ಆಗಬೇಕು ಇವರಿಗೆ, ಒಂದೇ ಒಂದು ಅಕ್ರಮವನ್ನು ಇಲ್ಲಿಯವರೆಗೂ ಇವರಿಗೆ ಹೊರ ತೆಗೆಯಲು ಆಗಿಲ್ಲ. ಕೆಲಸಕ್ಕೆ ಬಾರದ ಮಾತುಗಳನ್ನು ಆಡಿಕೊಂಡು ಕುಳಿತಿದ್ದೀರಿ . ನನ್ನ ಮೇಲೆ ಆರೋಪ ಮಾಡಿದ್ದ ಪ್ರಕರಣ ಕೋರ್ಟ್ನಲ್ಲಿದೆ. ನನ್ನ ರಾಜೀನಾಮೆ ಕೇಳುತ್ತಾರೆ. ಯಾವ ಕಾರಣಕ್ಕೆ ನಾನು ರಾಜೀನಾಮೆ ಕೊಡಬೇಕು, ಸಾಯಿ ವೆಂಕಟೇಶ್ವರ, ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ನನ್ನ ಹೆಸರು ತೆಗೆಯುತ್ತೀರಿ, ನಾನು ಏನು ಮಾಡಿದ್ದೇನೆ. ನನ್ನ ಮೇಲೆ ಕಣ್ಣು ಹಾಕಿದ್ರೆ ಶಿವಕುಮಾರ್ ಸರ್ವನಾಶ ಆಗುವ ಕಾಲ ದೂರವಿಲ್ಲ ಅಂತ ಕುಮಾರಸ್ವಾಮಿ ಅಕ್ಷರಶಃ ಡಿಕೆಶಿ ವಿರುದ್ಧ ಹರಿಹಾಯ್ದರು.
ಸಿದ್ಧಾರ್ಥ ಸಾವಿನ ಹಿಂದಿನ ರಹಸ್ಯ ಹೇಳುತ್ತೀರಾ ?
ಮಲ್ಲಿಕಾರ್ಜುನ್ ಖರ್ಗೆ ಅವರ ಅಣ್ಣನ ಮಗನನ್ನ ಜೈಲಿಗೆ ಕಳುಹಿಸಿದ್ದೇವೆ ಎಂದು ಹೇಳುವ ನೀವು ಸಿದ್ಧಾರ್ಥ ಸಾವಿನ ಹಿಂದಿನ ರಹಸ್ಯ ಹೇಳುತ್ತೀರಾ, ದೇವೇಗೌಡರ ಆಸ್ತಿ ಬಗ್ಗೆ ಮಾತನಾಡುತ್ತಿರುವ ನಿಮಗೆ ಆ ನೈತಿಕತೆ ಇದೆಯಾ? ರೇವಣ್ಣನ ಕುಟುಂಬವನ್ನು ಏನು ಮಾಡಿದ್ರಿ, ಇಬ್ಬರು ಮಕ್ಕಳನ್ನು ಜೈಲಿನಲ್ಲಿಟ್ಟಿದ್ದರಿ. ನಾನು ನನ್ನ ಮಗನನ್ನು ಉಳಿಸಿಕೊಳ್ಳಲು ನನ್ನ ಅವರ ಮಕ್ಕಳನ್ನು ಬಲಿಕೊಟ್ಟಿದ್ದೇನೆ ಅಂತೀರಿ ಇದು ಕುತಂತ್ರ ಅಲ್ವೆ ಎಂದು ಡಿಕೆಶಿಗೆ ಸಾವಿರ ಪ್ರಶ್ನೆಗಳನ್ನು ಎಸೆದಿದ್ದಾರೆ ಹೆಚ್.ಡಿ ಕುಮಾರಸ್ವಾಮಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಡಿಕೆ ಶಿವಕುಮಾರ್, ಕುಮಾರಸ್ವಾಮಿ ಮಧ್ಯೆ ತಾರಕಕ್ಕೇರಿದ ಬಂಡೆ ವಾರ್!
ಬಂಡೆ ಸಿದ್ದರಾಮಯ್ಯರ ಜೊತೆ ಇದೆ ಎಂದಿದ್ದ ಡಿಕೆಶಿಗೆ ಹೆಚ್ಡಿಕೆ ಟಾಂಗ್
ಬಂಡೆ ನಂಬಿ ಹೋಗಿದ್ದಕ್ಕೆ ನನ್ನ ತಲೆ ಮೇಲೆ ಬಂಡೆ ಬಿತ್ತು ಅಂತ ಕೌಂಟರ್
ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಕೈಗೊಂಡಿದ್ದ ಪಾದಯಾತ್ರೆ ಮೈಸೂರಲ್ಲಿ ಸಮಾರೋಪಗೊಂಡಿದೆ. ಇಂದು ನಡೆದ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಡಿಕೆಶಿ ವಿರುದ್ಧ ಅಕ್ಷರಶಃ ಸಿಡಿಲಂತೆ ಸಿಡಿದಿದ್ದಾರೆ. ತಮ್ಮ ವಿರುದ್ಧ ಮಾತನಾಡಿದ ಡಿ.ಕೆ ಶಿವಕುಮಾರ್ ಅವರ ಒಂದೊಂದು ಮಾತಿಗೂ ಹೆಚ್ಡಿಕೆ ಗುಂಡು ಸಿಡಿದಂತೆ ಉತ್ತರಿಸಿದ್ದಾರೆ.
ಇದನ್ನೂ ಓದಿ: ಮೈತ್ರಿ ಪಾದಯಾತ್ರೆ: ಸಿದ್ದು-ಡಿಕೆಶಿಯ ಒಂದೊಂದು ಮಾತಿಗೂ ಇಂದು ಪ್ರತಿಬಾಣ ಪ್ರಯೋಗ..!
ಡಿ.ಕೆ. ಶಿವಕುಮಾರ್ಗೆ ನಾನು ನಾಗರಹಾವೇ
ನನ್ನನ್ನು ನಾಗರಹಾವು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಜರಿದಿದ್ದಾರೆ. ಹೌದು, ಈ ರಾಜ್ಯವನ್ನು ಲೂಟಿ ಮಾಡುತ್ತಿರುವ, ಬಡ ಕುಟುಂಬದ ಹೆಣ್ಣು ಮಕ್ಕಳ ಆಸ್ತಿಯನ್ನು ಲಪಟಾಯಿಸುತ್ತಿರುವ ಡಿ.ಕೆ ಶಿವಕುಮಾರ್ಗೆ ನಾನು ನಾಗರಹಾವೇ ಎಂದು ಕುಮಾರಸ್ವಾಮಿ ಗುಡುಗಿದ್ರು.
“ಬಂಡೆ ಸಿದ್ದರಾಮಯ್ಯನ ಮೇಲೆ ಬಿದ್ರೆ ಕಥೆ ಏನು”
ಸಿದ್ದರಾಮ್ಯನವರಿಗೆ ಕಾವಲಾಗಿ ನಾನು ಬಂಡೆಯಂತೆ ನಿಂತಿದ್ದೇನೆ ಎಂಬ ಡಿಕೆಶಿ ಮಾತಿಗೆ ಕೆಂಡವುಗಳಿದ ಹೆಚ್. ಡಿ ಕುಮಾರಸ್ವಾಮಿ, ಆ ಬಂಡೆಯನ್ನು ಜೊತೆಗಿಟ್ಟುಕೊಂಡಿದ್ದಕ್ಕೆ ನಾನು ಹೀಗಾಗಿದ್ದು. ಆವತ್ತು ಬಂಡೆಯನ್ನು ಬದಿಗೆ ಇಟ್ಟಿದ್ದರೆ ನನಗೆ ಈ ಸ್ಥಿತಿ ಬರುತ್ತಿಲ್ಲ. ಕಾವಲಿದ್ದ ಬಂಡೆ ಸಿದ್ದರಾಮಯ್ಯನವರ ಮೇಲೆ ಬಿದ್ದರೆ ಸಿದ್ದರಾಮಯ್ಯನವರ ಗತಿಯೇನು ಎಂದು ಕೇಂದ್ರ ಸಚಿವ ಲೇವಡಿ ಮಾಡಿದ್ರು
ಇದನ್ನೂ ಓದಿ: ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ.. ಏನದು..?
ಹೀಗೆ ಒಂದಾದ ನಂತರ ಒಂದು ಸಿಡಿಲಬ್ಬರದ ಮಾತುಗಳನ್ನಾಡಿದ ಹೆಚ್.ಡಿ.ಕುಮಾರಸ್ವಾಮಿ, ನಾನು 50 ಡಿನೋಟಿಫಿಕೇಶನ್ ಮಾಡಿದ್ದೇನೆ ಅಂತಾರೆ, ನಾಚಿಕೆ ಆಗಬೇಕು ಇವರಿಗೆ, ಒಂದೇ ಒಂದು ಅಕ್ರಮವನ್ನು ಇಲ್ಲಿಯವರೆಗೂ ಇವರಿಗೆ ಹೊರ ತೆಗೆಯಲು ಆಗಿಲ್ಲ. ಕೆಲಸಕ್ಕೆ ಬಾರದ ಮಾತುಗಳನ್ನು ಆಡಿಕೊಂಡು ಕುಳಿತಿದ್ದೀರಿ . ನನ್ನ ಮೇಲೆ ಆರೋಪ ಮಾಡಿದ್ದ ಪ್ರಕರಣ ಕೋರ್ಟ್ನಲ್ಲಿದೆ. ನನ್ನ ರಾಜೀನಾಮೆ ಕೇಳುತ್ತಾರೆ. ಯಾವ ಕಾರಣಕ್ಕೆ ನಾನು ರಾಜೀನಾಮೆ ಕೊಡಬೇಕು, ಸಾಯಿ ವೆಂಕಟೇಶ್ವರ, ಜಂತಕಲ್ ಮೈನಿಂಗ್ ಪ್ರಕರಣದಲ್ಲಿ ನನ್ನ ಹೆಸರು ತೆಗೆಯುತ್ತೀರಿ, ನಾನು ಏನು ಮಾಡಿದ್ದೇನೆ. ನನ್ನ ಮೇಲೆ ಕಣ್ಣು ಹಾಕಿದ್ರೆ ಶಿವಕುಮಾರ್ ಸರ್ವನಾಶ ಆಗುವ ಕಾಲ ದೂರವಿಲ್ಲ ಅಂತ ಕುಮಾರಸ್ವಾಮಿ ಅಕ್ಷರಶಃ ಡಿಕೆಶಿ ವಿರುದ್ಧ ಹರಿಹಾಯ್ದರು.
ಸಿದ್ಧಾರ್ಥ ಸಾವಿನ ಹಿಂದಿನ ರಹಸ್ಯ ಹೇಳುತ್ತೀರಾ ?
ಮಲ್ಲಿಕಾರ್ಜುನ್ ಖರ್ಗೆ ಅವರ ಅಣ್ಣನ ಮಗನನ್ನ ಜೈಲಿಗೆ ಕಳುಹಿಸಿದ್ದೇವೆ ಎಂದು ಹೇಳುವ ನೀವು ಸಿದ್ಧಾರ್ಥ ಸಾವಿನ ಹಿಂದಿನ ರಹಸ್ಯ ಹೇಳುತ್ತೀರಾ, ದೇವೇಗೌಡರ ಆಸ್ತಿ ಬಗ್ಗೆ ಮಾತನಾಡುತ್ತಿರುವ ನಿಮಗೆ ಆ ನೈತಿಕತೆ ಇದೆಯಾ? ರೇವಣ್ಣನ ಕುಟುಂಬವನ್ನು ಏನು ಮಾಡಿದ್ರಿ, ಇಬ್ಬರು ಮಕ್ಕಳನ್ನು ಜೈಲಿನಲ್ಲಿಟ್ಟಿದ್ದರಿ. ನಾನು ನನ್ನ ಮಗನನ್ನು ಉಳಿಸಿಕೊಳ್ಳಲು ನನ್ನ ಅವರ ಮಕ್ಕಳನ್ನು ಬಲಿಕೊಟ್ಟಿದ್ದೇನೆ ಅಂತೀರಿ ಇದು ಕುತಂತ್ರ ಅಲ್ವೆ ಎಂದು ಡಿಕೆಶಿಗೆ ಸಾವಿರ ಪ್ರಶ್ನೆಗಳನ್ನು ಎಸೆದಿದ್ದಾರೆ ಹೆಚ್.ಡಿ ಕುಮಾರಸ್ವಾಮಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ