ಆಟವಾಡುತ್ತಾ ರಸ್ತೆಗೆ ಹೋಗಿ ಲಾರಿ ಚಕ್ರಕ್ಕೆ ಸಿಲುಕಿದ ಬಾಲಕ ಸಾವು
ತಾಯಿ ಪಕ್ಕದಲ್ಲಿ ಇದ್ದಾಗಲೇ 4 ವರ್ಷದ ಮಗನ ಮೇಲೆ ಹರಿದ ಲಾರಿ
ಬಸ್ ಅನ್ನು ಓವರ್ ಟೇಕ್ ಮಾಡಲು ಹೋದ ಲಾರಿಯಿಂದ ದುರಂತ
ಬೆಂಗಳೂರು: ನಾಲ್ಕು ವರ್ಷದ ಮಗು ಆಟವಾಡುತ್ತಾ ರಸ್ತೆಗೆ ಹೋಗಿ ಲಾರಿ ಚಕ್ರಕ್ಕೆ ಸಿಲುಕಿದ ದಾರುಣ ಘಟನೆ ರಾಮೋಹಳ್ಳಿ ಬಸ್ ನಿಲ್ದಾಣದ ಬಳಿ ನಡೆದಿದೆ. ತಾಯಿ ಪಕ್ಕದಲ್ಲೇ ಇದ್ರೂ 4 ವರ್ಷದ ಮಗು ಮೇಲೆ ಲಾರಿ ಹರಿದಿದ್ದು ಸಾವನ್ನಪ್ಪಿದ್ದಾನೆ. 4 ವರ್ಷದ ಆಯುಷ್ಯ ಮೃತ ದುರ್ದೈವಿ.
ಕುಂಬಳಗೋಡು ಸಮೀಪದ ರಾಮೋಹಳ್ಳಿ ಬಸ್ ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದೆ. ಉತ್ತರ ಭಾರತದಿಂದ ಬಂದಿದ್ದ ದಂಪತಿ ರಾಮೋಹಳ್ಳಿಯಲ್ಲಿ ನೆಲೆಸಿದ್ದರು. ನಿನ್ನೆ ಸಂಜೆ ಮಕ್ಕಳ ಜೊತೆ ತಾಯಿ ಬಸ್ ಸ್ಟಾಪ್ ಹತ್ತಿರ ಬಂದಿದ್ದಾರೆ. ಆಗ ಒಬ್ಬ ಮಗ ಆಯುಷ್ಯ ಆಟವಾಡುತ್ತಾ ರಸ್ತೆಗೆ ಹೋಗಿದ್ದಾನೆ.
ಇದನ್ನೂ ಓದಿ: ಅತಿ ವೇಗದ ಚಾಲನೆ.. ಮದುವೆ ಮುಗಿಸಿ ಬರುವಾಗ ಭೀಕರ ಅಪಘಾತ; 9 ಮಂದಿ ಸಾವು
ಬಸ್ ಅನ್ನು ಓವರ್ ಟೇಕ್ ಮಾಡಲು ಹೋದ ಲಾರಿ 4 ವರ್ಷದ ಆಯುಷ್ಯನ ಮೇಲೆ ಹರಿದಿದೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಲಕನ ಸಾವಿಗೆ ರೊಚ್ಚಿಗೆದ್ದ ಸ್ಥಳೀಯರು ಲಾರಿಯ ಮೇಲೆ ಕಲ್ಲು ತೂರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂಬಳಗೋಡು ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆಟವಾಡುತ್ತಾ ರಸ್ತೆಗೆ ಹೋಗಿ ಲಾರಿ ಚಕ್ರಕ್ಕೆ ಸಿಲುಕಿದ ಬಾಲಕ ಸಾವು
ತಾಯಿ ಪಕ್ಕದಲ್ಲಿ ಇದ್ದಾಗಲೇ 4 ವರ್ಷದ ಮಗನ ಮೇಲೆ ಹರಿದ ಲಾರಿ
ಬಸ್ ಅನ್ನು ಓವರ್ ಟೇಕ್ ಮಾಡಲು ಹೋದ ಲಾರಿಯಿಂದ ದುರಂತ
ಬೆಂಗಳೂರು: ನಾಲ್ಕು ವರ್ಷದ ಮಗು ಆಟವಾಡುತ್ತಾ ರಸ್ತೆಗೆ ಹೋಗಿ ಲಾರಿ ಚಕ್ರಕ್ಕೆ ಸಿಲುಕಿದ ದಾರುಣ ಘಟನೆ ರಾಮೋಹಳ್ಳಿ ಬಸ್ ನಿಲ್ದಾಣದ ಬಳಿ ನಡೆದಿದೆ. ತಾಯಿ ಪಕ್ಕದಲ್ಲೇ ಇದ್ರೂ 4 ವರ್ಷದ ಮಗು ಮೇಲೆ ಲಾರಿ ಹರಿದಿದ್ದು ಸಾವನ್ನಪ್ಪಿದ್ದಾನೆ. 4 ವರ್ಷದ ಆಯುಷ್ಯ ಮೃತ ದುರ್ದೈವಿ.
ಕುಂಬಳಗೋಡು ಸಮೀಪದ ರಾಮೋಹಳ್ಳಿ ಬಸ್ ನಿಲ್ದಾಣದ ಬಳಿ ಈ ದುರ್ಘಟನೆ ನಡೆದಿದೆ. ಉತ್ತರ ಭಾರತದಿಂದ ಬಂದಿದ್ದ ದಂಪತಿ ರಾಮೋಹಳ್ಳಿಯಲ್ಲಿ ನೆಲೆಸಿದ್ದರು. ನಿನ್ನೆ ಸಂಜೆ ಮಕ್ಕಳ ಜೊತೆ ತಾಯಿ ಬಸ್ ಸ್ಟಾಪ್ ಹತ್ತಿರ ಬಂದಿದ್ದಾರೆ. ಆಗ ಒಬ್ಬ ಮಗ ಆಯುಷ್ಯ ಆಟವಾಡುತ್ತಾ ರಸ್ತೆಗೆ ಹೋಗಿದ್ದಾನೆ.
ಇದನ್ನೂ ಓದಿ: ಅತಿ ವೇಗದ ಚಾಲನೆ.. ಮದುವೆ ಮುಗಿಸಿ ಬರುವಾಗ ಭೀಕರ ಅಪಘಾತ; 9 ಮಂದಿ ಸಾವು
ಬಸ್ ಅನ್ನು ಓವರ್ ಟೇಕ್ ಮಾಡಲು ಹೋದ ಲಾರಿ 4 ವರ್ಷದ ಆಯುಷ್ಯನ ಮೇಲೆ ಹರಿದಿದೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹೆತ್ತವರ ಆಕ್ರಂದನ ಮುಗಿಲು ಮುಟ್ಟಿತ್ತು. ಬಾಲಕನ ಸಾವಿಗೆ ರೊಚ್ಚಿಗೆದ್ದ ಸ್ಥಳೀಯರು ಲಾರಿಯ ಮೇಲೆ ಕಲ್ಲು ತೂರಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಂಬಳಗೋಡು ಪೊಲೀಸರು ಲಾರಿ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ