newsfirstkannada.com

ಎತ್ತಿನಗಾಡಿಗೆ ಹಿಂಬದಿಯಿಂದ ತರಕಾರಿ ವಾಹನ ಡಿಕ್ಕಿ; ಮಹಿಳೆ ಸಾವು, ಎತ್ತು ಸೇರಿ ನಾಲ್ವರು ಗಂಭೀರ

Share :

Published February 2, 2024 at 11:47am

Update February 2, 2024 at 8:02pm

    ಎತ್ತಿನಬಂಡಿ ಮತ್ತು ತರಕಾರಿ ವಾಹನ ನಡುವೆ ಭೀಕರ ಅಪಘಾತ

    ಜೋಳದ ರಾಶಿ ಮಾಡಲು ಹೋಲಕ್ಕೆ ಹೋಗುತ್ತಿದ್ದ ನಾಲ್ವರು

    ವಾಹನ ಡಿಕ್ಕಿಗೆ ರಸ್ತೆ ಬದಿ ಗಾಯಗೊಂಡು ಬಿದ್ದಿರುವ ಎತ್ತು

ಬೆಳಗಾವಿ: ಬೆಳ್ಳಂಬೆಳಗ್ಗೆ ಎತ್ತಿನಬಂಡಿ ಮತ್ತು ತರಕಾರಿ ಸಾಗಿಸುತ್ತಿದ್ದ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಸಾಲಹಳ್ಳಿ ಗ್ರಾಮದ ಯಮನವ್ಚ ಮಡ್ಡಿ(42) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಯಮನವ್ಚ ಮಡ್ಡಿ ಸೇರಿ ನಾಲ್ವರು ಎತ್ತಿನಬಂಡಿಯಲ್ಲಿ ಹೋಲಕ್ಕೆ ಜೋಳದ ರಾಶಿ ಮಾಡಲು ಹೋಗುತ್ತಿದ್ದರು. ಈ ವೇಳೆ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ಧಾರಿಯಲ್ಲಿ ಅಪಘಾತ ನಡೆದಿದೆ. ಎತ್ತಿನ ಚಕ್ರಬಂಡಿಗೆ ತರಕಾರಿ ವಾಹನ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಯಮನವ್ಚ ಮಡ್ಡಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಎತ್ತು ಸೇರಿ ನಾಲ್ವರಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಕಡಕೋಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎತ್ತಿನಗಾಡಿಗೆ ಹಿಂಬದಿಯಿಂದ ತರಕಾರಿ ವಾಹನ ಡಿಕ್ಕಿ; ಮಹಿಳೆ ಸಾವು, ಎತ್ತು ಸೇರಿ ನಾಲ್ವರು ಗಂಭೀರ

https://newsfirstlive.com/wp-content/uploads/2024/02/belagavi.jpg

    ಎತ್ತಿನಬಂಡಿ ಮತ್ತು ತರಕಾರಿ ವಾಹನ ನಡುವೆ ಭೀಕರ ಅಪಘಾತ

    ಜೋಳದ ರಾಶಿ ಮಾಡಲು ಹೋಲಕ್ಕೆ ಹೋಗುತ್ತಿದ್ದ ನಾಲ್ವರು

    ವಾಹನ ಡಿಕ್ಕಿಗೆ ರಸ್ತೆ ಬದಿ ಗಾಯಗೊಂಡು ಬಿದ್ದಿರುವ ಎತ್ತು

ಬೆಳಗಾವಿ: ಬೆಳ್ಳಂಬೆಳಗ್ಗೆ ಎತ್ತಿನಬಂಡಿ ಮತ್ತು ತರಕಾರಿ ಸಾಗಿಸುತ್ತಿದ್ದ ವಾಹನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸಾಲಹಳ್ಳಿ ಬಳಿ ಈ ಘಟನೆ ನಡೆದಿದೆ. ಅಪಘಾತದಲ್ಲಿ ಸಾಲಹಳ್ಳಿ ಗ್ರಾಮದ ಯಮನವ್ಚ ಮಡ್ಡಿ(42) ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ.

ಯಮನವ್ಚ ಮಡ್ಡಿ ಸೇರಿ ನಾಲ್ವರು ಎತ್ತಿನಬಂಡಿಯಲ್ಲಿ ಹೋಲಕ್ಕೆ ಜೋಳದ ರಾಶಿ ಮಾಡಲು ಹೋಗುತ್ತಿದ್ದರು. ಈ ವೇಳೆ ಬೆಳಗಾವಿ-ಬಾಗಲಕೋಟೆ ರಾಜ್ಯ ಹೆದ್ಧಾರಿಯಲ್ಲಿ ಅಪಘಾತ ನಡೆದಿದೆ. ಎತ್ತಿನ ಚಕ್ರಬಂಡಿಗೆ ತರಕಾರಿ ವಾಹನ ಹಿಂದಿನಿಂದ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಯಮನವ್ಚ ಮಡ್ಡಿ ಸಾವನ್ನಪ್ಪಿದ್ದಾರೆ.

ಅಪಘಾತದಲ್ಲಿ ಎತ್ತು ಸೇರಿ ನಾಲ್ವರಿಗೆ ಗಂಭೀರ ಗಾಯವಾಗಿದೆ. ಸ್ಥಳಕ್ಕೆ ಕಡಕೋಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More