ತಿರುಪತಿ ತಿಮ್ಮಪ್ಪನ ಸನ್ನಿಧಿ ಮುಂದೆ ರೀಲ್ಸ್​.. ಶಾಸಕನ ಸಂಗಾತಿ ಮೇಲೆ ದಾಖಲಾಯ್ತು ಕೇಸ್​

author-image
AS Harshith
Updated On
ತಿರುಪತಿ ತಿಮ್ಮಪ್ಪನ ಸನ್ನಿಧಿ ಮುಂದೆ ರೀಲ್ಸ್​.. ಶಾಸಕನ ಸಂಗಾತಿ ಮೇಲೆ ದಾಖಲಾಯ್ತು ಕೇಸ್​
Advertisment
  • ತಿಮ್ಮಪ್ಪನ ಗುಡಿಯ ಮುಂದೆ ರೀಲ್ಸ್​ ಹುಚ್ಚಾಟ
  • ಶಾಸಕನ ಸಂಗಾತಿ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು
  • ವಿಜಯದಶಮಿಯಂದು ರೀಲ್ಸ್​ ಮಾಡಿದ ತಗಲಾಕಿಕೊಂಡ್ರು

ಮೊಬೈಲ್​ ಬಂದ ಬಳಿಕ ರೀಲ್ಸ್​ ಹುಚ್ಚಾಟ ಹೆಚ್ಚಾಗುತ್ತಿದೆ. ತಿರುಪತಿ ತಿಮ್ಮಪ್ಪನ ಗುಡಿಯ ಮುಂದೆ ಶಾಸಕರೊಬ್ಬರ ಸಂಗಾತಿ ರೀಲ್ಸ್​ ಮಾಡಿರುವ ಆರೋಪವೊಂದು ಕೇಳಿಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೈಎಸ್​ಆರ್​ ಕಾಂಗ್ರೆಸ್​ ಶಾಸಕ ಡುವ್ವಾಡ್​​ ಶ್ರೀನಿವಾಸ್​​ ಅವರ ಸಂಗಾತಿ ಮಾಧುರಿ ದಿವ್ವಾಳ ತಿಮ್ಮಪ್ಪನ ಗುಡಿಯ ಮುಂದೆ ರೀಲ್ಸ್​ ಮಾಡಿದ್ದಾರೆ. ದೇವಾಲಯದ ನಿಯಮ ಮೀರಿ ನಡೆದುಕೊಂಡಿದ್ದಾರೆ. ಈ ಕುರಿತಾಗಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕಾನ್ಸ್ಟೇಬಲ್ ಮಗ, LLB ವಿದ್ಯಾರ್ಥಿ​​! ಬಾಬಾ ಸಿದ್ದಿಕಿ ಸಾಯಿಸಿದ ಲಾರೆನ್ಸ್​ ಬಳಿ 700 ಶೂಟರ್​ಗಳು!

ಮಾಧುರಿ ದಿವ್ವಾಳ ವಿಜಯದಶಮಿ ಪ್ರಯುಕ್ತ ಶಾಸಕ ಡುವ್ವಾಡ್​​ ಶ್ರೀನಿವಾಸ್​ ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ದೇವಸ್ಥಾನದ ಆವರಣದಲ್ಲಿ ರೀಲ್ಸ್​ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲೂ ರೀಲ್ಸ್​ ವೈರಲ್​ ಆಗಿತ್ತು.

ಇದನ್ನೂ ಓದಿ: Bengaluru: ವಿಷ ಸೇವಿಸಿ ಮಲಗಿದ್ದ ಪತ್ನಿ, ಇಬ್ಬರು ಮಕ್ಕಳು.. ಪ್ರಾಣಬಿಟ್ಟ ಕ್ಯಾಬ್​ ಚಾಲಕ

ಇನ್ನು ಡುವ್ವಾಡ್​​ ಶ್ರೀನಿವಾಸ್ ಮತ್ತು ಮಾಧುರಿ ಲೀವ್​ ಇನ್​ ರಿಲೇಷನ್​ಶಿಪ್​ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ದೇವಸ್ಥಾನದ ಮುಂದೆ ರೀಲ್ಸ್​ ಹುಚ್ಚಾಟ ಮೆರೆದ ಶಾಸಕ ಸಂಗಾತಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment