newsfirstkannada.com

ಸಾಲ ವಾಪಸ್ಸು ಕೊಡದ ಸ್ನೇಹಿತ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ದಂಪತಿ ಆತ್ಮಹತ್ಯೆ

Share :

Published February 1, 2024 at 11:36am

    ಸಾಲ ವಾಪಸ್ಸು ಕೊಡಲಿಲ್ಲವೆಂದು ದಂಪತಿ ಆತ್ಮಹತ್ಯೆ

    ಸ್ನೇಹಿತನಿಗೆ ಬೇರೊಬ್ಬರಿಂದ 5 ಲಕ್ಷ ಸಾಲ ಕೊಡಿಸಿದ್ದ ವ್ಯಕ್ತಿ

    ಚಿನ್ನ, ಸಾಲವನ್ನು ಕೊಡದೆ ಸತಾಯಿಸಿದ್ದಕ್ಕೆ ದಂಪತಿ ಆತ್ಮಹತ್ಯೆ

ಮೈಸೂರು: ಸಾಲ ವಾಪಸ್ಸು ಕೊಡಲಿಲ್ಲವೆಂದು ದಂಪತಿ ಆತ್ಮಹತ್ಯೆ ಮಾಡಿದ ಘಟನೆ ಮೈಸೂರಿನ ಯರಗನಹಳ್ಳಿ ನಡೆದಿದೆ. ವಿಶ್ವ (34), ಸುಶ್ಮ (28) ಆತ್ಮಹತ್ಯೆಗೆ ಶರಣಾದ ದಂಪತಿಗಳು.

ಸಾಯುವ ಮುನ್ನ  ದಂಪತಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವು ಎಂಬಾತನಿಗೆ ವಿಶ್ವ ಬೇರೊಬ್ಬರಿಂದ ಸಾಲ ಕೊಡಿಸಿದ್ದನು. ಸುಮಾರು 5 ಲಕ್ಷ ರೂಪಾಯಿ ಸಾಲ ಕೊಡಿಸಿದ್ದನು. ಆದರೆ ಕೊಟ್ಟ ಸಾಲವನ್ನ ಮರು ಶಿವು ಪಾವತಿ ಮಾಡಿರಲಿಲ್ಲ. ಸಾಲಕೊಟ್ಟವರು ಸಾಲಕೊಡುವಂತೆ ಕೇಳುತ್ತಿದ್ದ ಕಾರಣ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶ್ವ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು. ಚೋರನಹಳ್ಳಿ ರಾಜಣ್ಣ ಎಂಬಾತನಿಗೆ ವಿಶ್ವ ತನ್ನ ಚಿನ್ನಾಭರಣ ಕೊಟ್ಟಿದ್ದನು. ಆದರೆ ಆ ಚಿನ್ನವನ್ನು ವಾಪಸ್ಸು ಕೊಡದೆ ರಾಜಣ್ಣ ಸತಾಯಿಸುತ್ತಿದ್ದನು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾಲ ವಾಪಸ್ಸು ಕೊಡದ ಸ್ನೇಹಿತ.. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ದಂಪತಿ ಆತ್ಮಹತ್ಯೆ

https://newsfirstlive.com/wp-content/uploads/2024/02/vishawa.jpg

    ಸಾಲ ವಾಪಸ್ಸು ಕೊಡಲಿಲ್ಲವೆಂದು ದಂಪತಿ ಆತ್ಮಹತ್ಯೆ

    ಸ್ನೇಹಿತನಿಗೆ ಬೇರೊಬ್ಬರಿಂದ 5 ಲಕ್ಷ ಸಾಲ ಕೊಡಿಸಿದ್ದ ವ್ಯಕ್ತಿ

    ಚಿನ್ನ, ಸಾಲವನ್ನು ಕೊಡದೆ ಸತಾಯಿಸಿದ್ದಕ್ಕೆ ದಂಪತಿ ಆತ್ಮಹತ್ಯೆ

ಮೈಸೂರು: ಸಾಲ ವಾಪಸ್ಸು ಕೊಡಲಿಲ್ಲವೆಂದು ದಂಪತಿ ಆತ್ಮಹತ್ಯೆ ಮಾಡಿದ ಘಟನೆ ಮೈಸೂರಿನ ಯರಗನಹಳ್ಳಿ ನಡೆದಿದೆ. ವಿಶ್ವ (34), ಸುಶ್ಮ (28) ಆತ್ಮಹತ್ಯೆಗೆ ಶರಣಾದ ದಂಪತಿಗಳು.

ಸಾಯುವ ಮುನ್ನ  ದಂಪತಿ ವೀಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಿವು ಎಂಬಾತನಿಗೆ ವಿಶ್ವ ಬೇರೊಬ್ಬರಿಂದ ಸಾಲ ಕೊಡಿಸಿದ್ದನು. ಸುಮಾರು 5 ಲಕ್ಷ ರೂಪಾಯಿ ಸಾಲ ಕೊಡಿಸಿದ್ದನು. ಆದರೆ ಕೊಟ್ಟ ಸಾಲವನ್ನ ಮರು ಶಿವು ಪಾವತಿ ಮಾಡಿರಲಿಲ್ಲ. ಸಾಲಕೊಟ್ಟವರು ಸಾಲಕೊಡುವಂತೆ ಕೇಳುತ್ತಿದ್ದ ಕಾರಣ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಶ್ವ ತರಕಾರಿ ವ್ಯಾಪಾರ ಮಾಡಿಕೊಂಡಿದ್ದನು. ಚೋರನಹಳ್ಳಿ ರಾಜಣ್ಣ ಎಂಬಾತನಿಗೆ ವಿಶ್ವ ತನ್ನ ಚಿನ್ನಾಭರಣ ಕೊಟ್ಟಿದ್ದನು. ಆದರೆ ಆ ಚಿನ್ನವನ್ನು ವಾಪಸ್ಸು ಕೊಡದೆ ರಾಜಣ್ಣ ಸತಾಯಿಸುತ್ತಿದ್ದನು. ಇದರಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್ಲೋಡ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More