/newsfirstlive-kannada/media/post_attachments/wp-content/uploads/2024/04/AP_TEMPLE.jpg)
ಹೈದರಾಬಾದ್; ದೇವರಿಗೆ ಕೈ ಮುಗಿದಂತೆ ಮಾಡಿ ತಕ್ಷಣ ಗರ್ಭಗುಡಿ ಒಳ ಹೊಕ್ಕು ದೇವತೆಯ ಕುತ್ತಿಗೆಯಲ್ಲಿದ್ದ ಬಂಗಾರದ ತಾಳಿಯನ್ನು ಕದ್ದು ಕಳ್ಳನೊಬ್ಬ ಎಸ್ಕೇಪ್ ಆಗಿದ್ದಾನೆ. ಈ ಘಟನೆಯು ಆಂಧ್ರಪ್ರದೇಶದ ಸತ್ರಂಪಾಡು ಗ್ರಾಮದಲ್ಲಿ ನಡೆದಿದೆ.
ಸತ್ರಂಪಾಡು ಗ್ರಾಮದಲ್ಲಿನ ಸೌಭಾಗ್ಯಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ವ್ಯಕ್ತಿಯೊಬ್ಬ ಭಕ್ತರ ಸೋಗಿನಲ್ಲಿ ಬಂದು ಈ ಕೃತ್ಯ ಎಸಗಿದ್ದಾನೆ. ಸೌಭಾಗ್ಯಲಕ್ಷ್ಮಿ ದೇವಸ್ಥಾನಕ್ಕೆ ಭಕ್ತನ ಸೋಗಿನಲ್ಲಿ ಕಳ್ಳನೊಬ್ಬ ಬಂದು ಮೊದಲು ದೇವರಿಗೆ ಕೈಮುಗಿದು ಬೇಡಿಕೊಂಡಿದ್ದಾನೆ. ಬಳಿಕ ಆ ಕಡೆ ಈ ಕಡೆ ನೋಡಿ ಯಾರೂ ಇಲ್ಲದ್ದನ್ನು ಕಂಡು ಗರ್ಭಗುಡಿಯೊಳಗೆ ಹೋಗಿದ್ದಾನೆ. ದೇವಿಯ ಕುತ್ತಿಗೆಯಲ್ಲಿದ್ದ ಭಾರೀ ಮೌಲ್ಯದ ಮಂಗಳಸೂತ್ರ ಕಿತ್ತುಕೊಂಡು ಪರಾರಿಯಾಗಿದ್ದಾನೆ.
"Oh God! Temple Deity Mangalsutra Stolen"
In Andhra Pradesh's Eluru Satrampadu, a shocking incident occurred at the Saubhagyalakshmi temple.
A man, pretending to be a devotee, committed a theft. He was captured on CCTV while he was stealing a mangalsutra from the deity's neck.… pic.twitter.com/QQg8z4h8Bj— Sudhakar Udumula (@sudhakarudumula) April 7, 2024
ಖದೀಮ ಮಂಗಳಸೂತ್ರ ಕಳ್ಳತನ ಮಾಡುತ್ತಿರುವ ದೃಶ್ಯ ದೇವಾಲಯದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಬಗ್ಗೆ ದೇವಾಲಯಕ್ಕೆ ಸಂಬಂಧಿಸಿದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆ ಆರಂಭವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ