newsfirstkannada.com

‘ವಿಷಯ ಏನೆಂದು ಅನೇಕರಿಗೆ ತಿಳಿದಿದೆ’- ಡಿವೋರ್ಸ್‌ ಕೇಸ್‌ಗೆ ಟ್ವಿಸ್ಟ್ ಕೊಟ್ಟ ಯುವ ಪತ್ನಿ ಶ್ರೀದೇವಿ; ಹೇಳಿದ್ದೇನು?

Share :

Published June 10, 2024 at 5:46pm

Update June 10, 2024 at 5:47pm

    ಯುವ ರಾಜ್‌ ಪತ್ನಿ ಶ್ರೀದೇವಿ ಅವರಿಗೆ ಕೋರ್ಟ್‌ನಿಂದ ನೋಟಿಸ್

    ನಾನು ಈಗಾಗಲೇ ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ - ಶ್ರೀದೇವಿ

    ‘ಯುವ’ ಸಿನಿಮಾದ ಶೂಟಿಂಗ್ ಶುರುವಾದ ಮೇಲೆ ಅಸಲಿಗೆ ಏನಾಯ್ತು?

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಯುವ ರಾಜ್‌ಕುಮಾರ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗೆ ಮುಂದಾಗಿದ್ದಾರೆ. ಪತ್ನಿ ಶ್ರೀದೇವಿ ಅವರ ಮೇಲೆ ಮಾನಸಿಕ ಹಿಂಸೆ, ಟಾರ್ಚರ್‌ ಅನುಭವಿಸಿದ ಆರೋಪ ಮಾಡಿರುವ ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಯುವ ರಾಜ್‌ಕುಮಾರ್ ಅವರ ವಿಚ್ಛೇದನದ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಈ ಡಿವೋರ್ಸ್ ಅರ್ಜಿ ವಿಚಾರಣೆಯನ್ನು ಜುಲೈ 4ನೇ ತಾರೀಖಿಗೆ ನಿಗದಿ ಮಾಡಿದೆ. ಯುವ ರಾಜ್‌ಕುಮಾರ್ ಅವರ ಡಿವೋರ್ಸ್ ಅರ್ಜಿಯ ಹಿನ್ನೆಲೆಯಲ್ಲಿ ಕೋರ್ಟ್ ಯುವ ಪತ್ನಿ ಶ್ರೀದೇವಿ ಅವರಿಗೆ ನೋಟಿಸ್ ಕೂಡ ಜಾರಿ ಮಾಡಿದೆ.

ದೊಡ್ಮನೆ ಮನೆಯಲ್ಲಿ ಮೊದಲ ಡಿವೋರ್ಸ್‌ ಕೇಸ್‌ ನಟ ಯುವ ರಾಜ್‌ಕುಮಾರ್ ಅವರ ವಿಚ್ಛೇದನದ ಸುದ್ದಿ ಎಲ್ಲೆಡೆ ಹಬ್ಬಿ ಹೋಗಿದೆ. ಈ ಬಗ್ಗೆ ಖುದ್ದು ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಅವರೇ ಈಗ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀದೇವಿ ಅವರು ಸದ್ಯ ಅಮೆರಿಕಾದಲ್ಲಿ ಇದ್ದು, ಯುವ ರಾಜ್‌ ಕುಮಾರ್ ಅವರ ವಿಚ್ಛೇದನದ ಅರ್ಜಿಗೆ ಅಲ್ಲಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀದೇವಿ ಅವರ ಪ್ರತಿಕ್ರಿಯೆ ಏನು?
ವಿಷಯ ಏನೆಂದು ಕನ್ನಡ ಚಿತ್ರರಂಗ ಹಾಗೂ ಮಾಧ್ಯಮದಲ್ಲಿರುವ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿಯು ಇನ್ನೂ ನನಗೆ ತಲುಪಿಲ್ಲ. ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ. ಈ ಸಂದರ್ಭದಲ್ಲಿ ನನ್ನ ಮತ್ತು ನನ್ನ ಕುಟುಂಬದ ಘನತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ನಂಬಿಕೆ ನನಗಿದೆ.

ಇದು ಯುವ ರಾಜ್‌ಕುಮಾರ್ ಅವರು ವಿಚ್ಛೇದನದ ಅರ್ಜಿಯ ಬಗ್ಗೆ ಅವರ ಪತ್ನಿ ಶ್ರೀದೇವಿ ಅವರು ನೀಡಿರುವ ಮೊದಲ ಪ್ರತಿಕ್ರಿಯೆ. ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಾಲ್ಕು ದಿನಗಳಾಗಿದೆ. ಶ್ರೀದೇವಿ ಅವರು ಅಮೆರಿಕಾದಲ್ಲಿ ಇರುವುದರಿಂದ ನೋಟಿಸ್ ಇನ್ನೂ ಅವರ ಕೈ ತಲುಪಿಲ್ಲ ಎನ್ನಲಾಗಿದೆ.

ಕೋರ್ಟ್​ನಲ್ಲಿ ಅರ್ಜಿ.. ಮುಂದೇನು?
ಈ ಡಿವೋರ್ಸ್ ಪ್ರಕರಣದಲ್ಲಿ ಯುವ ರಾಜ್‌ ಕುಮಾರ್ ಅವರು ಶ್ರೀದೇವಿ ಅವರಿಗೆ ಡಿವೋರ್ಸ್ ಕೊಡಲು ಒಪ್ಪಿದ್ದಾರೆ. ಆದರೆ ಶ್ರೀದೇವಿ ಅವರಿಗೆ ಇನ್ನೂ ವಿಚ್ಛೇದನದ ನೋಟಿಸ್ ತಲುಪಿಲ್ಲ. ಶ್ರೀದೇವಿ ಅವರು ಅಮೆರಿಕಾದಲ್ಲಿ ಇರುವ ಕಾರಣ ಈ ಬಗ್ಗೆ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು? 

ಈ ನೋಟಿಸ್ ಬಳಿಕ ಶ್ರೀದೇವಿ ಅವರಿಗೆ ಕೋರ್ಟ್ ಪ್ರಶ್ನೆ ಮಾಡಲಿದೆ. ಯುವ ರಾಜ್‌ಕುಮಾರ್ ಅವರಿಗೆ ಡಿವೋರ್ಸ್ ನೀಡುವುದಕ್ಕೆ ನಿಮಗೆ ಒಪ್ಪಿಗೆ ಇದೆಯಾ? ಇಲ್ಲವಾ? ಡಿವೋರ್ಸ್ ನೀಡಲ್ಲ ಅಂದ್ರೆ, ಆಕ್ಷೇಪಣೆ ಇರೋದು ಏನು? ಹೀಗೆ ಅವರ ಪ್ರತಿಕ್ರಿಯೆ ಕೇಳಿ ನ್ಯಾಯಾಲಯ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆ.

ಯುವರಾಜ್‌ಕುಮಾರ್ ಅವರ ಡಿವೋರ್ಸ್‌ ಕೇಸ್‌ನಲ್ಲಿ ಎರಡೂ ಕಡೆಯ ವಾದಗಳನ್ನು ಕೋರ್ಟ್ ಕೇಳಬೇಕಾಗುತ್ತದೆ. ಇದರ ಜೊತೆಯಲ್ಲೇ ವೇಟಿಂಗ್ ಪಿರಿಯಡ್ ಸಹ ನೋಡಬೇಕು. ನಂತರ ಕೋರ್ಟ್ ಈ ಪ್ರಕರಣದಲ್ಲಿ ತನ್ನ ಆದೇಶವನ್ನು ನೀಡುತ್ತೆ. ಈ ಎಲ್ಲಾ ಕಾನೂನು ಪ್ರಕ್ರಿಯೆಗಳ ಮುಗಿಯಬೇಕಿರೋದ್ರಿಂದ ತಕ್ಷಣಕ್ಕೆ ಡಿವೋರ್ಸ್ ನೀಡೋದು ಡೌಟ್ ಎನ್ನಲಾಗಿದೆ.

ಇದನ್ನೂ ಓದಿ: ಡಿವೋರ್ಸ್​ ಕೊಟ್ಟು ಮತ್ತೆ ಒಂದಾಯ್ತು ಜೋಡಿ.. ಪರಸ್ಪರ ತಬ್ಬಿ ಕಣ್ಣೀರು ಇಡುತ್ತ ಮತ್ತೆ ಸತಿ-ಪತಿ ಆಗಿಬಿಟ್ರು..! 

‘ಯುವ’ ಶೂಟಿಂಗ್ ಶುರುವಾದ ಮೇಲೆ ಏನಾಯ್ತು?
ಕಳೆದ ಆರೇಳು ತಿಂಗಳ ಹಿಂದೆಯೇ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಅವರು ದೂರ, ದೂರ ಆಗಿದ್ದರು. ಹಲವು ತಿಂಗಳಿಂದ ಯುವ ಜೊತೆ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಈ ಹಿಂದೆ ದೊಡ್ಮನೆಯ ಪ್ರತಿ ಕಾರ್ಯಕ್ರಮದಲ್ಲಿ ಇರ್ತಿದ್ದ ಶ್ರೀದೇವಿ ಅವರು ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. 2016ರಲ್ಲಿ ತೆರೆಕಂಡ ಯುವ ರಾಜ್‌ಕುಮಾರ್ ಅವರ ರನ್ ಆ್ಯಂಟನಿ ಚಿತ್ರದ ನಿರ್ಮಾಣದಲ್ಲಿ ಶ್ರೀದೇವಿ ಅವರು ಭಾಗಿಯಾಗಿದ್ದರು. ರನ್ ಆ್ಯಂಟನಿ ಪ್ರಮೋಷನ್‌ನಲ್ಲೂ ಶ್ರೀದೇವಿ ಭೈರಪ್ಪ ಅವರು ತೊಡಗಿಕೊಂಡಿದ್ದರು.

ರನ್‌ ಆ್ಯಂಟನಿ ಸಿನಿಮಾದ ಜವಾಬ್ದಾರಿ ತೆಗೆದುಕೊಂಡಿದ್ದ ಶ್ರೀದೇವಿ ಅವರು ಯುವ ಸಿನಿಮಾ ಮುಹೂರ್ತದಲ್ಲಿ ಇದ್ದರು. ಆದರೆ ಯುವ ಸಿನಿಮಾದ ಶೂಟಿಂಗ್ ಆರಂಭವಾದ ಮೇಲೆ ಏನಾಯ್ತೋ ಗೊತ್ತಿಲ್ಲ. ಯುವ ರಿಲೀಸ್​ ವೇಳೆ ಶ್ರೀದೇವಿ ಅವರು ನಾಪತ್ತೆ ಆಗಿದ್ದರು. ಇದ್ದಕ್ಕಿದ್ದ ಹಾಗೆ ಯುವರಾಜ್ ಜೊತೆ ಅಂತರ ಕಾಯ್ದುಕೊಂಡು ಯುವ ಸಿನಿಮಾದ ಶೂಟಿಂಗ್, ಪ್ರಮೋಷನ್​ಗೂ ನಾಪತ್ತೆಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ವಿಷಯ ಏನೆಂದು ಅನೇಕರಿಗೆ ತಿಳಿದಿದೆ’- ಡಿವೋರ್ಸ್‌ ಕೇಸ್‌ಗೆ ಟ್ವಿಸ್ಟ್ ಕೊಟ್ಟ ಯುವ ಪತ್ನಿ ಶ್ರೀದೇವಿ; ಹೇಳಿದ್ದೇನು?

https://newsfirstlive.com/wp-content/uploads/2024/06/Yuva-Rajkumar-Divorce-9.jpg

    ಯುವ ರಾಜ್‌ ಪತ್ನಿ ಶ್ರೀದೇವಿ ಅವರಿಗೆ ಕೋರ್ಟ್‌ನಿಂದ ನೋಟಿಸ್

    ನಾನು ಈಗಾಗಲೇ ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ - ಶ್ರೀದೇವಿ

    ‘ಯುವ’ ಸಿನಿಮಾದ ಶೂಟಿಂಗ್ ಶುರುವಾದ ಮೇಲೆ ಅಸಲಿಗೆ ಏನಾಯ್ತು?

ಬೆಂಗಳೂರು: ಸ್ಯಾಂಡಲ್‌ವುಡ್ ನಟ ಯುವ ರಾಜ್‌ಕುಮಾರ್‌ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಡಿವೋರ್ಸ್‌ಗೆ ಮುಂದಾಗಿದ್ದಾರೆ. ಪತ್ನಿ ಶ್ರೀದೇವಿ ಅವರ ಮೇಲೆ ಮಾನಸಿಕ ಹಿಂಸೆ, ಟಾರ್ಚರ್‌ ಅನುಭವಿಸಿದ ಆರೋಪ ಮಾಡಿರುವ ಯುವ ರಾಜ್‌ಕುಮಾರ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಯುವ ರಾಜ್‌ಕುಮಾರ್ ಅವರ ವಿಚ್ಛೇದನದ ವಿಚಾರ ಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಈ ಡಿವೋರ್ಸ್ ಅರ್ಜಿ ವಿಚಾರಣೆಯನ್ನು ಜುಲೈ 4ನೇ ತಾರೀಖಿಗೆ ನಿಗದಿ ಮಾಡಿದೆ. ಯುವ ರಾಜ್‌ಕುಮಾರ್ ಅವರ ಡಿವೋರ್ಸ್ ಅರ್ಜಿಯ ಹಿನ್ನೆಲೆಯಲ್ಲಿ ಕೋರ್ಟ್ ಯುವ ಪತ್ನಿ ಶ್ರೀದೇವಿ ಅವರಿಗೆ ನೋಟಿಸ್ ಕೂಡ ಜಾರಿ ಮಾಡಿದೆ.

ದೊಡ್ಮನೆ ಮನೆಯಲ್ಲಿ ಮೊದಲ ಡಿವೋರ್ಸ್‌ ಕೇಸ್‌ ನಟ ಯುವ ರಾಜ್‌ಕುಮಾರ್ ಅವರ ವಿಚ್ಛೇದನದ ಸುದ್ದಿ ಎಲ್ಲೆಡೆ ಹಬ್ಬಿ ಹೋಗಿದೆ. ಈ ಬಗ್ಗೆ ಖುದ್ದು ಯುವ ರಾಜ್‌ಕುಮಾರ್ ಅವರ ಪತ್ನಿ ಶ್ರೀದೇವಿ ಅವರೇ ಈಗ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಶ್ರೀದೇವಿ ಅವರು ಸದ್ಯ ಅಮೆರಿಕಾದಲ್ಲಿ ಇದ್ದು, ಯುವ ರಾಜ್‌ ಕುಮಾರ್ ಅವರ ವಿಚ್ಛೇದನದ ಅರ್ಜಿಗೆ ಅಲ್ಲಿಂದಲೇ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀದೇವಿ ಅವರ ಪ್ರತಿಕ್ರಿಯೆ ಏನು?
ವಿಷಯ ಏನೆಂದು ಕನ್ನಡ ಚಿತ್ರರಂಗ ಹಾಗೂ ಮಾಧ್ಯಮದಲ್ಲಿರುವ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್ ನೋಟಿಸ್‌ಗೆ ಉತ್ತರಿಸಿದ್ದೇನೆ. ವಿಚ್ಛೇದನದ ಅರ್ಜಿಯು ಇನ್ನೂ ನನಗೆ ತಲುಪಿಲ್ಲ. ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಮಾನಸಿಕ ಪರಿಸ್ಥಿತಿಯಲ್ಲಿ ಇಲ್ಲ. ಈ ಸಂದರ್ಭದಲ್ಲಿ ನನ್ನ ಮತ್ತು ನನ್ನ ಕುಟುಂಬದ ಘನತೆಗೆ ಧಕ್ಕೆ ಬಾರದಂತೆ ನಡೆದುಕೊಳ್ಳುವ ನಂಬಿಕೆ ನನಗಿದೆ.

ಇದು ಯುವ ರಾಜ್‌ಕುಮಾರ್ ಅವರು ವಿಚ್ಛೇದನದ ಅರ್ಜಿಯ ಬಗ್ಗೆ ಅವರ ಪತ್ನಿ ಶ್ರೀದೇವಿ ಅವರು ನೀಡಿರುವ ಮೊದಲ ಪ್ರತಿಕ್ರಿಯೆ. ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ನಾಲ್ಕು ದಿನಗಳಾಗಿದೆ. ಶ್ರೀದೇವಿ ಅವರು ಅಮೆರಿಕಾದಲ್ಲಿ ಇರುವುದರಿಂದ ನೋಟಿಸ್ ಇನ್ನೂ ಅವರ ಕೈ ತಲುಪಿಲ್ಲ ಎನ್ನಲಾಗಿದೆ.

ಕೋರ್ಟ್​ನಲ್ಲಿ ಅರ್ಜಿ.. ಮುಂದೇನು?
ಈ ಡಿವೋರ್ಸ್ ಪ್ರಕರಣದಲ್ಲಿ ಯುವ ರಾಜ್‌ ಕುಮಾರ್ ಅವರು ಶ್ರೀದೇವಿ ಅವರಿಗೆ ಡಿವೋರ್ಸ್ ಕೊಡಲು ಒಪ್ಪಿದ್ದಾರೆ. ಆದರೆ ಶ್ರೀದೇವಿ ಅವರಿಗೆ ಇನ್ನೂ ವಿಚ್ಛೇದನದ ನೋಟಿಸ್ ತಲುಪಿಲ್ಲ. ಶ್ರೀದೇವಿ ಅವರು ಅಮೆರಿಕಾದಲ್ಲಿ ಇರುವ ಕಾರಣ ಈ ಬಗ್ಗೆ ಅವರು ಇನ್ನೂ ಪ್ರತಿಕ್ರಿಯೆ ನೀಡಿಲ್ಲ.

ಇದನ್ನೂ ಓದಿ: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು? 

ಈ ನೋಟಿಸ್ ಬಳಿಕ ಶ್ರೀದೇವಿ ಅವರಿಗೆ ಕೋರ್ಟ್ ಪ್ರಶ್ನೆ ಮಾಡಲಿದೆ. ಯುವ ರಾಜ್‌ಕುಮಾರ್ ಅವರಿಗೆ ಡಿವೋರ್ಸ್ ನೀಡುವುದಕ್ಕೆ ನಿಮಗೆ ಒಪ್ಪಿಗೆ ಇದೆಯಾ? ಇಲ್ಲವಾ? ಡಿವೋರ್ಸ್ ನೀಡಲ್ಲ ಅಂದ್ರೆ, ಆಕ್ಷೇಪಣೆ ಇರೋದು ಏನು? ಹೀಗೆ ಅವರ ಪ್ರತಿಕ್ರಿಯೆ ಕೇಳಿ ನ್ಯಾಯಾಲಯ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೆ.

ಯುವರಾಜ್‌ಕುಮಾರ್ ಅವರ ಡಿವೋರ್ಸ್‌ ಕೇಸ್‌ನಲ್ಲಿ ಎರಡೂ ಕಡೆಯ ವಾದಗಳನ್ನು ಕೋರ್ಟ್ ಕೇಳಬೇಕಾಗುತ್ತದೆ. ಇದರ ಜೊತೆಯಲ್ಲೇ ವೇಟಿಂಗ್ ಪಿರಿಯಡ್ ಸಹ ನೋಡಬೇಕು. ನಂತರ ಕೋರ್ಟ್ ಈ ಪ್ರಕರಣದಲ್ಲಿ ತನ್ನ ಆದೇಶವನ್ನು ನೀಡುತ್ತೆ. ಈ ಎಲ್ಲಾ ಕಾನೂನು ಪ್ರಕ್ರಿಯೆಗಳ ಮುಗಿಯಬೇಕಿರೋದ್ರಿಂದ ತಕ್ಷಣಕ್ಕೆ ಡಿವೋರ್ಸ್ ನೀಡೋದು ಡೌಟ್ ಎನ್ನಲಾಗಿದೆ.

ಇದನ್ನೂ ಓದಿ: ಡಿವೋರ್ಸ್​ ಕೊಟ್ಟು ಮತ್ತೆ ಒಂದಾಯ್ತು ಜೋಡಿ.. ಪರಸ್ಪರ ತಬ್ಬಿ ಕಣ್ಣೀರು ಇಡುತ್ತ ಮತ್ತೆ ಸತಿ-ಪತಿ ಆಗಿಬಿಟ್ರು..! 

‘ಯುವ’ ಶೂಟಿಂಗ್ ಶುರುವಾದ ಮೇಲೆ ಏನಾಯ್ತು?
ಕಳೆದ ಆರೇಳು ತಿಂಗಳ ಹಿಂದೆಯೇ ಯುವ ರಾಜ್‌ಕುಮಾರ್ ಹಾಗೂ ಶ್ರೀದೇವಿ ಅವರು ದೂರ, ದೂರ ಆಗಿದ್ದರು. ಹಲವು ತಿಂಗಳಿಂದ ಯುವ ಜೊತೆ ಶ್ರೀದೇವಿ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ.
ಈ ಹಿಂದೆ ದೊಡ್ಮನೆಯ ಪ್ರತಿ ಕಾರ್ಯಕ್ರಮದಲ್ಲಿ ಇರ್ತಿದ್ದ ಶ್ರೀದೇವಿ ಅವರು ಇತ್ತೀಚೆಗೆ ಎಲ್ಲೂ ಕಾಣಿಸಿಕೊಂಡಿರಲಿಲ್ಲ. 2016ರಲ್ಲಿ ತೆರೆಕಂಡ ಯುವ ರಾಜ್‌ಕುಮಾರ್ ಅವರ ರನ್ ಆ್ಯಂಟನಿ ಚಿತ್ರದ ನಿರ್ಮಾಣದಲ್ಲಿ ಶ್ರೀದೇವಿ ಅವರು ಭಾಗಿಯಾಗಿದ್ದರು. ರನ್ ಆ್ಯಂಟನಿ ಪ್ರಮೋಷನ್‌ನಲ್ಲೂ ಶ್ರೀದೇವಿ ಭೈರಪ್ಪ ಅವರು ತೊಡಗಿಕೊಂಡಿದ್ದರು.

ರನ್‌ ಆ್ಯಂಟನಿ ಸಿನಿಮಾದ ಜವಾಬ್ದಾರಿ ತೆಗೆದುಕೊಂಡಿದ್ದ ಶ್ರೀದೇವಿ ಅವರು ಯುವ ಸಿನಿಮಾ ಮುಹೂರ್ತದಲ್ಲಿ ಇದ್ದರು. ಆದರೆ ಯುವ ಸಿನಿಮಾದ ಶೂಟಿಂಗ್ ಆರಂಭವಾದ ಮೇಲೆ ಏನಾಯ್ತೋ ಗೊತ್ತಿಲ್ಲ. ಯುವ ರಿಲೀಸ್​ ವೇಳೆ ಶ್ರೀದೇವಿ ಅವರು ನಾಪತ್ತೆ ಆಗಿದ್ದರು. ಇದ್ದಕ್ಕಿದ್ದ ಹಾಗೆ ಯುವರಾಜ್ ಜೊತೆ ಅಂತರ ಕಾಯ್ದುಕೊಂಡು ಯುವ ಸಿನಿಮಾದ ಶೂಟಿಂಗ್, ಪ್ರಮೋಷನ್​ಗೂ ನಾಪತ್ತೆಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More