ಹೃದಯ ವಿದ್ರಾವಕ ಘಟನೆ.. ಮಗ ನದಿ ಪಾಲಾದ ಸುದ್ದಿ ಕೇಳಿ ಕೆರೆಗೆ ಹಾರಿದ ತಾಯಿ

author-image
Ganesh
Updated On
ಹೃದಯ ವಿದ್ರಾವಕ ಘಟನೆ.. ಮಗ ನದಿ ಪಾಲಾದ ಸುದ್ದಿ ಕೇಳಿ ಕೆರೆಗೆ ಹಾರಿದ ತಾಯಿ
Advertisment
  • ಜೀಪ್ ಸಮೇತ ಯುವಕ ನದಿಗೆ ಬಿದ್ದ ಪ್ರಕರಣ
  • ಮನನೊಂದ ಯುವಕನ ತಾಯಿಯಿಂದ ಕೆಟ್ಟ ನಿರ್ಧಾರ
  • ಕಳಸ ತಾಲೂಕಿನ ಕೊಳಮಾಗೆ ಬಳಿ ಘಟನೆ

ಚಿಕ್ಕಮಗಳೂರು: ಮಲೆನಾಡಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಪಿಕಪ್ ಜೀಪ್ ನಿಯಂತ್ರಣ ತಪ್ಪಿ ಭದ್ರಾ ನದಿಗೆ ಬಿದ್ದು ಯುವಕ ಸಾ*ವನ್ನಪ್ಪಿದ ಘಟನೆ ಕಳಸ ತಾಲೂಕಿನ ಕೊಳಮಾಗೆ ಗ್ರಾಮದ ಬಳಿ ನಡೆದಿದೆ.

ಭದ್ರಾ ನದಿಯ ಪಕ್ಕದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಜೀಪ್ ನದಿಗೆ ಬಿದ್ದು 23 ವರ್ಷದ ಶಮಂತ್ ಮೃತಪಟ್ಟಿದ್ದಾನೆ. ಚಾಲಕ ಶಮಂತ್ ಕಾಫಿ ತೋಟಕ್ಕೆ ಕಾರ್ಮಿಕರ ಟ್ರಿಪ್ ಹೊಡೆಯುತ್ತಿದ್ದ. ಬಾಡಿಗೆ ಇದೆ ಎಂದು ಕಳಸಕ್ಕೆ ಬಂದು ವಾಪಸ್ ಹೋಗುವಾಗ ಅವಘಡ ಸಂಭವಿಸಿದೆ.

ಇದನ್ನೂ ಓದಿ: ನನಗೆ ದಣಿವಾಗುತ್ತಿದೆ.. ಕೇವಲ ಮೂರೇ 3 ಟೆಸ್ಟ್​ ಪಂದ್ಯಗಳ ನಾಯಕತ್ವಕ್ಕೆ ಸುಸ್ತಾದ ಶುಭ್​ಮನ್​ ಗಿಲ್​..!

ಸ್ಥಳಕ್ಕೆ ಕಳಸ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುರಿಯುತ್ತಿರುವ ಮಳೆಯಿಂದ ಕಾರ್ಯಾಚರಣೆಗೂ ತೊಂದರೆಯುಂಟಾಗಿದೆ. ಬಾಳೆಹೊನ್ನೂರಿನಿಂದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದು, ಮುಳುಗು ತಜ್ಞ ಮಲ್ಪೆ ಈಶ್ವರ್ ಅವರನ್ನೂ ಕರೆಸಲು ಸಿದ್ಧತೆ ನಡೆಸಲಾಗುತ್ತಿದೆ.

ಇದರ ಮಧ್ಯೆ ಆಘಾತಕಾರಿ ಸುದ್ದಿ ಅಂದರೆ, ಸುದ್ದಿ ತಿಳಿಯುತ್ತಿದ್ದಂತೆಯೇ ಯುವಕನ ತಾಯಿ ಸ್ಥಳಕ್ಕೆ ಆಗಮಿಸಿದ್ದರು. ತುಂಬಾನೇ ನೊಂದುಕೊಂಡ ತಾಯಿ, ಮನೆಯ ಹಿಂದಿನ ಕೆರೆಗೆ ಹಾರಿ ಜೀವ ಬಿಟ್ಟಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿ, ಸಂಬಂಧಿಕರಲ್ಲಿ ದುಃಖ ಮತ್ತಷ್ಟು ಮುಡಿಗಟ್ಟಿದೆ.

ಇದನ್ನೂ ಓದಿ: ನೋವು ತಾಳಲಾರದೇ ಇಂಜೆಕ್ಷನ್ ಪಡೆದು ಬ್ಯಾಟ್ ಬೀಸಿದ ಪಂತ್.. ಇದೀಗ ಮತ್ತೊಂದು ಆಘಾತ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment