newsfirstkannada.com

ದೇವಸ್ಥಾನದ ಪೂಜಾರಿಯನ್ನು ಚಾಕುವಿನಿಂದ ಇರಿದು ಕೊಲೆ.. ಚುಚ್ಚಿ ಚುಚ್ಚಿ ಸಾಯಿಸಿದ ದುಷ್ಕರ್ಮಿಗಳು

Share :

Published July 22, 2024 at 9:18am

Update July 22, 2024 at 9:59am

    ಪೂಜಾರಿಯನ್ನು ಚಾಕುವಿನಿಂದ ಇರಿದು ಕೊಲೆ

    ಒಂದು ವರ್ಷದ ಹಿಂದೆ ಪೂಜಾರಿ ಮೇಲೆ ಅಟ್ಯಾಕ್ ನಡೆದಿತ್ತು

    ಪೂಜಾರಿ ಬ್ಲಾಕ್ ಮ್ಯಾಜಿಕ್ ಮಾಡುತ್ತಿದ್ನಾ? ಕೊಲೆ ನಡೆದಿದ್ದೇಕೆ?

ಹುಬ್ಬಳ್ಳಿ: ದೇವಸ್ಥಾನದ ಪೂಜಾರಿಯನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ. ವೈಷ್ಣವಿ ದೇವಸ್ಥಾನದ ಪೂಜಾರಿ ದೇವಪ್ಪಜ್ಜನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಪೂಜಾರಿ ಮೇಲೆ ಅಟ್ಯಾಕ್ ನಡೆದಿತ್ತು. ಅದೃಷ್ಟವಶಾತ್ ಆ ಸಮಯದಲ್ಲಿ ಪೂಜಾರಿ ಬದುಕಿ ಬಂದಿದ್ದರು. ಆದರೆ ನಿನ್ನೆ ದುಷ್ಕರ್ಮಿಗಳ ಇರಿತಕ್ಕೆ ಪೂಜಾರಿ ದೇವಪ್ಪಜ್ಜ ಸಾವನ್ನಪ್ಪಿದ್ದಾರೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Darshan: ಮನೆಯೂಟನಾ? ಜೈಲೂಟವೇ ಗತಿನಾ? ಇಂದು ದರ್ಶನ್​ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ

ಕೊಲೆ ನಡೆದ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ. ಕೊಲೆ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರು, ಕೊಲೆಯ ಪ್ರಕರಣ ಸಂಬಂಧ ಬ್ಲಾಕ್ ಮ್ಯಾಜಿಕ್ ಇತ್ಯಾದಿ ಮಾಡ್ತಿದ್ದ ಎಂಬ ಮಾತುಗಳು ಕೇಳಿ ಬಂದಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಚ್ಚಿಟ್ಟ ಪ್ರೀತಿಯನ್ನ ಇಂದು ಬಿಚ್ಚಿಡಲಿದ್ದಾರೆ ತರುಣ್​ ಸುಧೀರ್​.. ನಿರ್ದೇಶಕನ ಬಾಳಲ್ಲಿ ಬೆಳಕಿನ ಕವಿತೆ ಓದಲಿದ್ದಾರೆ ಈ ನಟಿ!

ಬಳಿಕ ಮಾತು ಮುಂದುವರೆಸಿದ ಪೊಲೀಸ್ ಆಯುಕ್ತ ಶಶಿಕುಮಾರ್, ಓರ್ವ ವ್ಯಕ್ತಿಯಿಂದ ಕೃತ್ಯ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಹಿಡಿತೇವೆ. ಚಾಕುವಿನಿಂದ ಇರಿದು ಆರೋಪಿ ಎಸ್ಕೇಪ್ ಆಗಿದ್ದಾನೆ. ಆಸ್ಪತ್ರೆಗೆ ಕೊಂಡೊಯ್ಯುವುದರೊಳಗೆ ಪೂಜಾರಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋಗಿ ನೀರಲ್ಲಿ ಕೊಚ್ಚಿ ಹೋದ ಯುವಕ.. 3 ದಿನಗಳ ಬಳಿಕ ಶವ ಪತ್ತೆ 

ಈ ಹಿಂದೆಯೂ ಆತನ ಮೇಲೆ ಹಲ್ಲೆ ಪ್ರಕರಣ ನಡೆದಿತ್ತು. ಅದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ನಾಲ್ಕರಿಂದ ಐದು ಬಾರಿ ಚುಚ್ಚಿ ಹತ್ಯೆ ಮಾಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

ದೇವಸ್ಥಾನದ ಪೂಜಾರಿಯನ್ನು ಚಾಕುವಿನಿಂದ ಇರಿದು ಕೊಲೆ.. ಚುಚ್ಚಿ ಚುಚ್ಚಿ ಸಾಯಿಸಿದ ದುಷ್ಕರ್ಮಿಗಳು

https://newsfirstlive.com/wp-content/uploads/2024/07/Hubballi-Priest-Murder.jpg

    ಪೂಜಾರಿಯನ್ನು ಚಾಕುವಿನಿಂದ ಇರಿದು ಕೊಲೆ

    ಒಂದು ವರ್ಷದ ಹಿಂದೆ ಪೂಜಾರಿ ಮೇಲೆ ಅಟ್ಯಾಕ್ ನಡೆದಿತ್ತು

    ಪೂಜಾರಿ ಬ್ಲಾಕ್ ಮ್ಯಾಜಿಕ್ ಮಾಡುತ್ತಿದ್ನಾ? ಕೊಲೆ ನಡೆದಿದ್ದೇಕೆ?

ಹುಬ್ಬಳ್ಳಿ: ದೇವಸ್ಥಾನದ ಪೂಜಾರಿಯನ್ನು ಕೊಲೆ ಮಾಡಿದ ಘಟನೆ ಹುಬ್ಬಳ್ಳಿಯ ಈಶ್ವರ ನಗರದಲ್ಲಿ ನಡೆದಿದೆ. ವೈಷ್ಣವಿ ದೇವಸ್ಥಾನದ ಪೂಜಾರಿ ದೇವಪ್ಪಜ್ಜನನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.

ದುಷ್ಕರ್ಮಿಗಳು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ. ಕಳೆದ ಒಂದು ವರ್ಷದ ಹಿಂದೆ ಪೂಜಾರಿ ಮೇಲೆ ಅಟ್ಯಾಕ್ ನಡೆದಿತ್ತು. ಅದೃಷ್ಟವಶಾತ್ ಆ ಸಮಯದಲ್ಲಿ ಪೂಜಾರಿ ಬದುಕಿ ಬಂದಿದ್ದರು. ಆದರೆ ನಿನ್ನೆ ದುಷ್ಕರ್ಮಿಗಳ ಇರಿತಕ್ಕೆ ಪೂಜಾರಿ ದೇವಪ್ಪಜ್ಜ ಸಾವನ್ನಪ್ಪಿದ್ದಾರೆ. ನವನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Darshan: ಮನೆಯೂಟನಾ? ಜೈಲೂಟವೇ ಗತಿನಾ? ಇಂದು ದರ್ಶನ್​ ಸಲ್ಲಿಸಿದ್ದ ರಿಟ್‌ ಅರ್ಜಿಯ ವಿಚಾರಣೆ

ಕೊಲೆ ನಡೆದ ಸ್ಥಳಕ್ಕೆ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ. ಕೊಲೆ ನಡೆದ ಸ್ಥಳದ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅವರು, ಕೊಲೆಯ ಪ್ರಕರಣ ಸಂಬಂಧ ಬ್ಲಾಕ್ ಮ್ಯಾಜಿಕ್ ಇತ್ಯಾದಿ ಮಾಡ್ತಿದ್ದ ಎಂಬ ಮಾತುಗಳು ಕೇಳಿ ಬಂದಿದೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಚ್ಚಿಟ್ಟ ಪ್ರೀತಿಯನ್ನ ಇಂದು ಬಿಚ್ಚಿಡಲಿದ್ದಾರೆ ತರುಣ್​ ಸುಧೀರ್​.. ನಿರ್ದೇಶಕನ ಬಾಳಲ್ಲಿ ಬೆಳಕಿನ ಕವಿತೆ ಓದಲಿದ್ದಾರೆ ಈ ನಟಿ!

ಬಳಿಕ ಮಾತು ಮುಂದುವರೆಸಿದ ಪೊಲೀಸ್ ಆಯುಕ್ತ ಶಶಿಕುಮಾರ್, ಓರ್ವ ವ್ಯಕ್ತಿಯಿಂದ ಕೃತ್ಯ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆರೋಪಿ ಬಂಧನಕ್ಕೆ ಪ್ರತ್ಯೇಕ ತಂಡ ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಯನ್ನು ಹಿಡಿತೇವೆ. ಚಾಕುವಿನಿಂದ ಇರಿದು ಆರೋಪಿ ಎಸ್ಕೇಪ್ ಆಗಿದ್ದಾನೆ. ಆಸ್ಪತ್ರೆಗೆ ಕೊಂಡೊಯ್ಯುವುದರೊಳಗೆ ಪೂಜಾರಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ದನಗಳ ಮೈ ತೊಳೆಯಲು ಹೋಗಿ ನೀರಲ್ಲಿ ಕೊಚ್ಚಿ ಹೋದ ಯುವಕ.. 3 ದಿನಗಳ ಬಳಿಕ ಶವ ಪತ್ತೆ 

ಈ ಹಿಂದೆಯೂ ಆತನ ಮೇಲೆ ಹಲ್ಲೆ ಪ್ರಕರಣ ನಡೆದಿತ್ತು. ಅದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ನಾಲ್ಕರಿಂದ ಐದು ಬಾರಿ ಚುಚ್ಚಿ ಹತ್ಯೆ ಮಾಡಲಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

 

Load More