newsfirstkannada.com

ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿದ ಆಟೋ ಡ್ರೈವರ್.. ಬೆಚ್ಚಿ ಬಿದ್ದ ಬೆಂಗಳೂರು!

Share :

Published March 1, 2024 at 2:33pm

Update March 1, 2024 at 2:39pm

    ಶಾಂತಿನಗರದ ಡಬಲ್ ರೋಡ್ ಕಟ್ಟಡದ ಬಳಿ ಮಹಿಳೆ ಶವ ಪತ್ತೆ

    ಮಾರ್ಕೆಟ್ ಬಳಿ ಮಹಿಳೆಯನ್ನು ಪಿಕ್ ಮಾಡಿದ ಕಿರಾತಕ ಮಾಡಿದ್ದೇನು?

    ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ ಬಳಿಕ ಅಸಲಿ ಸತ್ಯ ಬಯಲು

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಬಳಿ ಮಹಿಳೆಯ ಶವ ಸಿಕ್ಕ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್ ಸಿಕ್ಕಿದೆ. ಮೃತ ಮಹಿಳೆಯ ಗುರುತು ಪತ್ತೆ ಹಚ್ಚಿರುವ ಪೊಲೀಸರು ಆರೋಪಿ ಆಟೋ ಚಾಲಕನನ್ನು ಬಂಧಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಆಟೋ ಚಾಲಕ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ.

ಕಳೆದ ಫೆಬ್ರವರಿ 20ರಂದು ಶಾಂತಿನಗರದ ಡಬಲ್ ರೋಡ್ ಜನತಾ ಕೋ ಆಪರೇಟಿವ್ ಕಟ್ಟಡದ ಬಳಿ ಮಹಿಳೆಯ ಶವ ಪತ್ತೆಯಾಗಿತ್ತು. ಗುರುತು ಸಿಗದ ರೀತಿಯಲ್ಲಿ ಮಹಿಳೆಯ ಶವ ಇದ್ದಿದ್ದರಿಂದ ಮೇಲ್ನೋಟಕ್ಕೆ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಮಹಿಳೆಯ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ ಬಳಿಕ ಅಸಲಿ ಸತ್ಯ ಬಯಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಟೋಗಾಗಿ ಕಾಯುತ್ತಿದ್ದ ಮಹಿಳೆಯ ಪಿಕ್ ಮಾಡಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಆಟೋ ಚಾಲಕ ಮುಬಾರಕ್ ಎನ್ನುವವರು ನಸುಕಿನ ಜಾವ ಅಪರಿಚಿತ ಮಹಿಳೆಯ ಕರೆ ತಂದು ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ ಅನ್ನೋ ಮಾಹಿತಿ ಕಲೆ ಹಾಕಿದ್ದಾರೆ. ಬಂಧಿತ ಆಟೋ ಚಾಲಕ ವಿಚಾರಣೆ ವೇಳೆ ಕೊಲೆಯ ಅಸಲಿ ಸಂಗತಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Breaking News: ಬೆಂಗಳೂರಿನ ಇಂದಿರಾನಗರದಲ್ಲಿ ನಿಗೂಢ ಸ್ಫೋಟ, ಭಾರೀ ಆತಂಕ

ಅಂದು ಬೆಳಗಿನ ಜಾವ ಆಟೋಗಾಗಿ ಮಾರ್ಕೆಟ್ ಬಳಿ ಮಹಿಳೆ ನಿಂತಿದ್ದಾರೆ. ಈ ವೇಳೆ ಆಟೋ ಚಾಲಕ ಆಕೆಯನ್ನ ಪಿಕ್ ಮಾಡಿ ಸಂಪಂಗಿ ರಾಮನಗರಕ್ಕೆ ಕರೆತಂದಿದ್ದಾರೆ. ಬಳಿಕ ಕಟ್ಟಡದ ಮೊದಲನೇ ಮಹಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿ ಕಟ್ಟಡದಿಂದ ತಳ್ಳಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮಹಿಳೆ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿದ ಆಟೋ ಡ್ರೈವರ್.. ಬೆಚ್ಚಿ ಬಿದ್ದ ಬೆಂಗಳೂರು!

https://newsfirstlive.com/wp-content/uploads/2024/03/Bangalore-Auto-Driver.jpg

    ಶಾಂತಿನಗರದ ಡಬಲ್ ರೋಡ್ ಕಟ್ಟಡದ ಬಳಿ ಮಹಿಳೆ ಶವ ಪತ್ತೆ

    ಮಾರ್ಕೆಟ್ ಬಳಿ ಮಹಿಳೆಯನ್ನು ಪಿಕ್ ಮಾಡಿದ ಕಿರಾತಕ ಮಾಡಿದ್ದೇನು?

    ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ ಬಳಿಕ ಅಸಲಿ ಸತ್ಯ ಬಯಲು

ಬೆಂಗಳೂರು: ನಿರ್ಮಾಣ ಹಂತದ ಕಟ್ಟಡದ ಬಳಿ ಮಹಿಳೆಯ ಶವ ಸಿಕ್ಕ ಪ್ರಕರಣಕ್ಕೆ ಭಯಾನಕ ಟ್ವಿಸ್ಟ್ ಸಿಕ್ಕಿದೆ. ಮೃತ ಮಹಿಳೆಯ ಗುರುತು ಪತ್ತೆ ಹಚ್ಚಿರುವ ಪೊಲೀಸರು ಆರೋಪಿ ಆಟೋ ಚಾಲಕನನ್ನು ಬಂಧಿಸಿದ್ದಾರೆ. ಪೊಲೀಸರ ತನಿಖೆಯಲ್ಲಿ ಆಟೋ ಚಾಲಕ ಕೊಲೆ ಸತ್ಯ ಬಾಯ್ಬಿಟ್ಟಿದ್ದಾನೆ.

ಕಳೆದ ಫೆಬ್ರವರಿ 20ರಂದು ಶಾಂತಿನಗರದ ಡಬಲ್ ರೋಡ್ ಜನತಾ ಕೋ ಆಪರೇಟಿವ್ ಕಟ್ಟಡದ ಬಳಿ ಮಹಿಳೆಯ ಶವ ಪತ್ತೆಯಾಗಿತ್ತು. ಗುರುತು ಸಿಗದ ರೀತಿಯಲ್ಲಿ ಮಹಿಳೆಯ ಶವ ಇದ್ದಿದ್ದರಿಂದ ಮೇಲ್ನೋಟಕ್ಕೆ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿತ್ತು. ಮಹಿಳೆಯ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ ಬಳಿಕ ಅಸಲಿ ಸತ್ಯ ಬಯಲಾಗಿದೆ.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆಟೋಗಾಗಿ ಕಾಯುತ್ತಿದ್ದ ಮಹಿಳೆಯ ಪಿಕ್ ಮಾಡಿ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ಆಟೋ ಚಾಲಕ ಮುಬಾರಕ್ ಎನ್ನುವವರು ನಸುಕಿನ ಜಾವ ಅಪರಿಚಿತ ಮಹಿಳೆಯ ಕರೆ ತಂದು ಅತ್ಯಾಚಾರ ಎಸಗಿ ಕೊಲೆಗೈದಿದ್ದಾನೆ ಅನ್ನೋ ಮಾಹಿತಿ ಕಲೆ ಹಾಕಿದ್ದಾರೆ. ಬಂಧಿತ ಆಟೋ ಚಾಲಕ ವಿಚಾರಣೆ ವೇಳೆ ಕೊಲೆಯ ಅಸಲಿ ಸಂಗತಿ ಒಪ್ಪಿಕೊಂಡಿದ್ದಾನೆ.

ಇದನ್ನೂ ಓದಿ: Breaking News: ಬೆಂಗಳೂರಿನ ಇಂದಿರಾನಗರದಲ್ಲಿ ನಿಗೂಢ ಸ್ಫೋಟ, ಭಾರೀ ಆತಂಕ

ಅಂದು ಬೆಳಗಿನ ಜಾವ ಆಟೋಗಾಗಿ ಮಾರ್ಕೆಟ್ ಬಳಿ ಮಹಿಳೆ ನಿಂತಿದ್ದಾರೆ. ಈ ವೇಳೆ ಆಟೋ ಚಾಲಕ ಆಕೆಯನ್ನ ಪಿಕ್ ಮಾಡಿ ಸಂಪಂಗಿ ರಾಮನಗರಕ್ಕೆ ಕರೆತಂದಿದ್ದಾರೆ. ಬಳಿಕ ಕಟ್ಟಡದ ಮೊದಲನೇ ಮಹಡಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಕೊಲೆ ಮಾಡಲು ನಿರ್ಧರಿಸಿ ಕಟ್ಟಡದಿಂದ ತಳ್ಳಿದ್ದಾನೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More