Advertisment

ಕುದುರೆ ಸವಾರಿ ಮಾಡುವಾಗ ಯಾದವರಾಜ ವಂಶಸ್ಥ ದಾರುಣ ಸಾವು; ಕೊನೇ ಕ್ಷಣದ ವಿಡಿಯೋ ವೈರಲ್‌!

author-image
admin
Updated On
ಕುದುರೆ ಸವಾರಿಯಲ್ಲಿ ಸಾವು.. ಈ ರಾಜವಂಶಸ್ಥನ ದುರಂತ ಎಂಥವರಿಗೂ ಕಣ್ಣೀರು ತರಿಸುತ್ತೆ; ಆಗಿದ್ದೇನು?
Advertisment
  • ಕುದುರೆ ಸವಾರಿ ಪ್ರಾಕ್ಟೀಸ್ ಮಾಡುವಾಗ ರಾಜವಂಶಸ್ಥನ ದುರಂತ
  • ದಸರಾ ಹಬ್ಬದ ವೇಳೆ ಯಾದವರಾಜ ವಂಶದಲ್ಲಿ ಕುದುರೆ ಸವಾರಿ
  • ಕುದುರೆ ಸವಾರಿ ಕಲಿಯುವಾಗ ರಾಜವಂಶಸ್ಥನ ದಾರುಣ ಸಾವು

ಕರ್ನೂಲ್‌: ಕುದುರೆ ಸವಾರಿ ಅಂದ್ರೆ ರಾಜರ ಕಾಲದ ಯುದ್ಧಗಳು ನೆನಪಿಗೆ ಬರುತ್ತೆ. ಈಗಂತೂ ಕುದುರೆ ಸವಾರಿ ಮಾಡೋದು, ಕಲಿಯೋದು ಬಹಳ ಅಪರೂಪ. ಆದರೆ ರಾಜವಂಶಸ್ಥರೊಬ್ಬರು ಕುದುರೆ ಸವಾರಿ ಪ್ರಾಕ್ಟೀಸ್ ಮಾಡುವಾಗ ಸಾವನ್ನಪ್ಪಿರುವ ದಾರುಣ ಘಟನೆ ಆಂಧ್ರದ ಕರ್ನೂಲ್ ಜಿಲ್ಲೆಯಲ್ಲಿ ನಡೆದಿದೆ.

Advertisment

ಇದನ್ನೂ ಓದಿ: ಸಲ್ಲು ಭಾಯ್​ ಬಾಡಿಗಾರ್ಡ್​ಗೆ ಕೋಟಿ ಕೋಟಿ ರೂಪಾಯಿ ಸ್ಯಾಲರಿ..! ಇವರಿಗೆ ಏನೆಂದು ಕರೆಯುತ್ತಾರೆ ಗೊತ್ತಾ..? 

ಕರ್ನೂಲ್ ಜಿಲ್ಲೆಯ ಯಾದವರಾಜ ವಂಶದಲ್ಲಿ ಕುದುರೆ ಸವಾರಿ ಮಾಡಲಾಗುತ್ತೆ. ದಸರಾ ಹಬ್ಬದ ವೇಳೆ ಯಾದವರಾಜ ವಂಶದಲ್ಲಿ ಕುದುರೆ ಸವಾರಿ ಮಾಡುವುದು ದೀರ್ಘಕಾಲದ ಪರಂಪರೆ. ಆ ಪರಂಪರೆಯ ಭಾಗವಾಗಿ ಯಾದವರಾಜ ವಂಶಸ್ಥರು ಕುದುರೆ ಸವಾರಿ ಮಾಡುತ್ತಾರೆ.

publive-image

ಇದನ್ನೂ ಓದಿ: ಊಟದಲ್ಲಿ ಇಲ್ಲದ ಉಪ್ಪಿನ ಕಾಯಿ.. ಹೋಟೆಲ್​ಗೆ 35,000 ರೂಪಾಯಿ ದಂಡ ವಿಧಿಸಿದ ಕೋರ್ಟ್​ 

Advertisment

ತಲತಲಾಂತರದ ಕುದುರೆ ಸವಾರಿ ಕಲಿಯುವಾಗ ರಾಜವಂಶಸ್ಥ ಪೃಥ್ವಿರಾಜ್‌ ರಾಯುಡು ಅವರು ಆಕಸ್ಮಿಕವಾಗಿ ಬಿದ್ದಿದ್ದಾರೆ. ಕುದುರೆ ಸವಾರಿ ಮಾಡುವಾಗ ಕಂಟ್ರೋಲ್ ತಪ್ಪಿ ಕೆಳಗೆ ಬಿದ್ದ ಪೃಥ್ವಿರಾಜ್ ರಾಯುಡು ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ತೀವ್ರ ಗಾಯಗೊಂಡ ಪೃಥ್ವಿರಾಜ್ ರಾಯುಡು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.


">July 29, 2024

ಕುದುರೆ ಸವಾರಿ ವೇಳೆ ಪೃಥ್ವಿರಾಜ್ ರಾಯುಡು ಆಕಸ್ಮಿಕವಾಗಿ ಕೆಳಗೆ ಬಿದ್ದಿರೋ ವಿಡಿಯೋ ಸೆರೆ ಹಿಡಿಯಲಾಗಿದೆ. ಕೆಳಗೆ ಬಿದ್ದ ಪೃಥ್ವಿರಾಜ್ ಬದುಕುತ್ತಾನೆ ಎಂದು ನಿರೀಕ್ಷೆಯಲ್ಲಿದ್ದ ರಾಜವಂಶಸ್ಥರು ದಿಗ್ಭ್ರಾಂತರಾಗಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment