newsfirstkannada.com

ಕಾಡಿನಿಂದ ನಾಡಿಗೆ ಬಂದ ಕರಡಿ ಮರಿ; ಸ್ಥಳೀಯರು ಫುಲ್​​ ಶಾಕ್​; ಆಮೇಲೇನಾಯ್ತು?

Share :

Published August 12, 2023 at 7:04pm

    ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದ ಕರಡಿ

    ಕರಡಿ ಮರಿಯನ್ನು ಕಂಡ ಸ್ಥಳೀಯರು ಶಾಕ್!

    ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹಿಡಿದು ಹಾಕಿದ್ರು

ಹೈದರಾಬಾದ್​​: ಕರಡಿ ಮರಿಯೊಂದು ಕಾಡಿನಿಂದ ನಾಡಿಗೆ ಬಂದಿದೆ. ಪಾಪ ದಿಕ್ಕು ತೋಚದೆ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದೆ. ಈ ಕರಡಿಯನ್ನು ಜನ ಓಡಿಸಿಕೊಂಡು ಹೋದ ಘಟನೆ ತೆಲಂಗಾಣದ ಕರೀಮ್​​ನಗರದಲ್ಲಿ ನಡೆದಿದೆ.

ಇನ್ನು, ನಗರದಲ್ಲಿ ಕರಡಿ ಮರಿಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಯಾವುದೇ ಅನಾಹುತ ಸಂಭವಿಸಬಾರದು ಎಂದು ಜನ ಕರಡಿ ಮರಿಯನ್ನು ಓಡಿಸಲು ಯತ್ನಿಸಿದ್ದಾರೆ. ಜನರಿಗೆ ಹೆದರಿ ಕರಡಿ ಮರಿ ಓಡಲು ಶುರು ಮಾಡಿದೆ.

ಕರಡಿ ಮರಿಯನ್ನು ಹಿಡಿಯಲು ಹರಸಾಹಸ ಪಟ್ಟ ಜನ ದಿಕ್ಕು ತೋಚದೆ ನೇರ ಅರಣ್ಯ ಇಲಾಖೆ ಸಿಬ್ಬಂದಿ ವಿಷಯ ಮುಟ್ಟಿಸಿದ್ದಾರೆ. ಈ ಕೂಡಲೇ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಮರಿಯನ್ನು ಹಿಡಿದು ಬೋನ್​​ಗೆ ಹಾಕಿ ನಂತರ ಕಾಡಿಗೆ ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಡಿನಿಂದ ನಾಡಿಗೆ ಬಂದ ಕರಡಿ ಮರಿ; ಸ್ಥಳೀಯರು ಫುಲ್​​ ಶಾಕ್​; ಆಮೇಲೇನಾಯ್ತು?

https://newsfirstlive.com/wp-content/uploads/2023/08/Bears.jpg

    ದಾರಿ ತಪ್ಪಿ ಕಾಡಿನಿಂದ ನಾಡಿಗೆ ಬಂದ ಕರಡಿ

    ಕರಡಿ ಮರಿಯನ್ನು ಕಂಡ ಸ್ಥಳೀಯರು ಶಾಕ್!

    ಅರಣ್ಯ ಇಲಾಖೆ ಸಿಬ್ಬಂದಿ ಬಂದು ಹಿಡಿದು ಹಾಕಿದ್ರು

ಹೈದರಾಬಾದ್​​: ಕರಡಿ ಮರಿಯೊಂದು ಕಾಡಿನಿಂದ ನಾಡಿಗೆ ಬಂದಿದೆ. ಪಾಪ ದಿಕ್ಕು ತೋಚದೆ ನಗರದ ಪ್ರಮುಖ ರಸ್ತೆಗಳಲ್ಲಿ ಓಡಾಡುತ್ತಿದೆ. ಈ ಕರಡಿಯನ್ನು ಜನ ಓಡಿಸಿಕೊಂಡು ಹೋದ ಘಟನೆ ತೆಲಂಗಾಣದ ಕರೀಮ್​​ನಗರದಲ್ಲಿ ನಡೆದಿದೆ.

ಇನ್ನು, ನಗರದಲ್ಲಿ ಕರಡಿ ಮರಿಯನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಯಾವುದೇ ಅನಾಹುತ ಸಂಭವಿಸಬಾರದು ಎಂದು ಜನ ಕರಡಿ ಮರಿಯನ್ನು ಓಡಿಸಲು ಯತ್ನಿಸಿದ್ದಾರೆ. ಜನರಿಗೆ ಹೆದರಿ ಕರಡಿ ಮರಿ ಓಡಲು ಶುರು ಮಾಡಿದೆ.

ಕರಡಿ ಮರಿಯನ್ನು ಹಿಡಿಯಲು ಹರಸಾಹಸ ಪಟ್ಟ ಜನ ದಿಕ್ಕು ತೋಚದೆ ನೇರ ಅರಣ್ಯ ಇಲಾಖೆ ಸಿಬ್ಬಂದಿ ವಿಷಯ ಮುಟ್ಟಿಸಿದ್ದಾರೆ. ಈ ಕೂಡಲೇ ಘಟನಾ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕರಡಿ ಮರಿಯನ್ನು ಹಿಡಿದು ಬೋನ್​​ಗೆ ಹಾಕಿ ನಂತರ ಕಾಡಿಗೆ ಬಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More