newsfirstkannada.com

ಬಾರ್​ನಲ್ಲಿ ಜಸ್ಟ್​ ಕಾಲು ತಾಗಿತು ಅಷ್ಟೇ.. ಯುವಕನನ್ನ ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪುಂಡರು

Share :

Published March 25, 2024 at 11:28am

    ಸ್ಥಳೀಯ ಮಂಜುನಾಥ ಅಪಾರ್ಟ್​ಮೆಂಟ್​ನಲ್ಲಿ ಇದ್ದ ಯುವಕ

    ರೂಮ್​ ಒಳಗೆ ಹೋಗಲು ಬಿಡದೇ ಎಳೆದು ಅಟ್ಟಾಡಿಸಿ ಹಲ್ಲೆ

    ಯುವಕನನ್ನು ಠಾಣೆಗೆ ಕರೆಸಿ ದೂರು ದಾಖಲಿಸಿದ ಪೊಲೀಸರು

ಉಡುಪಿ: ಬಾರ್​ನಲ್ಲಿ ಮದ್ಯಪಾನ ಮಾಡುವಾಗ ಕಾಲು ತಾಗಿತು ಎಂದು 6 ಮಂದಿ ಸೇರಿ ಯುವಕನನ್ನ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಣಿಪಾಲ ಸರಳೆಬೆಟ್ಟು ಬಳಿ ನಡೆದಿದೆ.

ಮುಂಬೈ ಮೂಲದ ಆರುಷ್ ಕುಮಾರ್ (21) ಹಲ್ಲೆಗೊಳಗಾದ ಯುವಕ. ಮಣಿಪಾಲ ಎಂಐಟಿ ಕಾಲೇಜಿನ ಆರುಷ್ ವಿದ್ಯಾರ್ಥಿಯಾಗಿದ್ದಾರೆ. ಡಿ ಆಂಡ್ ಟಿ ಬಾರ್​ನಲ್ಲಿ ಮದ್ಯಪಾನ ಮಾಡುವಾಗ ಪುಂಡರ ಗುಂಪಿನ ಓರ್ವನಿಗೆ ಯುವಕನ ಕಾಲು ತಾಗಿದೆ. ಇದೇ ವಿಚಾರಕ್ಕೆ ಬಾರ್​ನಲ್ಲೇ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಇದಾದ ಬಳಿಕ ಮಂಜುನಾಥ್​ ಅಪಾರ್ಟ್​​ಮೆಂಟ್​ವರೆಗೂ ಯುವಕನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ರೂಮ್​ ಒಳಗೆ ಹೋಗಲು ಬಿಡದೇ ಎಳೆದುಕೊಂಡು ಬಂದು ಥಳಿಸಿದ್ದಾರೆ.

ಇದನ್ನೂ ಓದಿ: ಮರಳಿ ಗೂಡಿಗೆ ಬಂದ ಗಾಲಿ.. ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆ

ಇದೇ ವೇಳೆ ಸ್ನೇಹಿತರು ಯುವಕನನ್ನು ರಕ್ಷಣೆಗೆ ಬಂದಿದ್ದಾರೆ. ಆ ಬಳಿಕ ಮೊಬೈಲ್​ಗೆ ಕರೆ ಮಾಡಿ ಮತ್ತೊಮ್ಮೆ ಹಲ್ಲೆ ನಡೆಸುವುದಾಗಿ ಪುಂಡರು ಬೆದರಿಕೆ ಹಾಕಿದ್ದಾರೆ. ಸದ್ಯ ಈ ಘಟನೆ ಸಂಬಂಧ ಯುವಕನನ್ನ ಮಣಿಪಾಲ ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಹಾಗೂ ಯುವಕರ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾರ್​ನಲ್ಲಿ ಜಸ್ಟ್​ ಕಾಲು ತಾಗಿತು ಅಷ್ಟೇ.. ಯುವಕನನ್ನ ಅಟ್ಟಾಡಿಸಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ ಪುಂಡರು

https://newsfirstlive.com/wp-content/uploads/2024/03/UDP_HALLE.jpg

    ಸ್ಥಳೀಯ ಮಂಜುನಾಥ ಅಪಾರ್ಟ್​ಮೆಂಟ್​ನಲ್ಲಿ ಇದ್ದ ಯುವಕ

    ರೂಮ್​ ಒಳಗೆ ಹೋಗಲು ಬಿಡದೇ ಎಳೆದು ಅಟ್ಟಾಡಿಸಿ ಹಲ್ಲೆ

    ಯುವಕನನ್ನು ಠಾಣೆಗೆ ಕರೆಸಿ ದೂರು ದಾಖಲಿಸಿದ ಪೊಲೀಸರು

ಉಡುಪಿ: ಬಾರ್​ನಲ್ಲಿ ಮದ್ಯಪಾನ ಮಾಡುವಾಗ ಕಾಲು ತಾಗಿತು ಎಂದು 6 ಮಂದಿ ಸೇರಿ ಯುವಕನನ್ನ ಅಟ್ಟಾಡಿಸಿ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಮಣಿಪಾಲ ಸರಳೆಬೆಟ್ಟು ಬಳಿ ನಡೆದಿದೆ.

ಮುಂಬೈ ಮೂಲದ ಆರುಷ್ ಕುಮಾರ್ (21) ಹಲ್ಲೆಗೊಳಗಾದ ಯುವಕ. ಮಣಿಪಾಲ ಎಂಐಟಿ ಕಾಲೇಜಿನ ಆರುಷ್ ವಿದ್ಯಾರ್ಥಿಯಾಗಿದ್ದಾರೆ. ಡಿ ಆಂಡ್ ಟಿ ಬಾರ್​ನಲ್ಲಿ ಮದ್ಯಪಾನ ಮಾಡುವಾಗ ಪುಂಡರ ಗುಂಪಿನ ಓರ್ವನಿಗೆ ಯುವಕನ ಕಾಲು ತಾಗಿದೆ. ಇದೇ ವಿಚಾರಕ್ಕೆ ಬಾರ್​ನಲ್ಲೇ ಯುವಕನ ಮೇಲೆ ಹಲ್ಲೆ ಮಾಡಲಾಗಿದೆ. ಇದಾದ ಬಳಿಕ ಮಂಜುನಾಥ್​ ಅಪಾರ್ಟ್​​ಮೆಂಟ್​ವರೆಗೂ ಯುವಕನನ್ನು ಅಟ್ಟಾಡಿಸಿಕೊಂಡು ಹೊಡೆದಿದ್ದಾರೆ. ರೂಮ್​ ಒಳಗೆ ಹೋಗಲು ಬಿಡದೇ ಎಳೆದುಕೊಂಡು ಬಂದು ಥಳಿಸಿದ್ದಾರೆ.

ಇದನ್ನೂ ಓದಿ: ಮರಳಿ ಗೂಡಿಗೆ ಬಂದ ಗಾಲಿ.. ಜನಾರ್ದನ ರೆಡ್ಡಿ, ಪತ್ನಿ ಅರುಣಾ ಲಕ್ಷ್ಮಿ ಬಿಜೆಪಿ ಪಕ್ಷಕ್ಕೆ ಅಧಿಕೃತ ಸೇರ್ಪಡೆ

ಇದೇ ವೇಳೆ ಸ್ನೇಹಿತರು ಯುವಕನನ್ನು ರಕ್ಷಣೆಗೆ ಬಂದಿದ್ದಾರೆ. ಆ ಬಳಿಕ ಮೊಬೈಲ್​ಗೆ ಕರೆ ಮಾಡಿ ಮತ್ತೊಮ್ಮೆ ಹಲ್ಲೆ ನಡೆಸುವುದಾಗಿ ಪುಂಡರು ಬೆದರಿಕೆ ಹಾಕಿದ್ದಾರೆ. ಸದ್ಯ ಈ ಘಟನೆ ಸಂಬಂಧ ಯುವಕನನ್ನ ಮಣಿಪಾಲ ಠಾಣೆಗೆ ಕರೆಯಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಹಾಗೂ ಯುವಕರ ಮೊಬೈಲ್ ಸಂಖ್ಯೆ ಆಧರಿಸಿ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More