newsfirstkannada.com

BREAKING: ನಮ್ಮ ಮೆಟ್ರೋದಲ್ಲಿ ಮತ್ತೊಂದು ಅನಾಹುತ; ಕೆಲ ಕಾಲ ಪ್ರಯಾಣಿಕರು ಕಂಗಾಲು 

Share :

Published June 10, 2024 at 9:41pm

Update June 10, 2024 at 9:45pm

    ಇದ್ದಕ್ಕಿದ್ದಂತೆ ಮೆಟ್ರೋ ಹಳಿಗೆ ಹಾರಿದ ಯುವಕ.. ಆಮೇಲೇನಾಯ್ತು?

    ಹೊಸಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ಪ್ರಯಾಣಕರಿಗೆ ಭಾರೀ ತೊಂದರೆ

    ಇದ್ದಕ್ಕಿದ್ದಂತೆ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಅನಾಹುತ ಸೃಷ್ಟಿಸಿದ ಯುವಕ

ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಹಾರಿದ ಯುವಕ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಹೊಸಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ನಡೆದಿದೆ. ಇದ್ದಕ್ಕಿದ್ದಂತೆ ಮೆಟ್ರೋ ಟ್ರ್ಯಾಕ್‌ಗೆ ಯುವಕ ಹಾರಿದ್ದಾನೆ.

ಇದನ್ನೂ ಓದಿ: ‘ಸ್ನೇಹಿತೆ ಜೊತೆ ಮದುವೆಯಾಗಿ ಸಹ ನಟಿ ಜತೆ ಲವ್‌’- ಯುವ ವಿಚ್ಛೇದನಕ್ಕೆ ಶ್ರೀದೇವಿ ಖಡಕ್ ರಿಪ್ಲೈ; ಹೇಳಿದ್ದೇನು? 

ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು ಮೆಟ್ರೋ ಸಿಬ್ಬಂದಿ ಕೂಡಲೇ ಪವರ್ ಆಫ್ ಮಾಡಿದ್ದಾರೆ. ಟ್ರ್ಯಾಕ್‌ಗೆ ಹಾರಿದ ಯುವಕನ ತಲೆಗೆ ಗಂಭೀರ ಗಾಯಗಳಾಗಿದೆ. ಫಟ್ ಅಂತ ಮೆಟ್ರೋ ಟ್ರೈನ್ ಸ್ಟಾಪ್ ಮಾಡಿದ್ದರಿಂದ ಸಂಭವಿಸಬಹುದಾದ ದೊಡ್ಡ ಆಪತ್ತು ತಪ್ಪಿದೆ. ಅದೃಷ್ಟವಶಾತ್ ಯುವಕನ ಮೇಲೆ ಟ್ರೈನ್ ಹರಿದು ಬಂದಿಲ್ಲ.

ಈ ಘಟನೆಯಿಂದಾಗಿ ಕೆಲ ಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೊಸಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ಯುವಕನೊಬ್ಬ ಆತ್ಮಹತ್ಯೆ ಯತ್ನಿಸಿದ ಬಳಿಕ ಪ್ರಯಾಣಿಕರಿಗೆ ತೊಂದರೆಯಾಗಿದೆ. ಮೆಟ್ರೋ ನಿಲ್ದಾಣದಲ್ಲಿ ಜನ ಸಾಗರ ಸೇರಿದ್ದು, ಇನ್ನು ಅರ್ಧ ಘಂಟೆ ಒಳಗಡೆ ಎಂದಿನಂತೆ ಮೆಟ್ರೋ ಸಂಚಾರ ಮಾಡುವ ಭರವಸೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ನಮ್ಮ ಮೆಟ್ರೋದಲ್ಲಿ ಮತ್ತೊಂದು ಅನಾಹುತ; ಕೆಲ ಕಾಲ ಪ್ರಯಾಣಿಕರು ಕಂಗಾಲು 

https://newsfirstlive.com/wp-content/uploads/2024/01/Metro.jpg

    ಇದ್ದಕ್ಕಿದ್ದಂತೆ ಮೆಟ್ರೋ ಹಳಿಗೆ ಹಾರಿದ ಯುವಕ.. ಆಮೇಲೇನಾಯ್ತು?

    ಹೊಸಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ಪ್ರಯಾಣಕರಿಗೆ ಭಾರೀ ತೊಂದರೆ

    ಇದ್ದಕ್ಕಿದ್ದಂತೆ ಮೆಟ್ರೋ ಟ್ರ್ಯಾಕ್‌ಗೆ ಜಿಗಿದು ಅನಾಹುತ ಸೃಷ್ಟಿಸಿದ ಯುವಕ

ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಹಾರಿದ ಯುವಕ ಆತ್ಮಹತ್ಯೆಗೆ ಯತ್ನಿಸಿರೋ ಘಟನೆ ಹೊಸಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ನಡೆದಿದೆ. ಇದ್ದಕ್ಕಿದ್ದಂತೆ ಮೆಟ್ರೋ ಟ್ರ್ಯಾಕ್‌ಗೆ ಯುವಕ ಹಾರಿದ್ದಾನೆ.

ಇದನ್ನೂ ಓದಿ: ‘ಸ್ನೇಹಿತೆ ಜೊತೆ ಮದುವೆಯಾಗಿ ಸಹ ನಟಿ ಜತೆ ಲವ್‌’- ಯುವ ವಿಚ್ಛೇದನಕ್ಕೆ ಶ್ರೀದೇವಿ ಖಡಕ್ ರಿಪ್ಲೈ; ಹೇಳಿದ್ದೇನು? 

ಹಳಿಗೆ ಹಾರಿ ಯುವಕ ಆತ್ಮಹತ್ಯೆಗೆ ಯತ್ನಿಸಿದ್ದು ಮೆಟ್ರೋ ಸಿಬ್ಬಂದಿ ಕೂಡಲೇ ಪವರ್ ಆಫ್ ಮಾಡಿದ್ದಾರೆ. ಟ್ರ್ಯಾಕ್‌ಗೆ ಹಾರಿದ ಯುವಕನ ತಲೆಗೆ ಗಂಭೀರ ಗಾಯಗಳಾಗಿದೆ. ಫಟ್ ಅಂತ ಮೆಟ್ರೋ ಟ್ರೈನ್ ಸ್ಟಾಪ್ ಮಾಡಿದ್ದರಿಂದ ಸಂಭವಿಸಬಹುದಾದ ದೊಡ್ಡ ಆಪತ್ತು ತಪ್ಪಿದೆ. ಅದೃಷ್ಟವಶಾತ್ ಯುವಕನ ಮೇಲೆ ಟ್ರೈನ್ ಹರಿದು ಬಂದಿಲ್ಲ.

ಈ ಘಟನೆಯಿಂದಾಗಿ ಕೆಲ ಕಾಲ ಮೆಟ್ರೋ ಸಂಚಾರ ಸ್ಥಗಿತವಾಗಿತ್ತು. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹೊಸಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ ಯುವಕನೊಬ್ಬ ಆತ್ಮಹತ್ಯೆ ಯತ್ನಿಸಿದ ಬಳಿಕ ಪ್ರಯಾಣಿಕರಿಗೆ ತೊಂದರೆಯಾಗಿದೆ. ಮೆಟ್ರೋ ನಿಲ್ದಾಣದಲ್ಲಿ ಜನ ಸಾಗರ ಸೇರಿದ್ದು, ಇನ್ನು ಅರ್ಧ ಘಂಟೆ ಒಳಗಡೆ ಎಂದಿನಂತೆ ಮೆಟ್ರೋ ಸಂಚಾರ ಮಾಡುವ ಭರವಸೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More