/newsfirstlive-kannada/media/post_attachments/wp-content/uploads/2024/05/ABD-KOHLI.jpg)
ನಿನ್ನೆ ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​​ ಸ್ಟೇಡಿಯಮ್​ನಲ್ಲಿ ನಡೆದ 2024ರ ಇಂಡಿಯನ್​ ಪ್ರೀಮಿಯರ್​ 17ನೇ ಸೀಸನ್​​ ಎಲಿಮಿನೇಟರ್​ ಪಂದ್ಯದಲ್ಲಿ ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ರಾಜಸ್ಥಾನ್​ ರಾಯಲ್ಸ್​ ಗೆದ್ದು ಬೀಗಿದೆ. ಈ ಮೂಲಕ ಕ್ವಾಲಿಫೈಯರ್​​ 2ಕ್ಕೆ ಎಂಟ್ರಿ ಕೊಟ್ಟಿದೆ.
ಕಪ್​ ಗೆಲ್ಲುವ ಕನಸಿನ ಓಟವನ್ನು ಆರ್​ಸಿಬಿ ಈ ವರ್ಷಕ್ಕೆ ಕೊನೆಗೊಳಿಸಿದೆ. ಮುಂದಿನ ವರ್ಷ ಮತ್ತೆ ಪುಟಿದು ಬರಲಿದೆ. ಇನ್ನು ಆರ್​​ಸಿಬಿ ಸೋಲುತ್ತಿದ್ದಂತೆ ಕೋಟ್ಯಾಂತ ಅಭಿಮಾನಿಗಳ ಹೃದಯ ಒಡೆದಿದೆ. ಕನಸು ನುಚ್ಚು ನೂರಾದ ಹಿನ್ನೆಲೆಯಲ್ಲಿ ಬೇಸಪಟ್ಟುಕೊಂಡಿದ್ದಾರೆ.
ಅಂತೆಯೇ ಆರ್​​ಸಿಬಿ ತಂಡದ ಮಾಜಿ ಆಟಗಾರ ಎಬಿ ಡೆವಿಲಿಯರ್ಸ್​​ ಕೂಡ ನೋವು ತೋಡಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಿಗೆ ಹೊಸ ಭರವಸೆ ನೀಡಿದ್ದಾರೆ. ಕಳೆದುಕೊಳ್ಳುವುದು ಯಾವಾಗಲೂ ನೋವಿನಿಂದ ಕೂಡಿರುತ್ತದೆ. ನಾನೊಬ್ಬ ಅಭಿಮಾನಿಯಾಗಿ.. ಆರ್​​ಸಿಬಿ ಮೇಲೆ ಹೆಮ್ಮೆ ಇದೆ. ಮೇ ತಿಂಗಳ ಆರಂಭದಲ್ಲಿ ಎಲ್ಲ ಭರವಸೆಗಳು ಕಳೆದು ಹೋದಂತೆ ತೋರುತ್ತಿದ್ದರೂ ನಂಬುವಂತೆ ಮಾಡಿದ ನಮ್ಮ ಹುಡುಗರ ಮೇಲೆ ಹೆಮ್ಮೆ ಇದೆ. ಮುಂದಿನ ವರ್ಷ ಖಂಡಿತ ಸ್ಟ್ರಾಂಗ್​ ಆಗಿ ಕಮ್​​ಬ್ಯಾಕ್ ಮಾಡಲಿದೆ. ಜೊತೆಗೆ ಮನೆಗೆ ಕಪ್​ ತೆಗೆದುಕೊಂಡು ಹೋಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
It’s always painful to lose. But as a fan, I’m proud of the boys for making us believe, even when all hope seemed lost at the start of May.
I’m sure #RCB will come back stronger next year and bring home that elusive title. 💪 ❤️ #IPL2024— AB de Villiers (@ABdeVilliers17) May 22, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ