ನವ ಜೋಡಿಗೆ ವಿನೂತನ ರೀತಿಯ ಕೊಡುಗೆ ನೀಡಿದ ಅಭಿಮಾನಿ
ಹೋರಿ ಮೈ ಮೇಲೆ ಚಿತ್ರ ನೋಡಿ ಫುಲ್ ಖುಷ್ ಆದ ನವ ದಂಪತಿ
ಅಂಬರೀಶ್-ಸುಮಲತಾರನ್ನು ಮರೆಯದ ಮಂಡ್ಯ ಜನರು..!
ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರ ಮದುವೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಮದುವೆಗೆ ಸ್ಯಾಂಡಲ್ವುಡ್ನ ನಟ-ನಟಿಯರು ಸೇರಿದಂತೆ ರಾಜಕಾರಣಿಗಳು ಬಂದು ನವ ಜೋಡಿಗೆ ಶುಭಾ ಹಾರೈಸಿದ್ದರು. ಇದಾದ ಬಳಿಕ ಮಂಡ್ಯದ ಗೆಜ್ಜಲಗೆರೆ ಬಳಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿ ಬೀಗರ ಔತಣಕೂಟ ಭರ್ಜರಿಯಾಗಿ ನೆರವೇರಿಸಲಾಗಿತ್ತು. ಇದೇ ವೇಳೆಯೇ ಅಂಬರೀಶ್ ಅಭಿಮಾನಿಯೊಬ್ಬರು ನವ ಜೋಡಿಗೆ ವಿನೂತನ ರೀತಿಯ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ.
ಅಂಬರೀಶ್ ಅವರು ದೈಹಿಕವಾಗಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಅಬಂರೀಶ್ ಅಂದರೇ ಮಂಡ್ಯ, ಮಂಡ್ಯ ಅಂದರೇ ಅಂಬರೀಶ್ ಎನ್ನುವಂತೆ ಈಗಲೂ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೋರಿವೊಂದನ್ನು ಹೂವುಗಳಿಂದ ಸಿಂಗಾರ ಮಾಡಿ ಅದರ ಮೇಲೆ ಮೈ ಮೇಲೆ ನವದಂಪತಿ ಅಭಿಷೇಕ್-ಅವಿವಾ ಅವರ ಚಿತ್ರ ಬಿಡಿಸಲಾಗಿದೆ. ಅಲ್ಲದೇ ಹೋರಿಯ ಕೊಂಬುಗಳ ಬಳಿ ಹೂವಿನ ಸಿಂಗಾರದಲ್ಲಿ ಅಂಬಿ-ಸುಮಲತಾ ಅವರ ಫೋಟೊವನ್ನು ಅಂಟಿಸಲಾಗಿದೆ.
ಇದನ್ನು ನೋಡಿದ ಸಂಸದೆ ಸುಮಲತಾ, ಅಭಿಷೇಕ್-ಅವಿವಾ ಅವರು ಫುಲ್ ಶಾಕ್ ಆಗಿದ್ದಾರೆ. ಇಂತಹ ಸುಂದರ ಕಲೆಯನ್ನು ನೋಡಿ ಸುಮ್ಮನಿರಲು ಆಗುತ್ತಾ ಎಂದು ಫೋಟೋಗಳಿಗೆ ಮೂವರು ಫೋಸ್ ಕೊಟ್ಟಿದ್ದಾರೆ. ಇನ್ನು ಈ ಚಿತ್ರವನ್ನು ಬರೆದ ಕಲಾವಿದ ಚೀರನಹಳ್ಳಿಯ ತೇಜಗೌಡ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ನವ ಜೋಡಿಗೆ ವಿನೂತನ ರೀತಿಯ ಕೊಡುಗೆ ನೀಡಿದ ಅಭಿಮಾನಿ
ಹೋರಿ ಮೈ ಮೇಲೆ ಚಿತ್ರ ನೋಡಿ ಫುಲ್ ಖುಷ್ ಆದ ನವ ದಂಪತಿ
ಅಂಬರೀಶ್-ಸುಮಲತಾರನ್ನು ಮರೆಯದ ಮಂಡ್ಯ ಜನರು..!
ದಿವಂಗತ ರೆಬಲ್ ಸ್ಟಾರ್ ಅಂಬರೀಶ್ ಅವರ ಪುತ್ರ ಅಭಿಷೇಕ್ ಅವರ ಮದುವೆಯು ಇತ್ತೀಚೆಗೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆಯಿತು. ಮದುವೆಗೆ ಸ್ಯಾಂಡಲ್ವುಡ್ನ ನಟ-ನಟಿಯರು ಸೇರಿದಂತೆ ರಾಜಕಾರಣಿಗಳು ಬಂದು ನವ ಜೋಡಿಗೆ ಶುಭಾ ಹಾರೈಸಿದ್ದರು. ಇದಾದ ಬಳಿಕ ಮಂಡ್ಯದ ಗೆಜ್ಜಲಗೆರೆ ಬಳಿ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಿ ಬೀಗರ ಔತಣಕೂಟ ಭರ್ಜರಿಯಾಗಿ ನೆರವೇರಿಸಲಾಗಿತ್ತು. ಇದೇ ವೇಳೆಯೇ ಅಂಬರೀಶ್ ಅಭಿಮಾನಿಯೊಬ್ಬರು ನವ ಜೋಡಿಗೆ ವಿನೂತನ ರೀತಿಯ ಕೊಡುಗೆ ನೀಡಿ ಗಮನ ಸೆಳೆದಿದ್ದಾರೆ.
ಅಂಬರೀಶ್ ಅವರು ದೈಹಿಕವಾಗಿ ಇಲ್ಲದಿದ್ದರೂ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಅಬಂರೀಶ್ ಅಂದರೇ ಮಂಡ್ಯ, ಮಂಡ್ಯ ಅಂದರೇ ಅಂಬರೀಶ್ ಎನ್ನುವಂತೆ ಈಗಲೂ ಇದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹೋರಿವೊಂದನ್ನು ಹೂವುಗಳಿಂದ ಸಿಂಗಾರ ಮಾಡಿ ಅದರ ಮೇಲೆ ಮೈ ಮೇಲೆ ನವದಂಪತಿ ಅಭಿಷೇಕ್-ಅವಿವಾ ಅವರ ಚಿತ್ರ ಬಿಡಿಸಲಾಗಿದೆ. ಅಲ್ಲದೇ ಹೋರಿಯ ಕೊಂಬುಗಳ ಬಳಿ ಹೂವಿನ ಸಿಂಗಾರದಲ್ಲಿ ಅಂಬಿ-ಸುಮಲತಾ ಅವರ ಫೋಟೊವನ್ನು ಅಂಟಿಸಲಾಗಿದೆ.
ಇದನ್ನು ನೋಡಿದ ಸಂಸದೆ ಸುಮಲತಾ, ಅಭಿಷೇಕ್-ಅವಿವಾ ಅವರು ಫುಲ್ ಶಾಕ್ ಆಗಿದ್ದಾರೆ. ಇಂತಹ ಸುಂದರ ಕಲೆಯನ್ನು ನೋಡಿ ಸುಮ್ಮನಿರಲು ಆಗುತ್ತಾ ಎಂದು ಫೋಟೋಗಳಿಗೆ ಮೂವರು ಫೋಸ್ ಕೊಟ್ಟಿದ್ದಾರೆ. ಇನ್ನು ಈ ಚಿತ್ರವನ್ನು ಬರೆದ ಕಲಾವಿದ ಚೀರನಹಳ್ಳಿಯ ತೇಜಗೌಡ ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ