ಮಹಾಕುಂಭಮೇಳ ಮುಗಿಸಿ ಅಯೋಧ್ಯೆಗೆ ತೆರಳುವಾಗ ಭೀಕರ ಅಪಘಾತ; ಒಂದೇ ಕುಟುಂಬದ 5 ಮಂದಿ ಸಾವು!

author-image
admin
Updated On
ಮಹಾಕುಂಭಮೇಳ ಮುಗಿಸಿ ಅಯೋಧ್ಯೆಗೆ ತೆರಳುವಾಗ ಭೀಕರ ಅಪಘಾತ; ಒಂದೇ ಕುಟುಂಬದ 5 ಮಂದಿ ಸಾವು!
Advertisment
  • ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ ತೆರಳಿದ್ದವರ ದುರಂತ ಅಂತ್ಯ!
  • ಪ್ರಯಾಗ್‌ರಾಜ್, ಕಾಶಿ‌ ಪ್ರವಾಸ ಮುಗಿಸಿ ಅಯೋಧ್ಯೆ ಕಡೆಗೆ ಪ್ರಯಾಣ
  • ಬೀದರ್ ಜಿಲ್ಲೆಯಿಂದ ಕ್ರೂಸರ್‌ನಲ್ಲಿ 12 ನಿವಾಸಿಗಳು ಹೋಗಿದ್ದರು

ಉತ್ತರ ಪ್ರದೇಶದ ಮಿರಾಜ್‌ಪುರ್ ಬಳಿ ಕ್ರೂಸರ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ ತೆರಳಿದ್ದವರಲ್ಲಿ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಬೀದರ್ ಜಿಲ್ಲೆಯ ಲಾಡಗೇರಿ ಬಡಾವಣೆಯ 12 ನಿವಾಸಿಗಳು ಕ್ರೂಸರ್‌ನಲ್ಲಿ ಪ್ರಯಾಗ್‌ರಾಜ್‌ ಮಹಾಕುಂಭಮೇಳಕ್ಕೆ ತೆರಳಿದ್ದರು. ಪ್ರಯಾಗ್‌ರಾಜ್ ಮುಗಿಸಿ ಕಾಶಿ ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಮೃತಪಟ್ಟ ಐವರು ಒಂದೇ ಕುಟುಂಬದವರು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ತನ್ನ ಚಟಕ್ಕಾಗಿ ಅಮ್ಮನ ಮಾಂಗಲ್ಯ ಸರದ ಮೇಲೆ ಪುತ್ರನ ಕಣ್ಣು.. ಹೆತ್ತ ತಾಯಿಗೇ ಚೂರಿ ಚುಚ್ಚಿಬಿಟ್ಟ ಪಾಪಿ 

ಲಕ್ಷ್ಮೀ (56), ನೀಲಮ್ಮ (55), ಸಂತೋಷ್‌ಕುಮಾರ್ (42), ಸುನೀತಾ (42) ಮೃತ ದುರ್ದೈವಿಗಳು. ಉಳಿದ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

publive-image

ಕಳೆದ ಫೆಬ್ರವರಿ 19ರಂದು ಬೀದರ್‌ನಿಂದ ಚಾಲಕ ಸೇರಿ 14 ಜನ ಕ್ರೂಸರ್‌ನಲ್ಲಿ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಪ್ರಯಾಗ್‌ರಾಜ್, ಕಾಶಿ‌ ಪ್ರವಾಸ ಮುಗಿಸಿ ಅಯೋಧ್ಯೆ ಕಡೆಗೆ ತೆರಳುತ್ತಿದ್ದರು. ವಾರಣಾಸಿ ಬಳಿಯ ಮಿರಾಜ್‌ಪುರ್ ನಗರದ ಬಳಿ ಕ್ರೂಸರ್ ವಾಹನ ಲಾರಿಗೆ ಡಿಕ್ಕಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment