ಬಸ್ ಚಾಲಕನ ನಿಯಂತ್ರಣ ತಪ್ಪಿ ನಡೆದ ಭೀಕರ ದುರಂತ
ಮುದ್ದಾದ ಮಗಳನ್ನು ಕಳೆದುಕೊಂಡ ತಾಯಿ ಲಲಿತಾ ಆಕ್ರಂದನ
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ತುಳಸಿ
ಚಿಕ್ಕಮಗಳೂರು: ನಿಲ್ದಾಣದ ಬಳಿ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಹರಿದ ಘಟನೆ ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್ನಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರಟ್ನಲ್ಲಿ ಶಾಲಾ ಮಕ್ಕಳು ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಪೀಡಾಗಿ ಬಂದ ಖಾಸಗಿ ಬಸ್ ವಿದ್ಯಾರ್ಥಿನಿಗಳ ಮೇಲೆ ಹರಿದುಬಿಟ್ಟಿದೆ. ಪರಿಣಾಮ ತುಳಸಿ (15) ಎಂಬ ವಿದ್ಯಾರ್ಥಿಗಳಿಗೆ ಮೃತಪಟ್ಟಿದ್ದಾಳೆ.
ಇದನ್ನು ಓದಿ: BREAKING: ನೋಡ ನೋಡ್ತಿದ್ದಂತೆ ಶಾಲಾ ಮಕ್ಕಳಿಗೆ ಗುದ್ದಿದ ಬಸ್; ಓರ್ವ ವಿದ್ಯಾರ್ಥಿನಿ ಸಾವು, ಹಲವರಿಗೆ ಗಾಯ
ಇನ್ನು, ಪುಟ್ಟ ಮಗಳನ್ನು ಕಳೆದುಕೊಂಡಿದ್ದಕ್ಕೆ ಇಡೀ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಬಾಯ್ ಮಾಡಿ ಹೊರಟವಳು ಬಾರದ ಲೋಕಕ್ಕೆ ಹೋಗಿ ಬಿಟ್ಟಳು. ಹೆದರಿಕೆ ಆಗ್ತಿದೆ ಅಮ್ಮಾ ನೀರು ಕೊಡಿ ಅಂತಾ ಅಂತಾ ಇದ್ದಳು. ದಾರಿಯುದ್ಧಕ್ಕೂ ಮಾತಾಡುತ್ತಲೇ ಬಂದಳು. ಆದರೆ ಈಗ ನನ್ನ ಮಗಳು ಇಲ್ಲ. ನಾನು ಐಎಎಸ್ ಆಗ್ತೀನಿ ಅಂತ ಯಾವಾಗಲೂ ಹೇಳುತ್ತಿದ್ದಳು. ನಾನೇ ನಮ್ ಸ್ಕೂಲ್ಗೆ ಫಸ್ಟ್ ಅಮ್ಮಾ ಅಂತ ಹೇಳ್ತಾ ಇದ್ದಳು. ಈಗ ನನ್ನ ಬಿಟ್ಟು ತುಳಸಿ ಹೋಗಿ ಬಿಟ್ಟಳು ಎಂದು ಮೃತ ಪುತ್ರಿಯನ್ನು ನೆನೆದು ತಾಯಿ ಲಲಿತಾ ಕಣ್ಣೀರಿಡುತ್ತಿದ್ದಾರೆ.
ಈ ಭೀಕರ ಅಪಘಾತ ನಡೆದಿದ್ದೇಗೆ..?
ಅತಿವೇಗ ಅಪಾಯಕ್ಕೆ ಆಹ್ವಾನ ಅಂತಾ ಎಷ್ಟೇ ಹೇಳಿದ್ರೂ ಕೆಲವರು ಕೇಳುವುದಿಲ್ಲ. ಅತೀ ವೇಗದಿಂದತಮ್ಮ ಪ್ರಾಣಕ್ಕೂ ಪರರ ಜೀವಕ್ಕೂ ಕುತ್ತು ತಂದು ಕೊಳ್ಳುತ್ತಾರೆ. ಹೀಗೆ ಇದೀಗ ಚಿಕ್ಕಮಗಳೂರಲ್ಲೂ ಆಗಿರೋದು ಅದೇ. ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ದುರ್ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗಳಾಗಿವೆ. ಏಕಾಏಕಿ ಬಸ್ ಡಿಕ್ಕಿ ಹೊಡೆದ ರಬಸಕ್ಕೆ ಮನೆಯ ಮುಂಭಾಗದ ಛಾವಣಿ ಸಂಪೂರ್ಣ ಜಖಂಗೊಂಡಿದೆ. ಚಾಲಕನ ಈ ರೀತಿಯ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಸ್ನ ಗಾಜುಗಳನ್ನ ಪುಡಿಪುಡಿ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಸ್ ಚಾಲಕನ ನಿಯಂತ್ರಣ ತಪ್ಪಿ ನಡೆದ ಭೀಕರ ದುರಂತ
ಮುದ್ದಾದ ಮಗಳನ್ನು ಕಳೆದುಕೊಂಡ ತಾಯಿ ಲಲಿತಾ ಆಕ್ರಂದನ
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ತುಳಸಿ
ಚಿಕ್ಕಮಗಳೂರು: ನಿಲ್ದಾಣದ ಬಳಿ ನಿಂತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಹರಿದ ಘಟನೆ ತರೀಕೆರೆ ತಾಲೂಕಿನ ಸೀತಾಪುರ ಕಾವಲ್ ದುಗ್ಲಾಪುರ ಗೇಟ್ನಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ. ತರೀಕೆರೆ ತಾಲೂಕಿನ ಕಾವಲ್ ದುಗ್ಲಾಪುರಟ್ನಲ್ಲಿ ಶಾಲಾ ಮಕ್ಕಳು ಬಸ್ಗಾಗಿ ಕಾಯುತ್ತಿದ್ದರು. ಈ ವೇಳೆ ಸ್ಪೀಡಾಗಿ ಬಂದ ಖಾಸಗಿ ಬಸ್ ವಿದ್ಯಾರ್ಥಿನಿಗಳ ಮೇಲೆ ಹರಿದುಬಿಟ್ಟಿದೆ. ಪರಿಣಾಮ ತುಳಸಿ (15) ಎಂಬ ವಿದ್ಯಾರ್ಥಿಗಳಿಗೆ ಮೃತಪಟ್ಟಿದ್ದಾಳೆ.
ಇದನ್ನು ಓದಿ: BREAKING: ನೋಡ ನೋಡ್ತಿದ್ದಂತೆ ಶಾಲಾ ಮಕ್ಕಳಿಗೆ ಗುದ್ದಿದ ಬಸ್; ಓರ್ವ ವಿದ್ಯಾರ್ಥಿನಿ ಸಾವು, ಹಲವರಿಗೆ ಗಾಯ
ಇನ್ನು, ಪುಟ್ಟ ಮಗಳನ್ನು ಕಳೆದುಕೊಂಡಿದ್ದಕ್ಕೆ ಇಡೀ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಬಾಯ್ ಮಾಡಿ ಹೊರಟವಳು ಬಾರದ ಲೋಕಕ್ಕೆ ಹೋಗಿ ಬಿಟ್ಟಳು. ಹೆದರಿಕೆ ಆಗ್ತಿದೆ ಅಮ್ಮಾ ನೀರು ಕೊಡಿ ಅಂತಾ ಅಂತಾ ಇದ್ದಳು. ದಾರಿಯುದ್ಧಕ್ಕೂ ಮಾತಾಡುತ್ತಲೇ ಬಂದಳು. ಆದರೆ ಈಗ ನನ್ನ ಮಗಳು ಇಲ್ಲ. ನಾನು ಐಎಎಸ್ ಆಗ್ತೀನಿ ಅಂತ ಯಾವಾಗಲೂ ಹೇಳುತ್ತಿದ್ದಳು. ನಾನೇ ನಮ್ ಸ್ಕೂಲ್ಗೆ ಫಸ್ಟ್ ಅಮ್ಮಾ ಅಂತ ಹೇಳ್ತಾ ಇದ್ದಳು. ಈಗ ನನ್ನ ಬಿಟ್ಟು ತುಳಸಿ ಹೋಗಿ ಬಿಟ್ಟಳು ಎಂದು ಮೃತ ಪುತ್ರಿಯನ್ನು ನೆನೆದು ತಾಯಿ ಲಲಿತಾ ಕಣ್ಣೀರಿಡುತ್ತಿದ್ದಾರೆ.
ಈ ಭೀಕರ ಅಪಘಾತ ನಡೆದಿದ್ದೇಗೆ..?
ಅತಿವೇಗ ಅಪಾಯಕ್ಕೆ ಆಹ್ವಾನ ಅಂತಾ ಎಷ್ಟೇ ಹೇಳಿದ್ರೂ ಕೆಲವರು ಕೇಳುವುದಿಲ್ಲ. ಅತೀ ವೇಗದಿಂದತಮ್ಮ ಪ್ರಾಣಕ್ಕೂ ಪರರ ಜೀವಕ್ಕೂ ಕುತ್ತು ತಂದು ಕೊಳ್ಳುತ್ತಾರೆ. ಹೀಗೆ ಇದೀಗ ಚಿಕ್ಕಮಗಳೂರಲ್ಲೂ ಆಗಿರೋದು ಅದೇ. ಖಾಸಗಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಈ ಭೀಕರ ದುರ್ಘಟನೆ ಸಂಭವಿಸಿದೆ. ಈ ಅಪಘಾತದಲ್ಲಿ ಓರ್ವ ವಿದ್ಯಾರ್ಥಿನಿ ಸಾವನ್ನಪ್ಪಿದ್ದು, ಮತ್ತೋರ್ವ ವಿದ್ಯಾರ್ಥಿನಿಗೆ ಗಂಭೀರವಾಗಿ ಗಾಯಗಳಾಗಿವೆ. ಏಕಾಏಕಿ ಬಸ್ ಡಿಕ್ಕಿ ಹೊಡೆದ ರಬಸಕ್ಕೆ ಮನೆಯ ಮುಂಭಾಗದ ಛಾವಣಿ ಸಂಪೂರ್ಣ ಜಖಂಗೊಂಡಿದೆ. ಚಾಲಕನ ಈ ರೀತಿಯ ವರ್ತನೆಗೆ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ. ಬಸ್ನ ಗಾಜುಗಳನ್ನ ಪುಡಿಪುಡಿ ಮಾಡ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ