ಮೊದಲೊಂದು ಮದುವೆ, 2 ಮಕ್ಕಳು.. ಆದ್ರೂ ಸೀರಿಯಲ್​ ಗೆಳತಿ ನೆನಪಿನಲ್ಲೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡ್ರಾ?

author-image
AS Harshith
Updated On
ಪವಿತ್ರಾ ಜಯರಾಂ ಸಾವಿಗೆ ನೊಂದಿದ್ದ ಸ್ನೇಹಿತ ಚಂದು.. ಘಟನೆ ಬಗ್ಗೆ ಕಣ್ಣೀರು ಇಡುತ್ತಾ ಏನ್ ಹೇಳಿದ್ದರು..?
Advertisment
  • ರಾಧಾರಮಣ ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಸಾವು
  • ನಟಿ ಸಾವನ್ನಪ್ಪಿದ ನಾಲ್ಕು ದಿನದ ಬಳಿಕ ನಟ ಚಂದು ಆತ್ಮಹತ್ಯೆ
  • ಒಂದೇ ವಾರ, ಒಂದೇ ಧಾರಾವಾಹಿಯ 2 ಕಿರುತೆರೆ ನಟ-ನಟಿ ಸಾವು

ಮೊನ್ನೆ ಮೊನ್ನೆಯಷ್ಟೇ ರಸ್ತೆ ಅಪಘಾತದಲ್ಲಿ ತೆಲುಗು ಸೀರಿಯಲ್ ನಟಿ ಪವಿತ್ರ ಜಯರಾಂ ಸಾವನ್ನಪ್ಪಿದ್ರು. ಈ ದುಃಖ ಮಾಸುವ ಮುನ್ನವೇ ಅದೇ ಸೀರಿಯಲ್‌ಗೆ ಸೇರಿದ ಮತ್ತೊಬ್ಬ ನಟ ನಿನ್ನೆ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತೆಲುಗು ಕಿರುತೆರೆ ಇಂಡಸ್ಟ್ರಿಯಲ್ಲಿ ಮತ್ತೊಮ್ಮೆ ತೀವ್ರ ದುಃಖ ತುಂಬಿದೆ.

ರೋಬೋ ಫ್ಯಾಮಿಲಿ, ಜೋಕಾಲಿ, ನೀಲಿ, ರಾಧಾರಮಣ ಹೀಗೆ ಕನ್ನಡದ ಸಾಲು ಸಾಲು ಧಾರವಾಹಿಗಳಲ್ಲಿ ನಟಿಸಿ ಜನರನ್ನು ರಂಜಿಸಿದ ಇವರು ಪವಿತ್ರಾ ಜಯರಾಮ್. ಆದ್ರೆ ಮೊನ್ನೆ ವಿಧಿಯಾಟಕ್ಕೆ ಅಪಘಾತದಲ್ಲಿ ಸಾವನ್ನಪ್ಪಿದ್ರು. ಇದು ತೆಲುಗಿನ ಕಿರುತೆರೆ ಇಂಡಸ್ಟ್ರಿಗೆ ಭಾರೀ ಶಾಕ್ ನೀಡಿರುವ ನಡುವೆ ಮತ್ತೊಂದು ಆಘಾತ ಎದುರಾಗಿದೆ.

publive-image

ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ಆಪ್ತ ಚಂದು ಆತ್ಮಹತ್ಯೆ

ಚಂದ್ರಕಾಂತ್​. ತ್ರಿನಯನಿ ಧಾರಾವಾಹಿ ಮೂಲಕ ತೆಲುಗು ರಾಜ್ಯದಲ್ಲಿ ಮನೆಮಾತಾದವರು. ಆದ್ರೆ ನಿನ್ನೆ ಹೈದರಾಬಾದ್​​​ನ ಮಣಿಕೊಂಡದಲ್ಲಿರುವ ತಮ್ಮ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊನ್ನೆಯಷ್ಟೇ ರಸ್ತೆ ಆಕ್ಸಿಡೆಂಟ್‌ನಲ್ಲಿ ತ್ರಿನಯನಿ ಸೀರಿಯಲ್ ನಟಿ ಪವಿತ್ರ ಜಯರಾಂ ಸಾವನ್ನಪ್ಪಿದ್ದರು. ನಟಿ ಪವಿತ್ರಾ ಮರಣದ ಸುದ್ದಿ ಬೆನ್ನಲ್ಲೇ ಅದೇ ಸೀರಿಯಲ್ ಸಹನಟ ಹಾಗೂ ಪ್ರಿಯಕರ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಆತ್ಮಹತ್ಯೆಗೆ ವಿವಾಹೇತರ ಸಂಬಂಧವೇ ಕಾರಣ ಎಂಬ ಸುದ್ದಿ ಕೇಳಿಬರುತ್ತಿದೆ. ಅದರಂತೆ ಮೇ 13ರಂದು ಮಂಡ್ಯದಲ್ಲಿ ನಡೆದ ಮೃತ ಪವಿತ್ರಾ ಜಯರಾಂ ಅಂತ್ಯಕ್ರಿಯೆಯಲ್ಲಿ ಚಂದು ಕೂಡ ಭಾಗಿಯಾಗಿದ್ದರು.

publive-image

ಇದನ್ನೂ ಓದಿ: ನಟಿ ಪವಿತ್ರಾ ಸಾವನ್ನು ಕಣ್ಣಾರೆ ಕಂಡ ಚಂದು.. ಗೆಳತಿ ಸಾವು ಅರಗಿಸಿಕೊಳ್ಳಲಾಗದೆ ಕಿರುತೆರೆ ನಟ ಆತ್ಮಹತ್ಯೆ

2015 ರಲ್ಲಿ ಶಿಲ್ಪ ಎಂಬುವವರನ್ನು ಪ್ರೀತಿಸಿ ಮದುವೆ, ಇಬ್ಬರು ಮಕ್ಕಳು

ತೆಲುಗು ಸೀರಿಯಲ್ ತ್ರಿನಯಿನಿ ಧಾರವಾಹಿ ಸೇರಿದಂತೆ ಹಲವು ಸೀರಿಯಲ್‌ಗಳಲ್ಲಿ ಚಂದು ನಟಿಸಿದ್ರು. ಪ್ರಸ್ತುತ ರಾಧಮ್ಮ ಮದುವೆ, ಕಾರ್ತಿಕ ದೀಪ ಮುಂತಾದ ಸೀರಿಯಲ್‌ಗಳಲ್ಲಿ ಚಂದು ನಟಿಸುತ್ತಿದ್ದಾರೆ. 2015 ರಲ್ಲಿ ಶಿಲ್ಪ ಎಂಬುವವರನ್ನು ಚಂದು ಪ್ರೀತಿಸಿ ಮದುವೆಯಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಕಳೆದ ವಾರ ಆಕ್ಸಿಡೆಂಟ್‌ನಲ್ಲಿ ಮೃತರಾಗಿದ್ದ ಪವಿತ್ರ ಜಯರಾಂ ಜೊತೆ ಆರೇಳು ವರ್ಷಗಳಿಂದ ನಟ ಚಂದು ಪರಿಚಯವಾಗಿತ್ತು. ಪವಿತ್ರಾ ಮರಣದ ನಂತರ ಚಂದು ತೀವ್ರ ದುಃಖಕ್ಕೆ ಒಳಗಾಗಿದ್ದರು. ಇದೇ ನೋವಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಸದ್ಯ ಈ ಸಂಬಂಧ ಹೈದರಾಬಾದ್ ನಗರದ ಮುನಿರಾಬಾದ್ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

publive-image

ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ಡಾರ್ಲಿಂಗ್​ ಪ್ರಭಾಸ್​; ಇನ್​ಸ್ಟಾ ಪೋಸ್ಟ್​ ಏನ್​ ಹೇಳುತ್ತೆ?

ಒಟ್ಟಾರೆ, ನಟಿ ಪವಿತ್ರಾ ಜಯರಾಂ ಸಾವಿನ ಬೆನ್ನಲ್ಲೇ ನಟ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಬ್ಬರು ಕಲಾವಿದರನ್ನ ಕಳೆದುಕೊಂಡಿದ್ದಕ್ಕೆ ತೆಲುಗು ಕಿರುತೆರೆ ಇಂಡಸ್ಟ್ರಿ ತೀವ್ರ ದುಃಖದಲ್ಲಿದೆ. ಸದ್ಯ, ಚಂದು ಆತ್ಮಹತ್ಯೆಗೆ ಕಾರಣ ಏನು ಎಂಬುಂದು ಪೊಲೀಸರ ತನಿಖೆಯಲ್ಲಿ ಬಹಿರಂಗವಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment