newsfirstkannada.com

ಚಂದುಗೆ ನಾವ್ಯಾರು ನೆನಪಾಗಿಲ್ವಾ? ಮಕ್ಕಳನ್ನು ಬಿಟ್ಟು ಹೋಗಿದ್ದು ನ್ಯಾಯನಾ? ತಮ್ಮನನ್ನು ಕಳೆದುಕೊಂಡ ಅಕ್ಕನ ಗೋಳಾಟ 

Share :

Published May 18, 2024 at 12:51pm

    ಮನೆಯಿಂದ ಹೋದ ಮೇಲೆ ಫೋನ್ ರಿಸೀವ್​ ಮಾಡಿಲ್ಲ

    ಚಂದು ತನ್ನ ಹೆಂಡ್ತಿ, ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ ಯಾಕೆ?

    ನಟ ಚಂದುನನ್ನು ಕಳೆದುಕೊಂಡ ಅಕ್ಕ ಏನಂದ್ರು ಗೊತ್ತಾ?

ತೆಲುಗು ಕಿರುತೆರೆ ನಟ ಚಂದು ಸಾವಿನ ಬಗ್ಗೆ ಒಡಹುಟ್ಟಿದ ಅಕ್ಕ ಮಾತನಾಡಿದ್ದಾರೆ. ತಮ್ಮನನ್ನು ಕಳೆದುಕೊಂಡು ಕಣ್ಣೀರು ಸುರಿಸಿದ್ದಾರೆ. ನಾವ್ಯಾರು ನೆನಪು ಆಗಿಲ್ವಾ? ಎಂದು ಹೇಳಿದ್ದಾರೆ.

ಚಂದ್ರಕಾಂತ್ ಸಾವಿನ ದಿನ ಬೆಳಗ್ಗೆ ಸಹೋದರಿ ಬಳಿ ಮಾತಾಡಿ ಹೋಗಿದ್ದನು. ಪವಿತ್ರಾ ಅವರ ಇನ್ಸ್​ಶೂರೆನ್ಸ್​ ಹಣ ವಿಚಾರವಾಗಿ ಕೆಲಸ ಇದೆ ಅಂತ ಹೇಳಿ ಹೋಗಿದ್ದನು. ಮನೆಯಿಂದ ಹೋದ ಮೇಲೆ ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ. ಗಂಟೆ ಗಂಟೆಗೂ ಫೋನ್ ಮಾಡಿದ್ರು ಫೋನ್ ರಿಸೀವ್ ಮಾಡ್ತಿರಲಿಲ್ಲ. ಗೊತ್ತಿರೋ ಸ್ನೇಹಿತರನ್ನ ಕೇಳಿದ್ವಿ. ಗೊತ್ತಿಲ್ಲ ಅಂತಾನೂ ಹೇಳಿದ್ರು. ಆಮೇಲೆ ನೇಣು ಹಾಕಿಕೊಂಡಿದ್ದ ಅಂತ ಗೊತ್ತಾಯ್ತು ಎಂದು ಮೃತನ ಅಕ್ಕ ಹೇಳಿದ್ದಾರೆ.

ಚಂದು ಮತ್ತು ಪವಿತ್ರಾ

ನಾವ್ಯಾರು ನೆನಪು ಆಗಿಲ್ವಾ?. ಚಿಕ್ಕ ಮಕ್ಕಳು ಬಿಟ್ಟು ಹೋಗಿದ್ದು ನ್ಯಾಯನಾ?. ಹೆಂಡ್ತಿ, ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ ಯಾಕೆ?. ತ್ರಿನಯನಿ ಧಾರಾವಾಹಿ ಆರಂಭಿಸಿದ ಕ್ಷಣದಿಂದಲೂ ಮನೆಯಲ್ಲಿ ಕಿರಿಕ್. ಆದರೂ ನಾವು ಪ್ರಶ್ನೆ ಮಾಡ್ತಿರಲಿಲ್ಲ. ಪವಿತ್ರಾ ಜೀವನ ಅಷ್ಟೇ ಆಗಿತ್ತೇನೋ?. ನೀನ್ಯಾಕೆ ಹೀಗೆ ಮಾಡ್ಕೊಂಡೆ ಅಂತ ಚಂದು ಸಹೋದರಿ ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ: ನಟಿ ಪವಿತ್ರಾ ಸಹವಾಸದಿಂದ ಹೆಂಡತಿ, ಮಕ್ಕಳಿಂದ ದೂರ ಇದ್ದ; ಚಂದು ಬಗ್ಗೆ ತಾಯಿಯ ಆರೋಪವೇನು?

ಪತ್ನಿ ಶಿಲ್ಪಾ- ಚಂದು- ಪವಿತ್ರಾ

ಚಂದು ಪತ್ನಿ ಶಿಲ್ಪಾ ಎನಂದ್ರು?

2004ರಲ್ಲಿ ನನಗೂ ಚಂದ್ರಕಾಂತ್​ಗು ಪರಿಚಯವಾಯ್ತು. ಅಲ್ಲಿಂದಲೂ ನಾವು ಇಷ್ಟಪಡ್ತಿದ್ದೀವಿ. ಆದರೆ ಮನೆಯವರು ಒಪ್ಪಿಗೆ ಕೊಟ್ಟಿರಲಿಲ್ಲ. ಆಮೇಲೆ ಡಿಮ್ಯಾಂಡ್​ ಮಾಡಿ ಮದುವೆ ಆಗಿದ್ದೆ. ತುಂಬಾ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆದರೀಗ ನನಗೆ 8 ವರ್ಷದ ಮಗಳು ಮತ್ತು 4 ವರ್ಷ ಮಗ ಇದ್ದಾನೆ. ಚಂದು ಆಗಾಗ ಬಂದು ಮಕ್ಕಳನ್ನ ನೋಡ್ಕೊಂಡು ಹೋಗ್ತಿದ್ದ.

ಇದನ್ನೂ ಓದಿ: ಪವಿತ್ರಾ ಸಾವಿನಿಂದ ಬದುಕಲು ಇಷ್ಟವಿಲ್ಲ.. ಚಂದು ಕೊನೆಯ ಮಾತುಗಳನ್ನ ನೆನಪಿಸಿಕೊಂಡ ನಟಿಯ ಸಂಬಂಧಿ.. ಏನಂದ್ರು?

ಲಾಕ್​ಡೌನ್​ ಆದ್ಮೇಲೆ ಚಂದು-ಪವಿತ್ರಾ ರಿಲೇಶನ್​ಷಿಪ್ ಆರಂಭವಾಯ್ತು. ಇವರ ಸಂಬಂಧ ಶುರುವಾದ್ಮೇಲೆ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಯಾವಾಗಲೂ ನಿಂದಿಸಿ, ಹಲ್ಲೆ ಮಾಡಿದ್ದಾರೆ. ನನ್ನ ಗಂಡನೇ ಸರ್ವಸ್ವ ಎಂದು ಬದುಕಿದ್ದೆ. ಇವತ್ತು ನನ್ನ ಬಿಟ್ಟು ಹೋದ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದುಗೆ ನಾವ್ಯಾರು ನೆನಪಾಗಿಲ್ವಾ? ಮಕ್ಕಳನ್ನು ಬಿಟ್ಟು ಹೋಗಿದ್ದು ನ್ಯಾಯನಾ? ತಮ್ಮನನ್ನು ಕಳೆದುಕೊಂಡ ಅಕ್ಕನ ಗೋಳಾಟ 

https://newsfirstlive.com/wp-content/uploads/2024/05/Chandu-Sister.jpg

    ಮನೆಯಿಂದ ಹೋದ ಮೇಲೆ ಫೋನ್ ರಿಸೀವ್​ ಮಾಡಿಲ್ಲ

    ಚಂದು ತನ್ನ ಹೆಂಡ್ತಿ, ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ ಯಾಕೆ?

    ನಟ ಚಂದುನನ್ನು ಕಳೆದುಕೊಂಡ ಅಕ್ಕ ಏನಂದ್ರು ಗೊತ್ತಾ?

ತೆಲುಗು ಕಿರುತೆರೆ ನಟ ಚಂದು ಸಾವಿನ ಬಗ್ಗೆ ಒಡಹುಟ್ಟಿದ ಅಕ್ಕ ಮಾತನಾಡಿದ್ದಾರೆ. ತಮ್ಮನನ್ನು ಕಳೆದುಕೊಂಡು ಕಣ್ಣೀರು ಸುರಿಸಿದ್ದಾರೆ. ನಾವ್ಯಾರು ನೆನಪು ಆಗಿಲ್ವಾ? ಎಂದು ಹೇಳಿದ್ದಾರೆ.

ಚಂದ್ರಕಾಂತ್ ಸಾವಿನ ದಿನ ಬೆಳಗ್ಗೆ ಸಹೋದರಿ ಬಳಿ ಮಾತಾಡಿ ಹೋಗಿದ್ದನು. ಪವಿತ್ರಾ ಅವರ ಇನ್ಸ್​ಶೂರೆನ್ಸ್​ ಹಣ ವಿಚಾರವಾಗಿ ಕೆಲಸ ಇದೆ ಅಂತ ಹೇಳಿ ಹೋಗಿದ್ದನು. ಮನೆಯಿಂದ ಹೋದ ಮೇಲೆ ಫೋನ್ ಮಾಡಿದ್ರೆ ರಿಸೀವ್ ಮಾಡಿಲ್ಲ. ಗಂಟೆ ಗಂಟೆಗೂ ಫೋನ್ ಮಾಡಿದ್ರು ಫೋನ್ ರಿಸೀವ್ ಮಾಡ್ತಿರಲಿಲ್ಲ. ಗೊತ್ತಿರೋ ಸ್ನೇಹಿತರನ್ನ ಕೇಳಿದ್ವಿ. ಗೊತ್ತಿಲ್ಲ ಅಂತಾನೂ ಹೇಳಿದ್ರು. ಆಮೇಲೆ ನೇಣು ಹಾಕಿಕೊಂಡಿದ್ದ ಅಂತ ಗೊತ್ತಾಯ್ತು ಎಂದು ಮೃತನ ಅಕ್ಕ ಹೇಳಿದ್ದಾರೆ.

ಚಂದು ಮತ್ತು ಪವಿತ್ರಾ

ನಾವ್ಯಾರು ನೆನಪು ಆಗಿಲ್ವಾ?. ಚಿಕ್ಕ ಮಕ್ಕಳು ಬಿಟ್ಟು ಹೋಗಿದ್ದು ನ್ಯಾಯನಾ?. ಹೆಂಡ್ತಿ, ಮಕ್ಕಳ ಬಗ್ಗೆ ಯೋಚನೆ ಮಾಡಿಲ್ಲ ಯಾಕೆ?. ತ್ರಿನಯನಿ ಧಾರಾವಾಹಿ ಆರಂಭಿಸಿದ ಕ್ಷಣದಿಂದಲೂ ಮನೆಯಲ್ಲಿ ಕಿರಿಕ್. ಆದರೂ ನಾವು ಪ್ರಶ್ನೆ ಮಾಡ್ತಿರಲಿಲ್ಲ. ಪವಿತ್ರಾ ಜೀವನ ಅಷ್ಟೇ ಆಗಿತ್ತೇನೋ?. ನೀನ್ಯಾಕೆ ಹೀಗೆ ಮಾಡ್ಕೊಂಡೆ ಅಂತ ಚಂದು ಸಹೋದರಿ ಕಣ್ಣೀರು ಸುರಿಸಿದ್ದಾರೆ.

ಇದನ್ನೂ ಓದಿ: ನಟಿ ಪವಿತ್ರಾ ಸಹವಾಸದಿಂದ ಹೆಂಡತಿ, ಮಕ್ಕಳಿಂದ ದೂರ ಇದ್ದ; ಚಂದು ಬಗ್ಗೆ ತಾಯಿಯ ಆರೋಪವೇನು?

ಪತ್ನಿ ಶಿಲ್ಪಾ- ಚಂದು- ಪವಿತ್ರಾ

ಚಂದು ಪತ್ನಿ ಶಿಲ್ಪಾ ಎನಂದ್ರು?

2004ರಲ್ಲಿ ನನಗೂ ಚಂದ್ರಕಾಂತ್​ಗು ಪರಿಚಯವಾಯ್ತು. ಅಲ್ಲಿಂದಲೂ ನಾವು ಇಷ್ಟಪಡ್ತಿದ್ದೀವಿ. ಆದರೆ ಮನೆಯವರು ಒಪ್ಪಿಗೆ ಕೊಟ್ಟಿರಲಿಲ್ಲ. ಆಮೇಲೆ ಡಿಮ್ಯಾಂಡ್​ ಮಾಡಿ ಮದುವೆ ಆಗಿದ್ದೆ. ತುಂಬಾ ಅದ್ಧೂರಿಯಾಗಿ ಮದುವೆ ಮಾಡಿದ್ದರು. ಆದರೀಗ ನನಗೆ 8 ವರ್ಷದ ಮಗಳು ಮತ್ತು 4 ವರ್ಷ ಮಗ ಇದ್ದಾನೆ. ಚಂದು ಆಗಾಗ ಬಂದು ಮಕ್ಕಳನ್ನ ನೋಡ್ಕೊಂಡು ಹೋಗ್ತಿದ್ದ.

ಇದನ್ನೂ ಓದಿ: ಪವಿತ್ರಾ ಸಾವಿನಿಂದ ಬದುಕಲು ಇಷ್ಟವಿಲ್ಲ.. ಚಂದು ಕೊನೆಯ ಮಾತುಗಳನ್ನ ನೆನಪಿಸಿಕೊಂಡ ನಟಿಯ ಸಂಬಂಧಿ.. ಏನಂದ್ರು?

ಲಾಕ್​ಡೌನ್​ ಆದ್ಮೇಲೆ ಚಂದು-ಪವಿತ್ರಾ ರಿಲೇಶನ್​ಷಿಪ್ ಆರಂಭವಾಯ್ತು. ಇವರ ಸಂಬಂಧ ಶುರುವಾದ್ಮೇಲೆ ನನ್ನ ಮೇಲೆ ದೌರ್ಜನ್ಯ ಮಾಡಿದ್ದಾರೆ. ಯಾವಾಗಲೂ ನಿಂದಿಸಿ, ಹಲ್ಲೆ ಮಾಡಿದ್ದಾರೆ. ನನ್ನ ಗಂಡನೇ ಸರ್ವಸ್ವ ಎಂದು ಬದುಕಿದ್ದೆ. ಇವತ್ತು ನನ್ನ ಬಿಟ್ಟು ಹೋದ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More