Advertisment

ಫ್ಯಾನ್ಸ್​ ವಿರುದ್ಧ ಆರೋಪ ಬೆನ್ನಲ್ಲೇ ದರ್ಶನ್ ಪತ್ನಿ ಮಾರ್ಮಿಕ ಸಂದೇಶ.. ವಿಜಯಲಕ್ಷ್ಮೀ ಪೋಸ್ಟ್​ನಲ್ಲಿ ಏನಿದೆ?

author-image
Veena Gangani
Updated On
ಫ್ಯಾನ್ಸ್​ ವಿರುದ್ಧ ಆರೋಪ ಬೆನ್ನಲ್ಲೇ ದರ್ಶನ್ ಪತ್ನಿ ಮಾರ್ಮಿಕ ಸಂದೇಶ.. ವಿಜಯಲಕ್ಷ್ಮೀ ಪೋಸ್ಟ್​ನಲ್ಲಿ ಏನಿದೆ?
Advertisment
  • ಬೇಲ್​​​ ಭವಿಷ್ಯದ ಮಧ್ಯೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಟೆಂಪಲ್ ರನ್​
  • ದೇಗುಲಗಳ ಪ್ರದಕ್ಷಿಣೆ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ ದರ್ಶನ್​ ದಂಪತಿ
  • ದರ್ಶನ್​ ಜೊತೆಗಿರೋ ಫೋಟೋ ಶೇರ್ ಮಾಡಿ ವಿಜಯಲಕ್ಷ್ಮೀ ಏನಂದ್ರು?

ಸಾಲು ಸಾಲು ಸಂಕಷ್ಟದ ನಡುವೆ ನಟ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಪವರ್​ ಫುಲ್​ ದೇವರ ಮೊರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್​​ನಲ್ಲಿ ಬೇಲ್​​​ ಭವಿಷ್ಯದ ಮಧ್ಯೆ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ದೇಗುಲಗಳ ಪ್ರದಕ್ಷಿಣೆ ಹಾಕುವುದರಲ್ಲಿ ಬ್ಯುಸಿಯಾಗಿದ್ದಾರೆ.

Advertisment

ಇದನ್ನೂ ಓದಿ: ಕೈಮುಗಿದು ನ್ಯಾಯಾಧೀಶರ ಮುಂದೆ ನಿಂತಿದ್ದ ಪ್ರಜ್ವಲ್ ರೇವಣ್ಣ.. ಆಗಸ್ಟ್ 1ಕ್ಕೆ ತೀರ್ಪು ಪ್ರಕಟ..!

ಇತ್ತ ದರ್ಶನ್​ ಅಭಿಮಾನಿಗಳ ವಿರುದ್ಧ ನಟಿ ರಮ್ಯಾ ಕೆಂಡಕಾರುತ್ತಿದ್ದರೆ, ಅತ್ತ, ದರ್ಶನ್​ ದಂಪತಿ ಟೆಂಪಲ್​ ರನ್ ಶರು ಮಾಡಿಕೊಂಡಿದ್ದಾರೆ. ಇದೀಗ ಸಖತ್​ ಪವರ್​ ಫುಲ್​ ದೇವಸ್ಥಾನಕ್ಕೆ ದರ್ಶನ್​ ದಂಪತಿ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಆ ದೇವಸ್ಥಾನಕ್ಕೆ ಭೇಟಿ ಕೊಟ್ಟ ಫೋಟೋವನ್ನು ದರ್ಶನ್​ ಪತ್ನಿ ವಿಜಯಲಕ್ಷ್ಮೀ ಅವರು, ಇನ್​ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ, ಫೋಟೋ ಜೊತೆಗೆ ‘‘ಹೆಚ್ಚು ಜನರು ನಿಮ್ಮನ್ನು ಕೆಳಗೆ ತಳ್ಳಲು ಪ್ರಯತ್ನಿಸಿದರೆ, ದೇವರು ನಿಮ್ಮನ್ನು ಉನ್ನತ ಮಟ್ಟಕ್ಕೆ ಕರೆದೊಯ್ಯುತ್ತಾನೆ. ದೇವರು ನಿಮ್ಮನ್ನು ಆಶೀರ್ವದಿಸಲಿ’’ ಎಂದು ಬರೆದುಕೊಂಡಿದ್ದಾರೆ.

publive-image

ದರ್ಶನ್​ ದಂಪತಿ ಹೋಗಿದ್ದು ಎಲ್ಲಿಗೆ?

ಹೊರ ರಾಜ್ಯದ ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ದರ್ಶನ್​ ದಂಪತಿ ಭೇಟಿ ಕೊಟ್ಟಿದ್ದಾರೆ. ದೇಶದ 51 ಶಕ್ತಿ ಪೀಠಗಳಲ್ಲಿ ಒಂದಾದ ಅಸ್ಸಾಂನ ಗುವ್ಹಾಟಿಯಲ್ಲಿರುವ ಕಾಮಾಕ್ಯ ದೇಗುಲಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ಭಾರತದ ಪುರಾತನ ಶಕ್ತಿಪೀಠಗಳಲ್ಲಿ ಕಾಮಾಕ್ಯ ದೇವಿ ದೇವಸ್ಥಾನವು ಒಂದಾಗಿದೆ. ಗುವಾಹಟಿಯ ಪಶ್ಚಿಮ ಭಾಗದ ನಿಲಚಲ್ ಬೆಟ್ಟದ ಮೇಲೆ ದೇವಿ ನೆಲೆಸಿದ್ದಾಳೆ. ಈ ಕಾಮಾಕ್ಷಿ ಮಾತೆ ಪವರ್ ಫುಲ್’ ಶಕ್ತಿ ದೇವತೆ ಎನ್ನಿಸಿಕೊಂಡಿದ್ದಾಳೆ. ಇಲ್ಲಿ ದೇವಿ ವಿಗ್ರಹವಿಲ್ಲ, ಬದಲಾಗಿ ಯೋನಿಯನ್ನು ಪೂಜಿಸಲಾಗುತ್ತೆ.

Advertisment

ಪ್ರತಿ ವರ್ಷ ಜೂನ್ ತಿಂಗಳು ಬಂದರೆ ಈ ತಾಯಿ ಮುಟ್ಟಾಗುತ್ತಾಳೆ. ಅದೇ ಕಾರಣಕ್ಕೆ ಬ್ರಹ್ಮಪುತ್ರ ನೀರು ಕೆಂಪಾಗುತ್ತದೆ ಎಂಬ ನಂಬಿಕೆ ಇದೆ. ಮುಟ್ಟಾದ 3 ದಿನಗಳ ಕಾಲ ಈ ದೇವಾಲಯ ಬಂದ್ ಮಾಡ್ತಾರೆ. ದೇವಿ ಮುಟ್ಟಾದ ಬಟ್ಟೆಯನ್ನು ಪ್ರಸಾದದ ರೂಪದಲ್ಲಿ ಹಂಚಲಾಗುತ್ತೆ. ಅನೇಕ ಗಣ್ಯ ವ್ಯಕ್ತಿಗಳು ಈ ದೇಗುಲಕ್ಕೆ ಬಂದು ಪೂಜೆ ಸಲ್ಲಿಸುತ್ತಾರೆ. ದೊಡ್ಡ ದೊಡ್ಡ ನಟರು, ರಾಜಕಾರಣಿ, ಉದ್ಯಮಿದಾರರ ನೆಚ್ಚಿನ ತಾಣ ಇದಾಗಿದೆ. ಆಗಾಗ ದರ್ಶನ್​ ಪತ್ನಿ ಈ ದೇವಸ್ಥಾನಕ್ಕೆ ಬರುತ್ತಲೇ ಇರುತ್ತಾರೆ. ಇದೀಗ ನಟ ದರ್ಶನ್​ ಅವರ ಜೊತೆಗೆ ಶಕ್ತಿಪೀಠ ಕಾಮಾಕ್ಯ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment