Advertisment

Pain Killer ಟ್ಯಾಬ್ಲೆಟ್ ಕೇಳಿದ ನಟ ದರ್ಶನ್.. ಅಷ್ಟಕ್ಕೂ ಕೊಲೆ ಆರೋಪಿಗ ಕಾಡುತ್ತಿರುವ ದೊಡ್ಡ ಸಮಸ್ಯೆ ಏನು?​​

author-image
AS Harshith
Updated On
100 ದಿನಗಳ ಬಳಿಕ ನಟ ದರ್ಶನ್‌ಗೆ ಜಾಮೀನು ಸಿಗುತ್ತಾ? ಬೇಲ್ ಅರ್ಜಿಗೆ ಕೋರ್ಟ್‌ ಹೇಳಿದ್ದೇನು?
Advertisment
  • ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​ಗೆ ಕಾಡುತ್ತಿದೆ ಸಮಸ್ಯೆ
  • ಜೈಲಲ್ಲಿ ಸ್ಕ್ಯಾನ್ ಮಾಡಿಸೋದನ್ನ ನಿರಾಕರಿಸಿದ ಆರೋಪಿ ದರ್ಶನ್​​
  • MRI ಸ್ಕ್ಯಾನ್ ಮಾಡಲು ದರ್ಶನ್​​ಗೆ ಸಲಹೆ ಕೊಟ್ಟಿರುವ ವೈದ್ಯರು

ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್​​ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಜಾಮೀನು​ ಮೂಲಕ ಹೊರಬರಲು ಪರದಾಡುತ್ತಿದ್ದಾರೆ. ಆದರೆ ಜೈಲಲ್ಲಿರುವ ಕೊಲೆ ಆರೋಪಿ ದರ್ಶನ್​​ಗೆ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದ್ದು, ಇದರಿಂದ ತಪಾಸಣೆಯನ್ನು ನಿರಾಕರಿಸಿದ್ದಾರೆ.

Advertisment

ದರ್ಶನ್​ ತೀವ್ರ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನೋವು ಹೆಚ್ಚಾಗಿದ್ದರಿಂದ ವಿಮ್ಸ್ ಆಸ್ಪತ್ರೆಯ ಆರ್ಥೋಪಿಡಿಷನ್ ಜೈಲಿನಲ್ಲೇ ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸದ್ಯ ಆರೋಪಿ ದರ್ಶನ್​ಗಿರುವ ಬೆನ್ನು ನೋವಿಗೆ ಸರ್ಜರಿ ಮಾಡಿಸಲೇಬೇಕಿದೆ.

ಇದನ್ನೂ ಓದಿ: ನಟಿ ಸಮಂತಾ ಬಗ್ಗೆ ವಿವಾದಾತ್ಮಕ ಹೇಳಿಕೆ.. ತಪ್ಪಿನ ಅರಿವಾಗಿ ಕ್ಷಮೆ ಕೋರಿದ ಸಚಿವೆ ಕೊಂಡ ಸುರೇಖಾ

ದರ್ಶನ್​ ಬೆನ್ನಿನ ಹಿಂಭಾಗ ಊತ ಬಂದಿರುವ ಸಾಧ್ಯತೆ ಹಿನ್ನೆಲೆ ವೈದ್ಯರು ಸ್ಕ್ಯಾನ್ ಮಾಡಿಸಲು ಸೂಚನೆ ನೀಡಿದ್ದರು. ಆದರೆ ಆರೋಪಿ ದರ್ಶನ್ ಸ್ಕ್ಯಾನ್ ಮಾಡಿಸೋದನ್ನ ನಿರಾಕರಿಸಿದ್ದಾರೆ. ನಾನು ಬೆಂಗಳೂರಿಗೆ ಹೋದ ಮೇಲೆ ಸ್ಕ್ಯಾನ್ ಮಾಡಿಸ್ತೀನಿ,
ಸದ್ಯಕ್ಕೆ ಪೇನ್ ಕಿಲ್ಲರ್ ಟ್ಯಾಬ್ಲೆಟ್ ಮಾತ್ರ ಕೊಡಿ ಸಾಕು ಎಂದು ದರ್ಶನ್ ಹೇಳಿದ್ದಾರೆ.

Advertisment

ಇದನ್ನೂ ಓದಿ: BBK11: ಬಿಗ್​ ಬಾಸ್​​ಗೇ ​ಅವಾಜ್​​! ಪ್ರೋಗ್ರಾಂ ಹಾಳು ಮಾಡ್ತೀನಿ ಎಂದ ಲಾಯರ್! ವೀಕೆಂಡ್​ನಲ್ಲಿ​ ಇದೆಯಾ ಮಾರಿ ಹಬ್ಬ

ಸದ್ಯ 10 ದಿನಗಳ ಮಾತ್ರೆ ತೆಗೆದುಕೊಳ್ಳಲು ವೈದ್ಯರು ಸಲಹೆ ನೀಡಿದ್ದಾರೆ. 10 ದಿನಗಳ ಬಳಿಕ MRI ಸ್ಕ್ಯಾನ್ ಮಾಡಲು ವೈದ್ಯರ ಸಲಹೆ‌ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment