/newsfirstlive-kannada/media/post_attachments/wp-content/uploads/2024/07/darshan2-1.jpg)
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದೆ. ಜುಲೈ 18ರವರೆಗೂ ದರ್ಶನ್ ಅವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ ನಟ ದರ್ಶನ್ ಅವರನ್ನು ಭೇಟಿ ಮಾಡಲು ಕುಟುಂಬಸ್ಥರು ಆಗಮಿಸಿದ್ದಾರೆ.
ಇದನ್ನೂ ಓದಿ: ಜೈಲಲ್ಲಿ ದರ್ಶನ್ ಲುಕ್ ಫುಲ್ ಚೇಂಜ್.. ವಿಗ್ ತೆಗೆಸಿದ್ರಾ ಪೊಲೀಸ್? ದಾಸನ ಹೊಸ ಮುಖ ಅನಾವರಣ
ಈ ಹಿಂದೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ನಟ ದರ್ಶನ್ ಅವರನ್ನು ಭೇಟಿ ಮಾಡಲು ಪತ್ನಿ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಬಂದಿದ್ದರು. ಇದಾದ ಬಳಿಕ ನಟಿ ರಕ್ಷಿತಾ ಹಾಗೂ ನಟ ಪ್ರೇಮ್ ಅವರು ಕೂಡ ಆಗಮಿಸಿದ್ದರು. ದರ್ಶನ್ನನ್ನು ಜೈಲಿನಲ್ಲಿ ನೋಡಿದ ವಿಜಯಲಕ್ಷ್ಮೀ ಹಾಗೂ ಮಗ ವಿನೀಶ್ ಭಾವುಕರಾಗಿದ್ದರು.
ಇದೀಗ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಕುಟುಂಬಸ್ಥರು ಭೇಟಿ ಕೊಟ್ಟಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ ಹಾಗೂ ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಈ ಹಿಂದೆ ಜೈಲಿನ ಊಟವನ್ನು ತಿನ್ನದ ದರ್ಶನ್ ಮನೆ ಊಟಕ್ಕೆ ಹಂಬಲಿಸುತ್ತಿದ್ದರು. ಜೊತೆಗೆ ಮನೆಯೂಟವನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಅಲ್ಲದೇ ಜೈಲಿನ ಅಧಿಕಾರಿಗಳ ಬಳಿಯೂ ಮನೆಯೂಟ ಬೇಕು ಅಂತ ಆಸೆ ವ್ಯಕ್ತಪಡಿಸಿದ್ದರಂತೆ. ಸದ್ಯ ಜೈಲಿನಲ್ಲಿ ಕಾಲ ಕಳೆಯಲು ನಟ ದರ್ಶನ್ ಅವರಿಗೆ ಕಷ್ಟ ಆಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಇದನ್ನೂ ಓದಿ: ಕಣ್ತಪ್ಪಿಸಿ ಓಡಾಡಲು ಶಾಸಕ ಬಸನಗೌಡ ದದ್ದಲ್ ಹರಸಾಹಸ; ಸಿಎಂ ಜೊತೆ ಮಹತ್ವದ ಚರ್ಚೆ; ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ