/newsfirstlive-kannada/media/post_attachments/wp-content/uploads/2025/05/darshan6.jpg)
ನಟ ದರ್ಶನ್ ಮಾಜಿ ಸಂಸದೆ ಸುಮಲತಾ ಅಂಬರೀಶ್ ಆತ್ಮ ಇಂಡುವಾಳು ಎಸ್.ಸಚ್ಚಿದಾನಂದರ ಹುಟ್ಟುಹಬ್ಬ ಆಚರಿಸಿದ್ದಾರೆ. ಇತ್ತೀಚೆಗೆ ನಡೆದ ಹುಟ್ಟುಹಬ್ಬ ಆಚರಣೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ವೀಕ್ಷಕರಿಗೆ ಬಿಗ್ ಶಾಕ್.. ಮುಕ್ತಾಯದ ಹಂತದಲ್ಲಿದೆ ಶ್ರೀರಸ್ತು ಶುಭಮಸ್ತು ಸೀರಿಯಲ್!
ಒಂದು ಕಾಲದಲ್ಲಿ ಸುಮಲತಾರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚ್ಚಿದಾನಂದ್ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗುವುದರ ಮೂಲಕ ದರ್ಶನ್ ಟಾಂಟ್ ನೀಡಿದರಾ ಎಂಬ ಪ್ರಶ್ನೆ ಶುರುವಾಗಿದೆ. ಈ ಹಿಂದೆ ಸುಮಲತಾ, ದರ್ಶನ್ಗೆ ಮಗನ ಸ್ಥಾನ ನೀಡಿದ್ದರು. ದರ್ಶನ್ ಕೂಡ ಮದರ್ ಇಂಡಿಯಾ ಎಂದು ಸಾರ್ವಜನಿಕವಾಗಿ ಹೇಳುತ್ತಿದ್ದರು. ಆದರೆ ದರ್ಶನ್ ಜೈಲು ಸೇರಿದಾಗ ಸುಮಲತಾ ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಆರೋಪ ಇದೆ. ಅಷ್ಟೇ ಅಲ್ಲದೇ ಇತ್ತೀಚೆಗೆ ನಡೆದ ಮೊಮ್ಮಗನ ನಾಮಕರಣಕ್ಕೂ ದರ್ಶನ್ಗೆ ಆಹ್ವಾನಿಸಿಲ್ಲ ಎನ್ನಲಾಗಿದೆ.
ಕಷ್ಟಕ್ಕೆ ಸ್ಪಂದಿಸದ ಸುಮಲತಾ, ಅಭಿಷೇಕ್ರನ್ನ ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದರು. ಆದ್ರೆ ಮಂಡ್ಯ ಬಿಜೆಪಿ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಅವರು ದರ್ಶನ್ ಜೈಲಿನಲ್ಲಿದ್ದಾಗ ನೋಡಲು ಹಲವು ಬಾರಿ ತೆರಳಿದ್ದರು.
ಇದೀಗ ಸುಮಲತಾರ ಆಪ್ತನ ಬರ್ತ್ ಡೇಯನ್ನ ಶೂಟಿಂಗ್ ಸೆಟ್ನಲ್ಲೇ ನಟ ದರ್ಶನ್ ಸೆಲೆಬ್ರೇಟ್ ಮಾಡಿ ಕೌಂಟರ್ ಕೊಟ್ಟಿದ್ದಾರೆ ಎನ್ನಲಾಗ್ತಿದೆ. ಈ ಬರ್ತ್ ಡೇ ಪಾರ್ಟಿಯಲ್ಲಿ ನಿರ್ದೇಶಕ ದಿನಕರ್ ತೂಗುದೀಪ, ಕಿರುತೆರೆ ನಟಿ ನೇಹಾ ಗೌಡ ಪತಿ ಚಂದನ್ ಗೌಡ ಕೂಡ ಭಾಗಿಯಾಗಿದ್ದರು.
ಇಂಡುವಾಳು ಎಸ್. ಸಚ್ಚಿದಾನಂದ ಅವರು ಅಂಬರೀಶ್ ಕುಟುಂಬಕ್ಕೆ ಆಪ್ತನಾಗಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಪರ ಪ್ರಚಾರ ಮಾಡಿದ್ದರು. ಸುಮಲತಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಈ ಸಚ್ಚಿದಾನಂದ. ಕಳೆದ ವಿಧಾನಸಭಾ ಚುನಾವಣೆ ನಂತರ ಸುಮಲತಾರಿಂದ ಅಂತರ ಕಾಯ್ದುಕೊಂಡಿದ್ದರು. ಚುನಾವಣೆಯಲ್ಲಿ ನೆರವಿಗೆ ಬಾರದ ಸುಮಲತಾ ವಿರುದ್ಧ ಸಚ್ಚಿದಾನಂದ ಬೇಸರ ಮಾಡಿಕೊಂಡಿದ್ದರು. ಸದ್ಯ ಶೂಟಿಂಗ್ ಸೆಟ್ನಲ್ಲೇ ಸಚ್ಚಿದಾನಂದ ಅವರ ಹುಟ್ಟು ಹಬ್ಬವನ್ನು ನಟ ದರ್ಶನ್ ಆಚರಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ