Advertisment

ನಟ ದರ್ಶನ್​ಗೆ ಆ 2 ಪ್ರತ್ಯಕ್ಷ ಸಾಕ್ಷಿಗಳ ಕಂಟಕ..! ಐ ವಿಟ್ನೆಸ್​​ಗೆ ಭಾರೀ ಹಣದ ಆಮೀಷ..!

author-image
Ganesh
Updated On
ಕೊಲೆ ಕೇಸ್‌ಗೆ ಬಿಗ್ ಟ್ವಿಸ್ಟ್‌.. ದರ್ಶನ್ ಗ್ಯಾಂಗ್‌ನಲ್ಲಿ ಮತ್ತೊಬ್ಬ ಅನಾಮಧೇಯ; ಸ್ಫೋಟಕ ಮಾಹಿತಿ ಇಲ್ಲಿದೆ
Advertisment
  • ಟೆಕ್ನಿಕಲ್ ಎವಿಡೆನ್ಸ್​ಗಿಂತ ಪ್ರತ್ಯಕ್ಷ ಸಾಕ್ಷಿಗಳಿಗೆ ಮಹತ್ವ ಜಾಸ್ತಿ
  • ನಟ ದರ್ಶನ್ ಹಲ್ಲೆ ಮಾಡಿರುವುದನ್ನ ಸೆರೆ ಹಿಡಿದಿರುವ ವ್ಯಕ್ತಿ
  • ಈ ಇಬ್ಬರು ಸಾಕ್ಷಿಗಳೇ ರೇಣುಕಾ ಹತ್ಯೆ ಕೇಸ್​ನಲ್ಲಿ ಐ ವಿಟ್ನೆಸ್​

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ನಟ ದರ್ಶನಗೆ ಪ್ರತ್ಯಕ್ಷ ಸಾಕ್ಷಿಗಳು ಕಂಟಕವಾಗಲಿದೆಯಾ ಎಂಬ ಪ್ರಶ್ನೆಗಳು ಶುರುವಾಗಿವೆ. ಟೆಕ್ನಿಕಲ್ ಎವಿಡೆನ್ಸ್​ಗಿಂತ ಪ್ರತ್ಯಕ್ಷ ಸಾಕ್ಷಿಗಳಿಗೆ ಮಹತ್ವ ಜಾಸ್ತಿ ಇದೆ.

Advertisment

ಅಂದ್ಹಾಗೆ ದರ್ಶನ್ ಅ್ಯಂಡ್ ಗ್ಯಾಂಗ್ ವಿರುದ್ಧ ಐ ವಿಟ್ನೆಸ್​ಗಳು ಸಿಕ್ಕಿದೆ. ನಟ ದರ್ಶನ್ ಹಲ್ಲೆ ಮಾಡಿರುವುದನ್ನ ವ್ಯಕ್ತಿಯೊಬ್ಬರು ಸೆರೆ ಹಿಡಿದಿದ್ದಾರೆ. ಶೆಡ್ ಸೆಕ್ಯೂರಿಟಿ ಗಾರ್ಡ್​ನಿಂದ crpc 164 ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಇಬ್ಬರು ಸಾಕ್ಷಿಗಳೇ ರೇಣುಕಾ ಹತ್ಯೆ ಕೇಸ್​ನಲ್ಲಿ ಐ ವಿಟ್ನೆಸ್ ಎಂದು ತನಿಖಾಧಿಕಾರಿಗಳು ಪರಿಗಣಿಸಿದ್ದಾರೆ.

ಇದನ್ನೂ ಓದಿ:ಅಗಲಿದ ಕನ್ನಡಿಗನ ಮರೆಯದ ಟೀಂ ಇಂಡಿಯಾ.. ಅಫ್ಘಾನ್ ವಿರುದ್ಧ ಕಪ್ಪು ಪಟ್ಟಿ ಕಟ್ಟಿ ಆಡಿದ ರೋಹಿತ್ ಪಡೆ..

ಕೇಸ್​ ಮುಚ್ಚಿ ಹಾಕಲು ಪ್ರಯತ್ನ?
ರೇಣುಕಾ ಕೊಲೆ ಮಾಡಿದ ಬಳಿಕ ಕೇಸ್​ ಮುಚ್ಚಿಹಾಕಲು ಪ್ರಯತ್ನ ನಡೆದಿದೆಯಂತೆ. ಐ ವಿಟ್ನೆಸ್​ಗಳಿಗೆ ಹಣದ ಆಮಿಷ ಒಡ್ಡಿದ್ದಾರೆ. ಅದಕ್ಕೂ ಮೊದಲು ಎಸ್​ಪಿ ಬದಲಾವಣೆಗೂ ಭಾರೀ ಒತ್ತಡ ಹೇರಿದ್ದರು. ಸರ್ಕಾರದ ಮಟ್ಟದಲ್ಲಿ ಪ್ರಕರಣ ಮುಚ್ಚಿ ಹಾಕಲು ನಡೆಸಿದ ಪ್ರಯತ್ನ ವಿಫಲ ಆಗಿದೆ. ಇದೀಗ ಸಾಕ್ಷಿಗಳ ಮೇಲೆ ಪ್ರಭಾವ ಬೀರಲು ಇನ್ನಿಲ್ಲದ ಸರ್ಕಸ್ ಮಾಡ್ತಿದ್ದಾರೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಪ್ರತ್ಯಕ್ಷ ಸಾಕ್ಷಿಗಳಿಗೆ ಹಣದ ಆಮೀಷ ಒಡ್ಡುತ್ತಿರೋರು ಯಾರು ಅನ್ನೋದ್ರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Advertisment

ಇದನ್ನೂ ಓದಿ:ಕುಡಿಯಲು ನೀರು ತುಂಬಿಸಿಕೊಳ್ತಿದ್ದಾಗ.. ಟ್ಯಾಂಕರ್​​ ಒಳಗೆ 25 ವರ್ಷದ ಮಹಿಳೆಯ ಶವ ಪತ್ತೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment