/newsfirstlive-kannada/media/post_attachments/wp-content/uploads/2025/07/ACTOR-DARSHANN.jpg)
ಸಾಲು ಸಾಲು ಸಂಕಷ್ಟದ ನಡುವೆ ನಟ ದರ್ಶನ್ ಪತ್ನಿ ಜೊತೆ ದೇವರ ದರ್ಶನ ಪಡೆದಿದ್ದಾರೆ. ಸುಪ್ರೀಂ ಕೋರ್ಟ್ನಲ್ಲಿ ಬೇಲ್ ಭವಿಷ್ಯಕ್ಕೆ ತಲೆ ಕಡೆಸಿಕೊಂಡಿರೋ ದರ್ಶನ್ ಪತ್ನಿ ವಿಜಯಲಕ್ಷ್ಮೀ ಜೊತೆ ದೇಗುಲಗಳ ಪ್ರದಕ್ಷಿಣೆ ಹಾಕ್ತಿದ್ದಾರೆ. ಇಲ್ಲಿ ದರ್ಶನ್ ವಿರುದ್ಧ ಸೆಲೆಬ್ರಿಟಿಗಳು ಹೋರಾಟ ಮಾಡ್ತಿದ್ದಾರೆ.
ಇಂಡಸ್ಟ್ರಿಯಲ್ಲಿ ಸೆಲೆಬ್ರಿಟಿ vs ಡಿ ಬಾಸ್ ಪ್ಯಾನ್ಸ್ ನಡುವೆ ಮಾತಿನ ಮಿಸೈಲ್ ಅಟ್ಯಾಕ್ ನಡೀತಿದೆ. ದರ್ಶನ್ ಫ್ಯಾನ್ಸ್ ಇಂದ ಕಾಮೆಂಟ್.. ಮೆಸೇಜ್ ರೂಪದಲ್ಲಿ ಡ್ರೋನ್ ಅಟ್ಯಾಕ್ ಆಗ್ತಿದ್ರೆ.. ನಟಿ ರಮ್ಯಾ.. ನಟ ಪ್ರಥಮ್.. ಡಿಫೆಂಡ್ ಮಾಡ್ಕೊಳ್ಳೋದಕ್ಕೆ ಪೊಲೀಸ್ ಸೇನೆಯನ್ನ ಬಳಸ್ತಿದೆ. ಈ ವಾರ್ನ ನಡುವೆ ಡೆವಿಲ್ ನಾಗರ ಪಂಚಮಿಯಂದು ಟೆಂಪಲ್ ರನ್ ಶುರು ಮಾಡಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬಿ ಖಾತಾ ಆಸ್ತಿಗೆ ಎ ಖಾತಾ ನೀಡಲು ಕೇವಲ 15 ದಿನದಲ್ಲಿ ಆನ್ಲೈನ್ ವ್ಯವಸ್ಥೆ ಜಾರಿ
ದಚ್ಚು ಟೆಂಪಲ್ ರನ್!
ಅಂದು ದಾಸ ಜೈಲಿನಲ್ಲಿದ್ರು.. ಆವತ್ತೂ ಬೇಲ್ ಟೆನ್ಷನ್ ಇತ್ತು.. ಪತಿಗಾಗಿ ಆಚೆ ಹೋರಾಟ ಮಾಡ್ತಿದ್ದ ವಿಜಯಲಕ್ಷ್ಮೀ.. ಅಸ್ಸಾಂನಲ್ಲಿರೋ ಆ ತಾಯಿ ದೇಗುಲಕ್ಕೆ ಭೇಟಿ ಕೊಟ್ಟಿದ್ರು.. ಭಾರತದ 51 ಶಕ್ತಿಪೀಠಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂದು ನಂಬಲಾಗುವ ಈ ದೇವಸ್ಥಾನಕ್ಕೆ ಬಂದು, ಪತಿಯ ಶೀಘ್ರ ಬಿಡುಗಡೆಗಾಗಿ ಹರಕೆ ಹೊತ್ತುಕೊಂಡಿದ್ದರು. ಅಂದು ವಿಜಯಲಕ್ಷ್ಮೀ ಮಾಡಿದ್ದ ಪಾರ್ಥನೆ ಫಲಿಸಿತೋ ಏನೋ, ದರ್ಶನ್ಗೆ ಬೇಲ್ ಕೂಡ ಸಿಕ್ಕಿತ್ತು.. ಹರಕೆ ಈಡೇರಿದ ಮೇಲೆ ಪೂಜೆ ಸಲ್ಲಿಕೆ ಮಾಡೋದಕ್ಕೆ ದರ್ಶನ್ ದಂಪತಿ ಟೆಂಪಲ್ ರನ್ ಶುರು ಮಾಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾಕ್ಕೆ ಆಂಗ್ಲರ ನಾಡಲ್ಲಿ ಬಾರ್ಮಿ ಆರ್ಮಿ ಕಾಟ.. ಕೌಂಟರ್ಗೆ ರೆಡಿಯಾದ ಭಾರತ್ ಆರ್ಮಿ!
ಅಂದು ಸಿಕ್ಕ ಬೇಲ್ ಅನ್ನ ರದ್ದು ಮಾಡಿ ಅಂತ ರಾಜ್ಯ ಪೊಲೀಸ್ ಇಲಾಖೆ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಇದರ ತೀರ್ಪು ಹೊರ ಬರೋದಿದೆ. ಈ ಟೆನ್ಷನ್ ನಡುವೆ ತಾವು ಕಟ್ಟಿಕೊಂಡಿದ್ದ ಹರಕೆಯನ್ನು ತೀರಿಸಲು ವಿಜಯಲಕ್ಷ್ಮಿ ಮತ್ತು ದರ್ಶನ್ ಕುಟುಂಬ ಸಮೇತರಾಗಿ ಅಸ್ಸಾಂನ ಕಾಮಾಕ್ಯ ದೇವಿಯ ಸನ್ನಿಧಿಗೆ ಭೇಟಿ ನೀಡಿದ್ರು. ಹರಕೆ ಈಡೇರಿಸಿದ್ರು.. ಜೊತೆಗೆ ಸುಪ್ರೀಂಕೋರ್ಟ್ನಲ್ಲಿ ಪ್ರಕಟವಾಗೋ ಬೇಲ್ ಭವಿಷ್ಯ ತಮ್ಮ ಪರ ಇರಲಿ ಅಂತ ದೇಗುಲದಲ್ಲಿ ಪ್ರದಕ್ಷಿಣೆ ಹಾಕಿದ್ರು. ಕಳೆದ ವಾರ ಸುಪ್ರೀಂಕೋರ್ಟ್ನಲ್ಲಿ, ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ವಾದ-ಪ್ರತಿವಾದಗಳು ನಡೆದಿವೆ. ಒಂದು ವಾರದಲ್ಲಿ ತೀರ್ಪು ನೀಡುವುದಾಗಿ ಕೋರ್ಟ್ ತಿಳಿಸಿದೆ.
ರಮ್ಯಾ ನಿವಾಸಕ್ಕೆ ತೆರಳಿ ಹೇಳಿಕೆ ದಾಖಲಿಸಿಕೊಂಡ ಪೊಲೀಸರು
ನಟಿ ರಮ್ಯಾ ದರ್ಶನ್ ಅಭಿಮಾನಿಗಳ ವಿರುದ್ಧ ನೀಡಿರೋ ದೂರಿನ ಬಗ್ಗೆ ಸಿಸಿಬಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಡಿಸಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಸದ್ಯ ರಿಚ್ಮಂಡ್ಟೌನ್ನಲ್ಲಿರೋ ನಟಿ ರಮ್ಯಾ ನಿವಾಸಕ್ಕೆ ತೆರಳಿದ ಸೈಬರ್ ಕ್ರೈಂ ಪೊಲೀಸರು ಹೇಳಿಕೆ ಪಡೆದಿದ್ದಾರೆ. ಯಾವ ಪೇಜ್ಗಳಿಂದ ಅಶ್ಲೀಲ ಕಾಮೆಂಟ್ಗಳು ಬಂದಿತ್ತು. ಯಾವ ಯಾವ ನಂಬರ್ಗಳಿಂದ ಬೆದರಿಕೆಯ ಕರೆಗಳು ಬಂದ್ವು ಅನ್ನೋ ಮಾಹಿತಿ ಪಡೆದುಕೊಂಡ್ರು.
ಇದನ್ನೂ ಓದಿ: ನಿಮ್ಮ ಸ್ಥಾನದಿಂದ ಗೌರವ, ಪುರಸ್ಕಾರ ದೊರೆಯಬಹುದು.. ಕುಟುಂಬ ಇಷ್ಟ ಪಡುತ್ತದೆ; ಇಲ್ಲಿದೆ ಇಂದಿನ ಭವಿಷ್ಯ!
ಬೆದರಿಕೆ ಹಾಕಿದವರ ವಿರುದ್ಧ ನಟ ಪ್ರಥಮ್ ಏಕಾಂಗಿ ಹೋರಾಟ!
ದರ್ಶನ್ ಫ್ಯಾನ್ಸ್ ಬೆದರಿಕೆ ಹಾಕಿದ್ದಾರೆ ಅಂತ ಆರೋಪಿಸಿರೋ ಪ್ರಥಮ್ ಏಕಾಂಗಿ ಹೋರಾಟ ಮಾಡ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿಗೆ ಲಿಖಿತ ದೂರು ನೀಡಿದ್ದಾರೆ. ಬಳಿಕ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಎಸ್ಪಿ ಕಚೇರಿ ಮುಂದೆ ಧರಣಿಗೆ ಕೂತ್ರು.. ನನಗೆ ಏನಾದ್ರು ಆದ್ರೆ ಅದಕ್ಕೆ ದರ್ಶನ್ ಅವರೇ ಕಾರಣ ಅಂತ ಹೇಳಿದ್ರು. ಇವತ್ತು ಜ್ಞಾನ ಭಾರತಿ ಪೊಲೀಸ್ ಠಾಣೆಯಲ್ಲಿ ಬಂದು ದೂರು ಸಲ್ಲಿಸೋದಾಗಿ ತಿಳಿಸಿದ್ದಾರೆ. ಅತ್ತ ಬೇಲ್ ಟೆನ್ಷನ್ ಇತ್ತ ರಮ್ಯಾ.. ಇದ್ರ ಮಧ್ಯೆ ಪ್ರಥಮ್.. ಈ ಮೂರು ವಿಚಾರ ದರ್ಶನ್ಗೆ ತಲೆ ನೋವು ತಂದಿದೆ. ಆತಂಕದಲ್ಲಿರೋ ದರ್ಶನ್ಗೆ ಸುಪ್ರೀಂಕೋರ್ಟ್ ಏನ್ ತೀರ್ಪು ನೀಡುತ್ತೋ ಕಾದು ನೋಡಬೇಕಿದೆ.
ಇದನ್ನೂ ಓದಿ: ಬ್ರೆಡ್, ಬಿಸ್ಕತ್, ಚಿಪ್ಸ್ ಸೇರಿ ಇತರೆ ಪ್ಯಾಕೆಟ್ಗಳ ಮೇಲೆ ಈ ಕಲರ್ ಚಿಹ್ನೆ, ಡಾಟ್ ಇದ್ರೆ ಏನ್ ಅರ್ಥ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ