ಬೆನ್ನು ನೋವಿನಲ್ಲೇ ಪ್ರಾಣ ಸ್ನೇಹಿತನ ಸಿನಿಮಾ ನೋಡಲು ಬಂದ ನಟ ದರ್ಶನ್; 10 ಫೋಟೋಗಳು ಇಲ್ಲಿವೆ!

author-image
Bheemappa
Updated On
ಧನ್ವೀರ್ ‘ವಾಮನ’ ಚಿತ್ರ ನೋಡಲು ಬಂದ ದರ್ಶನ್‌ಗೆ ಪೊಲೀಸ್‌ ಷರತ್ತು! ಆಮೇಲೇನಾಯ್ತು?
Advertisment
  • ಧನ್ವೀರ್ ನಟನೆಯ ವಾಮನ ಸಿನಿಮಾ ರಾಜ್ಯಾದ್ಯಂತ ನಾಳೆ ಬಿಡುಗಡೆ
  • ಪ್ರೀಮಿಯರ್ ಶೋನಲ್ಲಿ ವಾಮನ ಸಿನಿಮಾ ವೀಕ್ಷಣೆ ಮಾಡಿದ ದರ್ಶನ್
  • ಕಾರಿನಿಂದ ಕೆಳಗೆ ಇಳೀತ್ತಿದ್ದಂತೆ ದರ್ಶನ್​ಗೆ ಕಾಣಿಸಿಕೊಂಡ ಬೆನ್ನುನೋವು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣ ಸ್ನೇಹಿತ ಧನ್ವೀರ್ ಅಭಿನಯದ ವಾಮನ ಸಿನಿಮಾ ನಾಳೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಗೆಳೆಯನ ಸಿನಿಮಾ ದರ್ಶನ್ ಸಾಥ್ ನೀಡಿದ್ದು, ಪ್ರೀಮಿಯರ್ ಶೋನಲ್ಲಿ ಭಾಗಿಯಾಗಿದ್ದಾರೆ.

publive-image

ವಾಮನ ಸಿನಿಮಾದ ಪ್ರೀಮಿಯರ್ ಶೋಗೆ ನಟ ದರ್ಶನ್ ಆಗಮಿಸಿದ್ದು, ನಟ ಚಿಕ್ಕಣ್ಣ ಸೇರಿದಂತೆ ಆಪ್ತರು ಸಾಥ್ ನೀಡಿದ್ದಾರೆ.

publive-image

ನಗರದ ಜಿಟಿ ಮಾಲ್‌ನಲ್ಲಿ ನಟ ದರ್ಶನ್ ಅವರು ವಾಮನ ಸಿನಿಮಾ ನೋಡಲು ಬಂದಾಗ ದರ್ಶನ್ ಅವರನ್ನು ಬಹಳ ಪ್ರೀತಿಯಿಂದ ಸ್ವಾಗತಿಸಲಾಯಿತು.

publive-image

ಬೆನ್ನು ನೋವಿನಲ್ಲೂ ದರ್ಶನ್ ಅವರು ಧನ್ವೀರ್ ಅಭಿನಯದ ವಾಮನ ಸಿನಿಮಾ ಶುಭ ಹಾರೈಸಲು ಆಗಮಿಸಿದ್ದಾರೆ. ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಬೆನ್ನು ನೋವಿನಿಂದ ದರ್ಶನ್ ಒದ್ದಾಡಿದರು.

publive-image

ಬೆನ್ನು ನೋವಿನ ಹಿನ್ನೆಲೆಯಲ್ಲಿ ನಟ ದರ್ಶನ್ ಅವರು ನಿನ್ನೆ ನಡೆದ ಕೋರ್ಟ್ ವಿಚಾರಣೆಗೆ ಹಾಜರಾಗಲು ವಿನಾಯಿತಿ ಕೇಳಿದ್ದರು.

publive-image

ಧನ್ವೀರ್ ನಟನೆಯ ನಾಲ್ಕನೇ ಸಿನಿಮಾ ವಾಮನ ಆಗಿದೆ. ಈ ಚಿತ್ರದ ಅಮ್ಮನ ಹಾಡನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ರಿಲೀಸ್ ಮಾಡಿದ್ದಾರು. ಇದೇ ವೇಳೆ ಈ ಚಿತ್ರದ ಮುದ್ದು ರಾಕ್ಷಸಿ ಹಾಡು ನನಗೆ ತುಂಬಾ ಇಷ್ಟ ಹೋಗಿ ನೋಡಿ ಎಂದು ಶುಭ ಹಾರೈಸಿದ್ದರು.

ಇದನ್ನೂ ಓದಿ: ರೈಲ್ವೆ ಹಳಿಗಳ ನಡುವೆ ಮಲಗಿ ರೀಲ್ಸ್​ ಮಾಡಿದ ರೀಲ್​​ಪುತ್ರ.. ವಿಡಿಯೋಗೆ 70K ಹೆಚ್ಚು ವೀವ್ಸ್, ಆದ್ರೆ ಯುವಕ ಏನಾದ?​

publive-image

ನಟ ದರ್ಶನ್‌ ತೂಗುದೀಪ ಮತ್ತು ಧನ್ವೀರ್‌ ಅವರ ಮಧ್ಯೆ ಮೊದಲಿನಿಂದ ಒಂದು ಒಳ್ಳೆಯ ಸಂಬಂಧ ಇದೆ. ಈ ಹಿಂದೆ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದರು. ಅಂತಹ ಕಷ್ಟದ ಸಮಯದಲ್ಲಿ ನಟ ದರ್ಶನ್ ಮತ್ತು ಅವರ ಕುಟುಂಬದ ಜೊತೆ ಧನ್ವೀರ್‌ ಬೆಂಬಲವಾಗಿ ನಿಂತಿದ್ದರು.

publive-image

ಇದೀಗ ರಿಲೀಸ್‌ಗೆ ಸಜ್ಜಾಗಿರುವ ಧನ್ವೀರ್‌ ನಟನೆಯ ʻವಾಮನʼ ಸಿನಿಮಾ ಪ್ರೀಮಿಯರ್ ಶೋಗೆ ಖುದ್ದು ದರ್ಶನ್ ಅವರೇ ಆಗಮಿಸಿ ಪ್ರಾಣ ಸ್ನೇಹಿತನ ಸಿನಿಮಾದ ಸಕ್ಸಸ್ ಆಗಲಿ ಎಂದು ಹಾರೈಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment