ಯಾರಿಗೂ ಈ ಅದೃಷ್ಟ ಸಿಗೋದಿಲ್ಲ ಅದು ನನಗೆ ಸಿಕ್ಕಿದೆ ಎಂದ ವಿಜಯ್ ಪುತ್ರಿ
ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದ ಸಿನಿಮಾ ಮುಹೂರ್ತ
29ನೇ ಸಿನಿಮಾದಲ್ಲಿ ಮಗಳನ್ನು ಇಂಡಸ್ಟ್ರಿಗೆ ಪರಿಚಯಿಸಿದ ಸ್ಯಾಂಡಲ್ವುಡ್ ಸಲಗ
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಪುತ್ರಿ ಮೋನಿಕಾ ನಟನೆಯ ಚೊಚ್ಚಲ ಸಿನಿಮಾ ಸೆಟ್ಟೇರಿದೆ. ಕಾಟೇರಾ ಚಿತ್ರದ ರೈಟರ್ ಜಡೇಶ್ ಕೆ ಹಂಪಿ ಈ ಚಿತ್ರ ನಿರ್ದೇಶಿಸುತ್ತಿದ್ದು, ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದೆ.
ಇದನ್ನೂ ಓದಿ: VIDEO: ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಕ್ಯಾಮೆರಾಗೆ ಪೋಸ್ ಕೊಟ್ಟ ಸೋನು ಗೌಡ; ಫ್ಯಾನ್ಸ್ ಏನಂದ್ರು?
ಮೊಟ್ಟ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಡುತ್ತಿರೋ ದುನಿಯಾ ವಿಜಯ್ ಪುತ್ರಿ ಮೋನಿಕಾ ಅವರು ನ್ಯೂಸ್ ಫಸ್ಟ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಮೋನಿಕಾ, ತುಂಬಾ ಖುಷಿಯಾಗುತ್ತಿದೆ. ತುಂಬಾ ಅದ್ಭುತವಾದ ಪಾತ್ರ ನನಗೆ ಸಿಕ್ಕಿದೆ. ಈ ಪಾತ್ರದಲ್ಲಿ ನಟನೆಗೆ ಪ್ರಾಮುಖ್ಯತೆ ಇದೆ. ಮೊದಲನೇ ಸಿನಿಮಾದಲ್ಲಿ ಮೊದಲನೇ ಪ್ರಯತ್ನ. ಯಾರಿಗೂ ಈ ಅದೃಷ್ಟ ಸಿಗೋದಿಲ್ಲ. ಅದು ನನಗೆ ಸಿಕ್ಕಿದೆ ಇದು ನನ್ನ ಅದೃಷ್ಟ. ಸಿನಿಮಾ ಇಂಡಸ್ಟ್ರಿ ಬರುವುದು ನನ್ನ ಆಸೆ.
ಆ ಆಸೆಯಂತೆ ನಾನು ನನ್ನ ತಂದೆ ಜೊತೆ ಕಾಣಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಸಿದ್ಧತೆ ನಡೆಸುತ್ತಿದ್ದೇನೆ. ಮುಂದೆ ಕೂಡ ನನ್ನ ತಂದೆ ದಾರಿಯಲ್ಲೇ ನಾನು ಸಾಗುತ್ತೇನೆ ಎಂದಿದ್ದಾರೆ. ನಟ ದುನಿಯಾ ವಿಜಯ್ 29ನೇ ಚಿತ್ರಕ್ಕೆ ಕಾಟೇರ ಸಿನಿಮಾದ ಕಥೆಗಾರ ಜಡೇಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ತನ್ನ ಮಗಳನ್ನು ದುನಿಯಾ ವಿಜಯ್ ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ. ವಿಶೇಷ ಅಂದ್ರೆ ದುನಿಯಾ ವಿಜಯ್ ಈ ಚಿತ್ರದಲ್ಲಿ ನಾಯಕನಾಗಿದ್ದು, ರಚಿತಾ ರಾಮ್ ನಾಯಕಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಯಾರಿಗೂ ಈ ಅದೃಷ್ಟ ಸಿಗೋದಿಲ್ಲ ಅದು ನನಗೆ ಸಿಕ್ಕಿದೆ ಎಂದ ವಿಜಯ್ ಪುತ್ರಿ
ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನೆರವೇರಿದ ಸಿನಿಮಾ ಮುಹೂರ್ತ
29ನೇ ಸಿನಿಮಾದಲ್ಲಿ ಮಗಳನ್ನು ಇಂಡಸ್ಟ್ರಿಗೆ ಪರಿಚಯಿಸಿದ ಸ್ಯಾಂಡಲ್ವುಡ್ ಸಲಗ
ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಪುತ್ರಿ ಮೋನಿಕಾ ನಟನೆಯ ಚೊಚ್ಚಲ ಸಿನಿಮಾ ಸೆಟ್ಟೇರಿದೆ. ಕಾಟೇರಾ ಚಿತ್ರದ ರೈಟರ್ ಜಡೇಶ್ ಕೆ ಹಂಪಿ ಈ ಚಿತ್ರ ನಿರ್ದೇಶಿಸುತ್ತಿದ್ದು, ಬೆಂಗಳೂರಿನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಚಿತ್ರದ ಮುಹೂರ್ತ ನಡೆದಿದೆ.
ಇದನ್ನೂ ಓದಿ: VIDEO: ಜೈಲಿನಿಂದ ಬಿಡುಗಡೆ ಬೆನ್ನಲ್ಲೇ ಕ್ಯಾಮೆರಾಗೆ ಪೋಸ್ ಕೊಟ್ಟ ಸೋನು ಗೌಡ; ಫ್ಯಾನ್ಸ್ ಏನಂದ್ರು?
ಮೊಟ್ಟ ಮೊದಲ ಬಾರಿಗೆ ಬಣ್ಣದ ಲೋಕಕ್ಕೆ ಕಾಲಿಡುತ್ತಿರೋ ದುನಿಯಾ ವಿಜಯ್ ಪುತ್ರಿ ಮೋನಿಕಾ ಅವರು ನ್ಯೂಸ್ ಫಸ್ಟ್ ಜೊತೆ ಮನಬಿಚ್ಚಿ ಮಾತಾಡಿದ್ದಾರೆ. ಈ ಬಗ್ಗೆ ಮಾತಾಡಿದ ಮೋನಿಕಾ, ತುಂಬಾ ಖುಷಿಯಾಗುತ್ತಿದೆ. ತುಂಬಾ ಅದ್ಭುತವಾದ ಪಾತ್ರ ನನಗೆ ಸಿಕ್ಕಿದೆ. ಈ ಪಾತ್ರದಲ್ಲಿ ನಟನೆಗೆ ಪ್ರಾಮುಖ್ಯತೆ ಇದೆ. ಮೊದಲನೇ ಸಿನಿಮಾದಲ್ಲಿ ಮೊದಲನೇ ಪ್ರಯತ್ನ. ಯಾರಿಗೂ ಈ ಅದೃಷ್ಟ ಸಿಗೋದಿಲ್ಲ. ಅದು ನನಗೆ ಸಿಕ್ಕಿದೆ ಇದು ನನ್ನ ಅದೃಷ್ಟ. ಸಿನಿಮಾ ಇಂಡಸ್ಟ್ರಿ ಬರುವುದು ನನ್ನ ಆಸೆ.
ಆ ಆಸೆಯಂತೆ ನಾನು ನನ್ನ ತಂದೆ ಜೊತೆ ಕಾಣಿಸಿಕೊಳ್ಳಲು ಎಲ್ಲ ರೀತಿಯಲ್ಲೂ ಸಿದ್ಧತೆ ನಡೆಸುತ್ತಿದ್ದೇನೆ. ಮುಂದೆ ಕೂಡ ನನ್ನ ತಂದೆ ದಾರಿಯಲ್ಲೇ ನಾನು ಸಾಗುತ್ತೇನೆ ಎಂದಿದ್ದಾರೆ. ನಟ ದುನಿಯಾ ವಿಜಯ್ 29ನೇ ಚಿತ್ರಕ್ಕೆ ಕಾಟೇರ ಸಿನಿಮಾದ ಕಥೆಗಾರ ಜಡೇಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಮೂಲಕ ತನ್ನ ಮಗಳನ್ನು ದುನಿಯಾ ವಿಜಯ್ ಇಂಡಸ್ಟ್ರಿಗೆ ಪರಿಚಯಿಸಿದ್ದಾರೆ. ವಿಶೇಷ ಅಂದ್ರೆ ದುನಿಯಾ ವಿಜಯ್ ಈ ಚಿತ್ರದಲ್ಲಿ ನಾಯಕನಾಗಿದ್ದು, ರಚಿತಾ ರಾಮ್ ನಾಯಕಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ