ನಟ ದರ್ಶನ್​​ ಫ್ಯಾನ್ಸ್​​ ಮೇಲೆ ದುನಿಯಾ ವಿಜಯ್​ ಗರಂ ಆಗಿದ್ದೇಕೆ? ಏನಂದ್ರು?

author-image
Ganesh Nachikethu
Updated On
ನಟ ದರ್ಶನ್​​ ಫ್ಯಾನ್ಸ್​​ ಮೇಲೆ ದುನಿಯಾ ವಿಜಯ್​ ಗರಂ ಆಗಿದ್ದೇಕೆ? ಏನಂದ್ರು?
Advertisment
  • ಇಡೀ ರಾಜ್ಯಾದ್ಯಂತ ಮುಂದುವರಿದ ಭೀಮ ಸಿನಿಮಾದ ಆರ್ಭಟ
  • ಇದರ ಮಧ್ಯೆ ನಟ ದರ್ಶನ್​ ಫ್ಯಾನ್ಸ್​ಗೆ ದುನಿಯಾ ವಿಜಯ್​ ಕೌಂಟರ್​​​​
  • ದುನಿಯಾ ವಿಜಯ್​ ನಟ ದರ್ಶನ್ ಫ್ಯಾನ್ಸ್​ ಮೇಲೆ ಗರಂ ಆಗಿದ್ದೇಕೆ?

ಸ್ಯಾಂಡಲ್​​ವುಡ್​ ಸಲಗ ವಿಜಯ್​ ಕುಮಾರ್ ಹೊಸ ಸಿನಿಮಾ ​ಭೀಮನ ಆರ್ಭಟ ಮುಂದುವರಿದಿದೆ. ​ಸಿನಿಮಾ ಯಶಸ್ವಿಯಾಗಿ 2ನೇ ವಾರಕ್ಕೆ ಕಾಲಿಟ್ಟಿದ್ದು, ದುನಿಯಾ ವಿಜಯ್ ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿ ಜನರ ಮನಸ್ಸು ಗೆದ್ದಿದ್ದಾರೆ. ಇದರ ಮಧ್ಯೆ ದುನಿಯಾ ವಿಜಯ್​ ನಟ ದರ್ಶನ್ ಫ್ಯಾನ್ಸ್​ ಮೇಲೆ ಗರಂ ಆಗಿದ್ದಾರೆ.

​ಇತ್ತೀಚೆಗಷ್ಟೇ ಕೆಲವು ಅಭಿಮಾನಿಗಳು ನಟ ದರ್ಶನ್ ಜೈಲಿನಿಂದ ಹೊರಗೆ ಬರೋವರ್ಗೂ ಕನ್ನಡ ಸಿನಿಮಾಗಳನ್ನ ನೋಡುವುದಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡಿದ್ದರು. ಈ ಎಲ್ಲವನ್ನೂ ಮೀರಿ ಭೀಮ ಗೆಲುವಿನ ಹಾದಿ ಹಿಡಿದಿದ್ದಾನೆ. ಸಿನಿಮಾ ಭರ್ಜರಿ ಕಲೆಕ್ಷನ್ ಸಹ ಮಾಡುತ್ತಿದೆ.

ದುನಿಯಾ ವಿಜಯ್​​ ಕೊಟ್ರು ಕೌಂಟರ್​​..!

ಇನ್ನು, ಸಿನಿಮಾ ನೋಡಲ್ಲ ಎಂದಿದ್ದ ದರ್ಶನ್​ ಅಭಿಮಾನಿಗಳ ಬಗ್ಗೆ ಮಾಧ್ಯಮದವರು ದುನಿಯಾ ವಿಜಯ್​​ ಅವರಿಗೆ ಪ್ರಶ್ನೆ ಕೇಳಿದ್ರು. ಇದಕ್ಕೆ ಉತ್ತರ ನೀಡಿದ ದುನಿಯಾ ವಿಜಯ್​ ಅವರು, ಅದು ಅವರ ವೈಯಕ್ತಿಕ ಭಾವನೆ. ನಾನು ಇನ್ನೊಬ್ಬರ ಭಾವನೆಯನ್ನು ಗೌರವಿಸುತ್ತೇನೆ. ಯಾರೋ ನೋಡಲ್ಲ ಎಂದರೆ ಏನು ಮಾಡಕ್ಕಾಗಲ್ಲ. ನೋಡುವವರಿಗೆ ಬೆಂಬಲ ನೀಡೋಣ. ದರ್ಶನ್​​ ಅಭಿಮಾನಿಗಳ ವೈಯಕ್ತಿಕ ಭಾವನನೆಗೆ ಗೌರವ ಇದೆ. ಅದನ್ನು ಪಾಸಿಟಿವ್ ಆಗಿಯೇ ತೆಗೆದುಕೊಳ್ತೀವಿ ಎನ್ನುವ ಮೂಲಕ ವಿಜಯ್​​​ ಕೌಂಟರ್​ ನೀಡಿದ್ರು.

ಇದನ್ನೂ ಓದಿ:‘ಇಂಥ ನನ್ಮಕ್ಕಳನ್ನ ನಡು ರಸ್ತೆಯಲ್ಲಿ ಸುಟ್ಟು ಹಾಕ್ಬೇಕು’- ಕೆರಳಿ ಕೆಂಡವಾದ ನಟ ಧ್ರುವ ಸರ್ಜಾ; ವಿಡಿಯೋ ರಿಲೀಸ್‌!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment