/newsfirstlive-kannada/media/post_attachments/wp-content/uploads/2025/05/seeta-rama1.jpg)
ಕನ್ನಡ ಕಿರುತೆರೆಯ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿಯ ಸ್ಲಾಟ್. ಈ ಧಾರಾವಾಹಿ ಸ್ವಲ್ಪ ಸ್ಪೆಷಲ್ ಅಂದ್ರೆ ತಪ್ಪಾಗೋಲ್ಲ. ಏಕೆಂದರೆ ಕಿರುತೆರೆಗೆ ನಿಧಾನವಾಗಿ ಒಂದೊಂದೆ ಹೆಜ್ಜೆ ಇಟ್ಟುಕೊಂಡು ಧಾರಾವಾಹಿ ತೆರೆ ಮೇಲೆ ಬಂದಿತ್ತು. ಇನ್ನೂ, ಎರಡು ವರ್ಷವನ್ನೂ ಪೂರೈಸದೇ ವೀಕ್ಷಕರಿಗೆ ವಿದಾಯ ಹೇಳಿದೆ.
ಇದನ್ನೂ ಓದಿ:ಕಮಲ್ ಹಾಸನ್ಗೆ ಟಾಂಗ್ ಕೊಟ್ಟ ರಚಿತಾ ರಾಮ್.. ಹಿರಿಯ ನಟನ ಹೆಸರು ಹೇಳದೇ ಡಿಚ್ಚಿ!
ಹೌದು, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ, ಗಗನ್ ಚಿನ್ನಪ್ಪ ಮುಖ್ಯಭೂಮಿಕೆಯಲ್ಲಿದ್ದ ಸೀತಾ ರಾಮ ಧಾರಾವಾಹಿ ಮುಕ್ತಾಯ ಕಂಡಿದೆ. ತೆರೆಗೆ ಬಂದ ಕೆಲವೇ ದಿನಗಳಲ್ಲಿ ಈ ಸೀರಿಯಲ್ ಭಾರಿ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.
ಆದ್ರೆ ಇದೀಗ ಧಾರಾವಾಹಿ ಅಂತ್ಯವಾಗುವ ಸಮಯ ಬಂದಿದೆ. ಈಗಾಗಲೇ ಸೀತಾ ರಾಮ ಸೀರಿಯಲ್ನ ಕೊನೇ ದಿನದ ಶೂಟಿಂಗ್ನಲ್ಲಿ ಕೂಡ ನಡೆದಿದ್ದು, ಈ ವೇಳೆ ಇಡೀ ತಂಡ ಭಾಗಿಯಾಗಿತ್ತು. ಇದೇ ವೇಳೆ ಸೀತಾರಾಮ ಸೀರಿಯಲ್ ಕೊನೆ ಶಾರ್ಟ್ನಲ್ಲಿ ಕಟ್ ಹೇಳುತ್ತಿದ್ದಂತೆ ನಟ ಗಗನ್ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ.
ಏಕೆಂದರೆ ಈ ಸೀರಿಯಲ್ ಇಡೀ ಕಲಾವಿದರಿಗೆ ಹೆಸರನ್ನು ತಂದುಕೊಟ್ಟಿತ್ತು. ಗಗನ್ ಮತ್ತು ಸಿಹಿ ಆಗಿರೋ ರೀತು ಸಿಂಗ್, ವೈಷ್ಣವಿ ಗೌಡ, ಅಶೋಕ್ ಹಾಗೂ ಮೇಘನಾ ಎಷ್ಟು ಮಜಾ ಮಾಡ್ತಾ ಇದ್ರೂ ಅಂತ ವೀಕ್ಷಕರು, ಅಭಿಮಾನಿಗಳು ಈಗಾಗಲೇ ನೋಡಿದ್ದಾರೆ.
View this post on Instagram
ಅದರಲ್ಲೂ ಪುಟಾಣಿ ರೀತುಗೆ ದೊಡ್ಡ ಮಟ್ಟದ ಸ್ಟಾರ್ ಪಟ್ಟ ಕೊಟ್ಟಿದ್ದೇ ಈ ಸೀತಾರಾಮ ಸೀರಿಯಲ್ ಹೀಗಾಗಿ ಕೊನೆಯ ದಿನದ ಶೂಟಿಂಗ್ನಲ್ಲಿ ಇಡೀ ಸೀರಿಯಲ್ ತಂಡ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ್ದಾರೆ. ಇದೇ ವಿಡಿಯೋವನ್ನು ಜೀ ಕನ್ನಡ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದೆ. ಜೊತೆಗೆ ನವಿರಾದ ಕಥೆಗೆ ಸಿಹಿಯಾದ ವಿದಾಯ.. ಮತ್ತೆ ಭೇಟಿಯಾಗೋಣ ಹೊಸ ರೂಪದಲ್ಲಿ ಅಂತ ಬರೆದುಕೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ