ಬಡ ಜನರ ಸೇವೆಗೆ ರಾಜಕೀಯಕ್ಕೆ ಧುಮುಕಿದ ಶಿವರಾಮ್
ಲೋಕ ಚುನಾವಣೆ ಎದುರಿಸಿದ್ದ ಮಾಜಿ ಐಎಎಸ್ ಅಧಿಕಾರಿ
ಐಎಎಸ್, ಸಿನಿಮಾ, ರಾಜಕೀಯ.. ಶಿವರಾಮ್ ದಾರಿಯೇ ವಿಭಿನ್ನ
ಐಎಎಸ್ ಎಂಬ ಪ್ರತಿಷ್ಠಿತ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಸಿನಿಮಾದಲ್ಲೂ ಶಿವರಾಮ್ ಕಾಣಿಸಿಕೊಂಡರು. 9ಕ್ಕೂ ಹೆಚ್ಚು ಸಿನಿಮಾ ಮಾಡಿ ನಾಯಕ ಎಂದೆನಿಸಿಕೊಂಡರು. ಆ ಬಳಿಕ ಬಡ ಜನರ ಸೇವೆಗೆ ಇಳಿಯಬೇಕು ಎಂದೆನಿಸಿಕೊಂಡ ಶಿವರಾಮ್ ರಾಜಕೀಯದತ್ತ ಧುಮುಕಿದರು.
ಶಿವರಾಮ್ ಕಾಂಗ್ರೆಸ್, ಜೆಡಿಎಸ್ ಪಕ್ಷದ ಬಳಿಕ ಬಿಜೆಪಿಗೆ ಪಾದಾರ್ಪಣೆ ಮಾಡಿದರು. ಜನಸೇವೆ ಜನಾರ್ಧನ ಸೇವೆ ಎಂದು ತಿಳಿದ ಅವರು ತಮ್ಮೂರಿನ ಅಭಿವೃದ್ಧಿಗೆ ಶ್ರಮವಹಿಸಿದರು. ಆದರೆ ಇವರ ರಾಜಕೀಯ ಜೀವನ ಹೇಗಿತ್ತು? ಲೋಕಸಭಾ ಚುನಾವಣೆ ಎದುರಿಸಿದ ಬಗೆ ಇವೆಲ್ಲದ ಬಗ್ಗೆವ ಮಾಹಿತಿ ಇಲ್ಲಿದೆ.. ಓದಿ.
ರಾಜಕೀಯದಲ್ಲೂ ಶಿವರಾಮ್ ಸಂಚಲನ
ಶಿವರಾಮ್ ಸರ್ಕಾರಿ ಕೆಲಸ, ಸಿನಿಮಾದ ಬಳಿಕ ರಾಜಕೀಯದತ್ತ ಒಲವು ಬೆಳೆಸಿ ಪ್ರಯಾಣ ಮಾಡಿದ್ದರು. 2013ರಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನಿವೃತ್ತರಾದ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. 2014ರಲ್ಲಿ ಜನತಾ ದಳ ಸದಸ್ಯರಾಗಿ ಕಾಣಿಸಿಕೊಂಡರು. ಆ ಬಳಿಕ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದರು. ಬಿಜಾಪುರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಆ ಚುನಾವಣೆಯಲ್ಲಿ ರಮೇಶ್ ಜಿಗಜಿಣಗಿ ವಿರುದ್ಧ ಸೋತರು.
2014ರಲ್ಲಿ ಡಾ. ಜಿ ಪರಮೇಶ್ವರ್ ಅವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮತ್ತು ದಲಿತ ನಾಯಕ ಉಪಮುಖ್ಯಮಂತ್ರಿಯಾಗಬೇಕೆಂಬ ಬೆಂಬಲದೊಂದಿಗೆ ಅವರು ಮತ್ತೆ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ಪಕ್ಷ ಅಂದು ಈ ವಿಚಾರದಲ್ಲಿ ವಿಫಲವಾದ ಕಾರಣ ಶಿವರಾಮ್ ಅವರು ಬಿಜೆಪಿಗೆ ಪಾದಾರ್ಪಣೆ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಡ ಜನರ ಸೇವೆಗೆ ರಾಜಕೀಯಕ್ಕೆ ಧುಮುಕಿದ ಶಿವರಾಮ್
ಲೋಕ ಚುನಾವಣೆ ಎದುರಿಸಿದ್ದ ಮಾಜಿ ಐಎಎಸ್ ಅಧಿಕಾರಿ
ಐಎಎಸ್, ಸಿನಿಮಾ, ರಾಜಕೀಯ.. ಶಿವರಾಮ್ ದಾರಿಯೇ ವಿಭಿನ್ನ
ಐಎಎಸ್ ಎಂಬ ಪ್ರತಿಷ್ಠಿತ ಹುದ್ದೆಯಿಂದ ನಿವೃತ್ತಿಯಾದ ಬಳಿಕ ಸಿನಿಮಾದಲ್ಲೂ ಶಿವರಾಮ್ ಕಾಣಿಸಿಕೊಂಡರು. 9ಕ್ಕೂ ಹೆಚ್ಚು ಸಿನಿಮಾ ಮಾಡಿ ನಾಯಕ ಎಂದೆನಿಸಿಕೊಂಡರು. ಆ ಬಳಿಕ ಬಡ ಜನರ ಸೇವೆಗೆ ಇಳಿಯಬೇಕು ಎಂದೆನಿಸಿಕೊಂಡ ಶಿವರಾಮ್ ರಾಜಕೀಯದತ್ತ ಧುಮುಕಿದರು.
ಶಿವರಾಮ್ ಕಾಂಗ್ರೆಸ್, ಜೆಡಿಎಸ್ ಪಕ್ಷದ ಬಳಿಕ ಬಿಜೆಪಿಗೆ ಪಾದಾರ್ಪಣೆ ಮಾಡಿದರು. ಜನಸೇವೆ ಜನಾರ್ಧನ ಸೇವೆ ಎಂದು ತಿಳಿದ ಅವರು ತಮ್ಮೂರಿನ ಅಭಿವೃದ್ಧಿಗೆ ಶ್ರಮವಹಿಸಿದರು. ಆದರೆ ಇವರ ರಾಜಕೀಯ ಜೀವನ ಹೇಗಿತ್ತು? ಲೋಕಸಭಾ ಚುನಾವಣೆ ಎದುರಿಸಿದ ಬಗೆ ಇವೆಲ್ಲದ ಬಗ್ಗೆವ ಮಾಹಿತಿ ಇಲ್ಲಿದೆ.. ಓದಿ.
ರಾಜಕೀಯದಲ್ಲೂ ಶಿವರಾಮ್ ಸಂಚಲನ
ಶಿವರಾಮ್ ಸರ್ಕಾರಿ ಕೆಲಸ, ಸಿನಿಮಾದ ಬಳಿಕ ರಾಜಕೀಯದತ್ತ ಒಲವು ಬೆಳೆಸಿ ಪ್ರಯಾಣ ಮಾಡಿದ್ದರು. 2013ರಲ್ಲಿ ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ನಿವೃತ್ತರಾದ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸೇರಿದರು. 2014ರಲ್ಲಿ ಜನತಾ ದಳ ಸದಸ್ಯರಾಗಿ ಕಾಣಿಸಿಕೊಂಡರು. ಆ ಬಳಿಕ ಲೋಕಸಭಾ ಚುನಾವಣೆಯಲ್ಲೂ ಸ್ಪರ್ಧಿಸಿದರು. ಬಿಜಾಪುರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದರು. ಆದರೆ ಆ ಚುನಾವಣೆಯಲ್ಲಿ ರಮೇಶ್ ಜಿಗಜಿಣಗಿ ವಿರುದ್ಧ ಸೋತರು.
2014ರಲ್ಲಿ ಡಾ. ಜಿ ಪರಮೇಶ್ವರ್ ಅವರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಮತ್ತು ದಲಿತ ನಾಯಕ ಉಪಮುಖ್ಯಮಂತ್ರಿಯಾಗಬೇಕೆಂಬ ಬೆಂಬಲದೊಂದಿಗೆ ಅವರು ಮತ್ತೆ ಕಾಂಗ್ರೆಸ್ ಸೇರಿದರು. ಆದರೆ ಕಾಂಗ್ರೆಸ್ ಪಕ್ಷ ಅಂದು ಈ ವಿಚಾರದಲ್ಲಿ ವಿಫಲವಾದ ಕಾರಣ ಶಿವರಾಮ್ ಅವರು ಬಿಜೆಪಿಗೆ ಪಾದಾರ್ಪಣೆ ಮಾಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ