ಕಿಚ್ಚ ಸುದೀಪ್ ದಿಢೀರ್ ಸುದ್ದಿಗೋಷ್ಠಿ; ಸಿನಿಮಾ? ಬಿಗ್​ಬಾಸ್​ ಬಗ್ಗೆ ಅಪ್ಡೇಟ್ ಕೊಡ್ತಾರಾ ಬಾದ್​ ಷಾ!

author-image
Veena Gangani
Updated On
VIDEO: ಸುದೀಪ್‌ ನನಗೂ ದುಡ್ಡು ಕೊಡ್ಬೇಕು.. ಕಿಚ್ಚನ ವಿರುದ್ಧ ಸಿಡಿದೆದ್ದ ಮತ್ತೊಬ್ಬ ಸ್ಯಾಂಡಲ್‌ವುಡ್‌ ನಿರ್ಮಾಪಕ
Advertisment
  • ಕಿಚ್ಚ ಸುದೀಪ್​ ಅವರು ಸುದ್ದಿಗೋಷ್ಠಿ ಕರೆದದ್ದು ಏಕೆ ಗೊತ್ತಾ?
  • ಕೆಲವೇ ನಿಮಿಷಗಳಲ್ಲಿ ಪ್ರತ್ಯಕ್ಷವಾಗಲಿದ್ದಾರೆ ನಟ ಕಿಚ್ಚ ಸುದೀಪ್
  • ಅಭಿಮಾನಿಗಳಿಗೆ ಏನಾದರೂ ಸಿಹಿ ಸುದ್ದಿ ಕೊಡ್ತಾರಾ ನಟ ಕಿಚ್ಚ!

ಸ್ಯಾಂಡಲ್​ವುಡ್​ ನಟ ಕಿಚ್ಚ ಸುದೀಪ್ ಅವರು ದಿಢೀರ್ ಅಂತ ಆಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಕೆಲವೇ ಹೊತ್ತಲ್ಲಿ ಮಾಧ್ಯಮಗಳ ಮುಂದೆ ಕಿಚ್ಚ ಸುದೀಪ್​ ಪ್ರತ್ಯಕ್ಷರಾಗಲಿದ್ದಾರೆ. 10.30ಕ್ಕೆ ಜಯನಗರದ ವಜ್ರಾ ಸಾಗರದ ಕನ್ವೆನ್ಷನ್ ಹಾಲ್​ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಇದನ್ನೂ ಓದಿ: ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಮಾಚಾರಿ ಚಾರು; ಮೌನ ಗುಡ್ಡಮನೆ ಈಗ ಸ್ಟಾರ್​ ನಟಿ!

publive-image

ಅತ್ತ ನಟ ದರ್ಶನ್ ಕೊಲೆ ಕೇಸ್​ನಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್​ ಆಗಿದ್ದರೆ, ಇತ್ತ ಕಿಚ್ಚ ಸುದೀಪ್ ದಿಢೀರ್ ಅಂತ​ ಸುದ್ದಿಗೋಷ್ಠಿ ಕರೆದಿದ್ದಾರೆ. ಕಿಚ್ಚ ಸುದೀಪ್​ ಅವರು ಸುದ್ದಿಗೋಷ್ಠಿ ಕರೆದದ್ದು ಏಕೆ ಅಂತ ಕೂತುಹಲ ಮೂಡಿಸಿದೆ.

publive-image

ಮ್ಯಾಕ್ಸ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಡ್ತಾರಾ? ಬಿಲ್ಲರಂಗ ಭಾಷಾ ಬಗ್ಗೆ ಅಪ್ ಡೇಟ್ ಕೊಡ್ತಾರಾ? ಬಹುನಿರೀಕ್ಷಿತ ಶೋ ಬಿಗ್​ಬಾಸ್ ಸೀಸನ್​ 11ರ ಬಗ್ಗೆ ಮಾಹಿತಿ ಕೊಡ್ತಾರಾ?, ಚಿತ್ರರಂಗದಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳ ಬಗ್ಗೆ ಮಾತನಾಡ್ತಾರಾ?, ಅಥವಾ ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಏನಾದರೂ ಸಿಹಿ ಸುದ್ದಿ ಕೊಡ್ತಾರಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment