/newsfirstlive-kannada/media/post_attachments/wp-content/uploads/2023/07/kiccha-2.jpg)
ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ಅವರು ದಿಢೀರ್ ಅಂತ ಆಗಿ ಸುದ್ದಿಗೋಷ್ಠಿ ಕರೆದಿದ್ದಾರೆ. ಕೆಲವೇ ಹೊತ್ತಲ್ಲಿ ಮಾಧ್ಯಮಗಳ ಮುಂದೆ ಕಿಚ್ಚ ಸುದೀಪ್ ಪ್ರತ್ಯಕ್ಷರಾಗಲಿದ್ದಾರೆ. 10.30ಕ್ಕೆ ಜಯನಗರದ ವಜ್ರಾ ಸಾಗರದ ಕನ್ವೆನ್ಷನ್ ಹಾಲ್ನಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ರಾಮಾಚಾರಿ ಚಾರು; ಮೌನ ಗುಡ್ಡಮನೆ ಈಗ ಸ್ಟಾರ್ ನಟಿ!
ಅತ್ತ ನಟ ದರ್ಶನ್ ಕೊಲೆ ಕೇಸ್ನಲ್ಲಿ ಬಳ್ಳಾರಿ ಜೈಲಿಗೆ ಶಿಫ್ಟ್ ಆಗಿದ್ದರೆ, ಇತ್ತ ಕಿಚ್ಚ ಸುದೀಪ್ ದಿಢೀರ್ ಅಂತ ಸುದ್ದಿಗೋಷ್ಠಿ ಕರೆದಿದ್ದಾರೆ. ಕಿಚ್ಚ ಸುದೀಪ್ ಅವರು ಸುದ್ದಿಗೋಷ್ಠಿ ಕರೆದದ್ದು ಏಕೆ ಅಂತ ಕೂತುಹಲ ಮೂಡಿಸಿದೆ.
ಮ್ಯಾಕ್ಸ್ ಸಿನಿಮಾ ಬಗ್ಗೆ ಅಪ್ ಡೇಟ್ ಕೊಡ್ತಾರಾ? ಬಿಲ್ಲರಂಗ ಭಾಷಾ ಬಗ್ಗೆ ಅಪ್ ಡೇಟ್ ಕೊಡ್ತಾರಾ? ಬಹುನಿರೀಕ್ಷಿತ ಶೋ ಬಿಗ್ಬಾಸ್ ಸೀಸನ್ 11ರ ಬಗ್ಗೆ ಮಾಹಿತಿ ಕೊಡ್ತಾರಾ?, ಚಿತ್ರರಂಗದಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳ ಬಗ್ಗೆ ಮಾತನಾಡ್ತಾರಾ?, ಅಥವಾ ಹುಟ್ಟುಹಬ್ಬದ ಬಗ್ಗೆ ಅಭಿಮಾನಿಗಳಿಗೆ ಏನಾದರೂ ಸಿಹಿ ಸುದ್ದಿ ಕೊಡ್ತಾರಾ ಅಂತ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ