/newsfirstlive-kannada/media/post_attachments/wp-content/uploads/2025/02/manoj.png)
ಕಲರ್ಸ್ ಕನ್ನಡದಲ್ಲಿ ಹೊಸ ಹೊಸ ಧಾರಾವಾಹಿಗಳು ಅನೌನ್ಸ್ ಆಗ್ತಿವೆ. ವಧು, ಯಜಮಾನ ಜೊತೆ ಜೊತೆಗೆ ಭಾರ್ಗವಿ ಎಲ್.ಎಲ್.ಬಿ ಪ್ರೊಮೋ ರಿಲೀಸ್ ಮಾಡಿತ್ತು ತಂಡ. ಸದ್ಯ ಮತ್ತೊಂದು ಹೊಸ ಧಾರಾವಾಹಿ ಅನೌನ್ಸ್ ಮಾಡಿದೆ.
ಇದನ್ನೂ ಓದಿ: ಡಾಲಿ ಮದ್ವೆಯಲ್ಲಿ 100 ವರ್ಷ ಇತಿಹಾಸ ಇರೋ ಸೀರೆ ಧರಿಸಿದ್ದ ಮಾಳವಿಕ ಅವಿನಾಶ್; ಇದರ ವಿಶೇಷತೆ ಏನು?
ಈಗಾಗಲೇ ಭಾರ್ಗವಿ ಎಲ್ಎಲ್ಬಿ ಧಾರಾವಾಹಿ ಬಗ್ಗೆ ಸಾಕಷ್ಟು ಮಾಹಿತಿ ನೀಡ್ತಾನೆ ಬಂದಿದ್ದೀವಿ. ಸ್ವಪ್ನ ಕೃಷ್ಣ ಅವರ ಆರ್.ಆರ್. ಆರ್ ಪ್ರೋಡಕ್ಷನ್ ಹೌಸ್ ಅಡಿ ಈ ಸೀರಿಯಲ್ಗೆ ಬಂಡವಾಳ ಹಾಕಿದ್ದಾರೆ. ಹಾಗೇ ಅವ್ರೇ ನಿರ್ದೇಶನ ಮಾಡ್ತಿದ್ದಾರೆ. ಈ ಸೀರಿಯಲ್ನಲ್ಲಿ ನಾಯಕಿಯಾಗಿ ರಾಧಾ ಭಾಗವತಿ ಅಭಿನಯಿಸ್ತಿದ್ದಾರೆ. ಸದ್ಯ ನಾಯಕ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಪ್ರೊಮೋ ಕೂಡ ರಿಲೀಸ್ ಆಗಿದೆ.
ಹೌದು, ಹೊಚ್ಚ ಹೊಸ ಭಾರ್ಗವಿ ಎಲ್ಎಲ್ಬಿ ಸೀರಿಯಲ್ಗೆ ನಾಯಕನಾಗಿ ಮನೋಜ್ ಕುಮಾರ್ ಆಯ್ಕೆಯಾಗಿದ್ದಾರೆ. ಮಂಗಳೂರು ಮೂಲದ ಮನೋಜ್ ಅವ್ರು ತೆಲುಗು ಇಂಡಸ್ಟ್ರಿಯಲ್ಲಿ ಜನಪ್ರಿಯತೆ ಪಡೆದಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದಾರೆ ಮನೋಜ್.
ಇನ್ನೂ, ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಆ್ಯಕ್ಟಿವ್ ಆಗಿರೋ ಮನೋಜ್ ಮಲ್ಲಮ್ಮ ಟಾಕ್ಸ್ ಎಂಬ ಪೇಜ್ ಮೂಲಕ ಜನರ ಪ್ರೀತಿಗಳಿಸಿದ್ದಾರೆ. ಅಭಿಮಾನಿಗಳು ಕನ್ನಡಕ್ಕೆ ಬನ್ನಿ ಅಂತ ಇವರನ್ನು ಕರಿತಾಯಿದ್ರೂ, ಕೊನೆಗೆ ಆ ಕಾಲ ಕೂಡಿಬಂದಿದೆ. ಸಖತ್ ಆಗಿರೋ ಪಾತ್ರದ ಮೂಲಕ ಕಾಲಿಡ್ತಿದ್ದಾರೆ ಮನೋಜ್ ಕುಮಾರ್.
ಈ ಧಾರಾವಾಹಿಗೆ ಬರೋದಾದ್ರೇ, ಇದು ಬೆಂಗಾಲಿ ಮೂಲದ ಕಥೆ. ಬೆಂಗಾಲಿ ಭಾಷೆಲಿ ಸೂಪರ್ ಹಿಟ್ ಆಗಿರೋ ಧಾರಾವಾಹಿನ್ನ ಕನ್ನಡಕ್ಕೆ ರಿಮೇಕ್ ಮಾಡಲಾಗ್ತಿದೆ. ನಾಯಕಿ ಭಾರ್ಗವಿ ಅಪ್ಪನಿಗೆ ಆದ ಅನ್ಯಾಯಕ್ಕೆ ಧ್ವನಿಯತ್ತುವ ಯುವ ವಕೀಲೆ. ಅಪ್ಪನಿಗೆ ಅವಮಾನ ಮಾಡಿದ ಫೇಮಸ್ ಲಾಯರ್ ಮಗ ನಾಯಕ. ಭಾರ್ಗವಿ ಮೇಲೆ ನಾಯಕನಿಗೆ ಲವ್ ಆ್ಯಟ್ ಫಸ್ಟ್ ಸೈಟ್ ಆಗುತ್ತೆ. ಆದ್ರೇ ತನ್ನ ಅಪ್ಪ ಹಾಗೂ ಭಾರ್ಗವಿಗೆ ಜಿದ್ದಾಜಿದ್ದಿ ಬಿದ್ದಿರೋದು ಗೊತ್ತಿರಲ್ಲ. ನಾಯಕ-ನಾಯಕಿ ಇಬ್ಬರೂ ಪ್ರೀತಿಲಿ ಮುಳಗಿದ್ದಾಗ ಸತ್ಯ ಹೊರ ಬರುತ್ತೆ. ಮಂದೆ ಇವರ ಪ್ರೀತಿ ಹೇಗೆ ಸಾಗುತ್ತೆ? ಭಾರ್ಗವಿ ಅಪ್ಪನ ಮರ್ಯಾದೆಗೆ ಪ್ರೀತಿನ ತ್ಯಾಗ ಮಾಡ್ತಾಳಾ? ಅಷ್ಟಕ್ಕೂ ಆ ಲಾಯರ್ಗೂ ಭಾರ್ಗವಿ ಅಪ್ಪನಿಗೂ ಯಾಕಷ್ಟು ದ್ವೇಷ? ಈ ಎಲ್ಲಾ ಕುತೂಹಲದ ಅಂಶಗಳಿಗೆ ಭಾರ್ಗವಿ ಎಲ್ ಎಲ್ ಬಿ ನೋಡಬೇಕಿದೆ.
ಇದನ್ನೂ ಓದಿ: ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ಜೊತೆ ಜೊತೆಯಲಿ ಸೀರಿಯಲ್ ಮೇಘಾ ಶೆಟ್ಟಿ; ಏನದು?
ಮತ್ತೊಂದು ಹೊಸ ಮತ್ತೊಂದು ಹೊಸ ಧಾರಾವಾಹಿ ಅನೌನ್ಸ್ ಆಗಿದೆ. ಅದುವೇ ಮುದ್ದು ಸೊಸೆ ಎಂಬ ಟೈಟಲ್ನೊಂದಿಗೆ ಬರ್ತಿದೆ ಸ್ಟೋರಿ. ಟ್ಯಾಗ್ ಲೈನ್ನಲ್ಲಿ ಸ್ಕೂಲ್ ಬೆಂಚ್ನಿಂದ ಹಸೆಮಣೆಗೆ ಬರ್ತಿದ್ದಾಳೆ ಮುದ್ದು ಸೊಸೆ ಎಂದು ಬರೆಯಲಾಗಿದೆ. ಇದನ್ನ ನೋಡಿದ್ರೇ ಬಾಲ್ಯ ವಿವಾಹದ ಕುರಿತು ಸ್ಟೋರಿ ಇರಲಿದೆ ಎಂಬ ಹಿಂಟ್ ಅಂತೂ ಸಿಕ್ಕಿದೆ. ಈ ಸೀರಿಯಲ್ ಮೂಲಕ ಅಂತರಪಟ ಖ್ಯಾತಿಯ ನಟಿ ಪ್ರತಿಮಾ ನಾಯಕಿ ಆಗಿ ಕನ್ನಡದಲ್ಲಿ ಲಾಂಚ್ ಆಗ್ತಿದ್ದಾರೆ. ಈಗಾಗಲೇ ತೆಲುಗಿನ ಜೇಮಿನಿ ವಾಹಿನಿಯಲ್ಲಿ ಪೂರ್ಣ ಪ್ರಮಾಣದ ನಾಯಕಿ ಆಗಿ ಜನಪ್ರಿಯತೆ ಗಳಿಸಿರೋ ಪ್ರತಿಮಾ ಕನ್ನಡದಲ್ಲೂ ನಾಯಕಿ ಆಗಿ ಕಾಣಿಸಿಕೊಳ್ಳಲಿದ್ದಾರೆ. ಒಟ್ಟಿನಲ್ಲಿ ಎರಡೂ ಧಾರಾವಾಹಿಗಳು ನಿರೀಕ್ಷೆ ಹೆಚ್ಚಿಸಿವೆ. ಈ ಧಾರಾವಾಹಿಗಳಿಗೆ ಯಾವ ಎರಡು ಸೀರಿಯಲ್ ಜಾಗಬಿಟ್ಟುಕೊಟ್ಟು ಮುಕ್ತಾಯವಾಗಲಿವೆ ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ