newsfirstkannada.com

‘ಕಳ್‌ ನನ್ಮಗ ಯಾರು ಎಂದು ತೋರಿಸಿ’- ಮಂಡ್ಯದಲ್ಲಿ ಹೆಚ್‌ಡಿಕೆ ವಿರುದ್ಧ ನಟ ಪ್ರಕಾಶ್‌ ರಾಜ್ ಕಿಡಿ

Share :

Published April 15, 2024 at 2:38pm

    ಹೆಚ್.ಡಿ ಕುಮಾರಸ್ವಾಮಿಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ?

    ‘ಮಾತು ಮನೆ ಕೆಡಿಸಿತ್ತು ಅನ್ನೋ ಹಾಗೆ ನಿಮ್ಮನ್ನು ಸೋಲಿಸಿ ಕಳುಹಿಸಿದ್ರು’

    ‘ಮಗನನ್ನು ಸೋಲಿಸಿದವರ ಮನೆ ಮುಂದೆ ಹೋಗಿ ನಿಂತುಕೊಂಡಿದ್ದಾರೆ’

ಮಂಡ್ಯ: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ನೀಡಿದ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಬ್ರಹ್ಮಾಸ್ತ್ರವಾಗಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಿಂದ ತಾಯಂದಿರು ದಾರಿ ತಪ್ಪಿದ್ದಾರೆ ಎಂಬ ಹೇಳಿಕೆಯನ್ನ ರಾಜ್ಯ ಮಹಿಳಾ ಆಯೋಗ ಕೂಡ ಖಂಡಿಸಿದೆ. ಈ ವಿವಾದ ಭುಗಿಲೆದ್ದಿರುವಾಗಲೇ ಹೆಚ್‌ಡಿಕೆ ವಿರುದ್ಧ ನಟ ಕಂ ರಾಜಕಾರಣಿ ಪ್ರಕಾಶ್ ರಾಜ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್ ಅವರು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಕುಮಾರಸ್ವಾಮಿಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ಮಂಡ್ಯದ ಜನತೆ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರವಾದ HDK ವಿವಾದಾತ್ಮಕ ಹೇಳಿಕೆ; ಡಿ.ಕೆ ಶಿವಕುಮಾರ್‌ ಕೆಂಡಾಮಂಡಲ!

ಪ್ರಕಾಶ್ ರಾಜ್‌ ಹೇಳಿದ್ದೇನು?
ಪಾಪ ಹೆಣ್ಣು ಮಗಳು ಒಬ್ಬರು ಚುನಾವಣೆಯಲ್ಲಿ ನಿಂತು ಕೊಂಡ್ರೆ ನೀವು ಏನು ಹೇಳಿದ್ರಿ. ಮಾತು ಮನೆ ಕೆಡಿಸಿತ್ತು ಅನ್ನೋ ಹಾಗೆ ನಿಮ್ಮನ್ನು ಸೋಲಿಸಿ ಕಳುಹಿಸಿದ್ರೋ ಇಲ್ವೋ. ಅವ್ರು ನನ್ನ ಸ್ವಾಭಿಮಾನಕ್ಕಾಗಿ ಸೆರಗೊಡ್ಡಿ ವೋಟ್ ಕೇಳಿದ್ರೋ ಇಲ್ವೋ. ಈಗ ಮಗನನ್ನು ಸೋಲಿಸಿದವರ ಮನೆ ಮುಂದೆ ಹೋಗಿ ನಿಂತುಕೊಂಡಿದ್ದಾರೆ. ಚುನಾವಣೆಯಲ್ಲಿ ನನ್ನ ಗೆಲ್ಲಿಸಲು ನನ್ನ ಜೊತೆ ಬನ್ನಿ ಅಂತಿದ್ದಾರೆ.

ನಮ್ಮ ಸ್ವಾಭಿಮಾನ, ನಮ್ಮ ಹಕ್ಕು ಮುಖ್ಯ. ಮಂಡ್ಯದ ಜನತೆ ಇವರಿಗೆ ಸರಿಯಾದ ಪಾಠ ಕಲಿಸಬೇಕು. ದಾರಿ ತಪ್ಪಿದ ಮಗ ಯಾರು? ದಾರಿ ತಪ್ಪಿದ ಕಳ್‌ ನನ್ಮಗ ಯಾರು ಅಂತ ಏಪ್ರಿಲ್ 26 ರಂದು ನಿಮ್ಮ ವೋಟಿನ ಮೂಲಕ ಹೇಳಬೇಕು. ಇದು ನಮ್ಮ ಜವಾಬ್ದಾರಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಳ್‌ ನನ್ಮಗ ಯಾರು ಎಂದು ತೋರಿಸಿ’- ಮಂಡ್ಯದಲ್ಲಿ ಹೆಚ್‌ಡಿಕೆ ವಿರುದ್ಧ ನಟ ಪ್ರಕಾಶ್‌ ರಾಜ್ ಕಿಡಿ

https://newsfirstlive.com/wp-content/uploads/2024/04/Prakash-Rai-On-HDK.jpg

    ಹೆಚ್.ಡಿ ಕುಮಾರಸ್ವಾಮಿಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ?

    ‘ಮಾತು ಮನೆ ಕೆಡಿಸಿತ್ತು ಅನ್ನೋ ಹಾಗೆ ನಿಮ್ಮನ್ನು ಸೋಲಿಸಿ ಕಳುಹಿಸಿದ್ರು’

    ‘ಮಗನನ್ನು ಸೋಲಿಸಿದವರ ಮನೆ ಮುಂದೆ ಹೋಗಿ ನಿಂತುಕೊಂಡಿದ್ದಾರೆ’

ಮಂಡ್ಯ: ಲೋಕಸಭಾ ಚುನಾವಣೆಯ ಪ್ರಚಾರದಲ್ಲಿ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ನೀಡಿದ ವಿವಾದಾತ್ಮಕ ಹೇಳಿಕೆ ಕಾಂಗ್ರೆಸ್ ನಾಯಕರಿಗೆ ಬ್ರಹ್ಮಾಸ್ತ್ರವಾಗಿದೆ. ಕಾಂಗ್ರೆಸ್‌ ಸರ್ಕಾರದ ಗ್ಯಾರಂಟಿಗಳಿಂದ ತಾಯಂದಿರು ದಾರಿ ತಪ್ಪಿದ್ದಾರೆ ಎಂಬ ಹೇಳಿಕೆಯನ್ನ ರಾಜ್ಯ ಮಹಿಳಾ ಆಯೋಗ ಕೂಡ ಖಂಡಿಸಿದೆ. ಈ ವಿವಾದ ಭುಗಿಲೆದ್ದಿರುವಾಗಲೇ ಹೆಚ್‌ಡಿಕೆ ವಿರುದ್ಧ ನಟ ಕಂ ರಾಜಕಾರಣಿ ಪ್ರಕಾಶ್ ರಾಜ್ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಂಡ್ಯದಲ್ಲಿ ಮಾತನಾಡಿರುವ ಪ್ರಕಾಶ್ ರಾಜ್ ಅವರು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರವಾಗಿ ಮಾತನಾಡಿದ್ದಾರೆ. ಕುಮಾರಸ್ವಾಮಿಗೆ ನಾಚಿಕೆ, ಮಾನ ಮರ್ಯಾದೆ ಇಲ್ವಾ? ಮಂಡ್ಯದ ಜನತೆ ಇವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರವಾದ HDK ವಿವಾದಾತ್ಮಕ ಹೇಳಿಕೆ; ಡಿ.ಕೆ ಶಿವಕುಮಾರ್‌ ಕೆಂಡಾಮಂಡಲ!

ಪ್ರಕಾಶ್ ರಾಜ್‌ ಹೇಳಿದ್ದೇನು?
ಪಾಪ ಹೆಣ್ಣು ಮಗಳು ಒಬ್ಬರು ಚುನಾವಣೆಯಲ್ಲಿ ನಿಂತು ಕೊಂಡ್ರೆ ನೀವು ಏನು ಹೇಳಿದ್ರಿ. ಮಾತು ಮನೆ ಕೆಡಿಸಿತ್ತು ಅನ್ನೋ ಹಾಗೆ ನಿಮ್ಮನ್ನು ಸೋಲಿಸಿ ಕಳುಹಿಸಿದ್ರೋ ಇಲ್ವೋ. ಅವ್ರು ನನ್ನ ಸ್ವಾಭಿಮಾನಕ್ಕಾಗಿ ಸೆರಗೊಡ್ಡಿ ವೋಟ್ ಕೇಳಿದ್ರೋ ಇಲ್ವೋ. ಈಗ ಮಗನನ್ನು ಸೋಲಿಸಿದವರ ಮನೆ ಮುಂದೆ ಹೋಗಿ ನಿಂತುಕೊಂಡಿದ್ದಾರೆ. ಚುನಾವಣೆಯಲ್ಲಿ ನನ್ನ ಗೆಲ್ಲಿಸಲು ನನ್ನ ಜೊತೆ ಬನ್ನಿ ಅಂತಿದ್ದಾರೆ.

ನಮ್ಮ ಸ್ವಾಭಿಮಾನ, ನಮ್ಮ ಹಕ್ಕು ಮುಖ್ಯ. ಮಂಡ್ಯದ ಜನತೆ ಇವರಿಗೆ ಸರಿಯಾದ ಪಾಠ ಕಲಿಸಬೇಕು. ದಾರಿ ತಪ್ಪಿದ ಮಗ ಯಾರು? ದಾರಿ ತಪ್ಪಿದ ಕಳ್‌ ನನ್ಮಗ ಯಾರು ಅಂತ ಏಪ್ರಿಲ್ 26 ರಂದು ನಿಮ್ಮ ವೋಟಿನ ಮೂಲಕ ಹೇಳಬೇಕು. ಇದು ನಮ್ಮ ಜವಾಬ್ದಾರಿ ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More