Advertisment

ಕಾಂತಾರ ಚಾಪ್ಟರ್ 1 ರಿಲೀಸ್​ಗೂ ಮುನ್ನ ದೇವರ ಮೊರೆ; ಕೊರಗಜ್ಜನಿಗೆ ರಿಷಬ್ ಶೆಟ್ಟಿ ಏನೆಲ್ಲ ಕೊಟ್ರು?

author-image
Veena Gangani
Updated On
ಕಾಂತಾರ ಚಾಪ್ಟರ್ 1 ರಿಲೀಸ್​ಗೂ ಮುನ್ನ ದೇವರ ಮೊರೆ; ಕೊರಗಜ್ಜನಿಗೆ ರಿಷಬ್ ಶೆಟ್ಟಿ ಏನೆಲ್ಲ ಕೊಟ್ರು?
Advertisment
  • ಪತ್ನಿ ಪ್ರಗತಿ, ಮಗ ಹಾಗೂ ಮಗಳ ಜೊತೆಗೆ ಬಂದ ನಟ ರಿಷಬ್ ಶೆಟ್ಟಿ
  • ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ನಟ ರಿಷಬ್ ಶೆಟ್ಟಿ ಭೇಟಿ
  • ಶೂಟಿಂಗ್​ ಬ್ಯುಸಿ ನಡುವೆಯೂ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಆಗಮನ

ಮಂಗಳೂರು: ಕಾಂತಾರ ಕನ್ನಡ ಚಿತ್ರರಂಗದ ಅತ್ಯಂತ ಯಶಸ್ವಿ ಚಿತ್ರ. ಸ್ಯಾಂಡಲ್​ವುಡ್​ ನಟ ರಿಷಬ್ ಶೆಟ್ಟಿ‌ ಅವರು ನಟಿಸಿ, ನಿರ್ದೇಶನ ಮಾಡಿರುವ ಕಾಂತಾರ ಸಿನಿಮಾ ದೊಡ್ಡ ಹಿಟ್​ ನೀಡಿತ್ತು. ಈ ಸಕ್ಸಸ್​ ಬಳಿ ಕಾಂತಾರ 2 ಸಿನಿಮಾ ಮಾಡಲು ರಿಷಬ್​ ಶೆಟ್ಟಿ ಮುಂದಾಗಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.

Advertisment

ಇದನ್ನೂ ಓದಿ:SSLC ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್.. ಯಾವ್ಯಾವ ವಿಷಯ ಸೋರಿಕೆ ಆಗಿವೆ?

publive-image

ಹೀಗಾಗಿ​ ರಿಷಬ್​ ಶೆಟ್ಟಿ ಅವರು ಕಾಂತಾರ ಚಾಪ್ಟರ್ 1​ ಶೂಟಿಂಗ್​ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಇದೀಗ ಈ ಬ್ಯುಸಿ ಮಧ್ಯೆಯೂ ನಟ ರಿಷಬ್​ ಶೆಟ್ಟಿ ಅವರು ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಕಾಂತಾರ ಚಾಪ್ಟರ್ 2 ಚಿತ್ರೀಕರಣ ಆಲ್ ಮೋಸ್ಟ್ ಮುಗಿದಿರುವ ಹಿನ್ನೆಲೆಯಲ್ಲಿ ರಿಷಬ್​ ಶೆಟ್ಟಿ ಅವರು ಕುಟುಂಬ ಸಮೇತರಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ದೇವಸ್ಥಾನಕ್ಕೆ ಭೇಟಿ  ದುರ್ಗಾಪರಮೇಶ್ವರಿಯ ದರ್ಶನ ಪಡೆದು, ವಿಶೇಷ ಪೂಜೆ‌ ಸಲ್ಲಿಸಿದ್ದಾರೆ.

publive-image

ಇದೇ ವೇಳೆ ಕಾಂತಾರ ಚಾಪ್ಟರ್ 2 ಚಿತ್ರೀಕರಣ ಬಗ್ಗೆ ಮಾತಾಡಿದ್ದಾರೆ. ಚಿತ್ರೀಕರಣ ಕೊನೆಯ ಹಂತದಲ್ಲಿದೆ. ಕುಟುಂಬ‌ ಸಮೇತರಾಗಿ ಟೆಂಪಲ್‌ ರನ್ನ್ ಮಾಡುತ್ತಿದ್ದೇನೆ. ಅಕ್ಟೋಬರ್ 2ರಂದು ಚಿತ್ರ ಬಿಡುಗಡೆ ಮಾಡುವುದಾಗಿ ಚಿಂತನೆ ಮಾಡಲಾಗಿದೆ ಎಂದಿದ್ದಾರೆ. ಇನ್ನೂ, ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಚಲನ‌ ಚಿತ್ರೋತ್ಸವದಲ್ಲಿ ಡಿಕೆಶಿ ವಾರ್ನಿಂಗ್ ಕೊಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ಮಾತಾಡಿದ ಅವರು, ನಾನು ಚಿತ್ರದ ಶೂಟಿಂಗ್​ನಲ್ಲಿದ್ದೇನೆ. ಆ ಬಗ್ಗೆ ನನಗೆ ಗೊತ್ತಿಲ್ಲ ಅಂತ ಹೇಳಿದ್ದಾರೆ.

Advertisment

publive-image

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment