/newsfirstlive-kannada/media/post_attachments/wp-content/uploads/2025/01/SHIVARAJKUMAR.jpg)
ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್ ನಟ ಶಿವರಾಜ್​ ಕುಮಾರ್ ಅಮೆರಿಕಾದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಸಂಪೂರ್ಣ ಗುಣಮುಖರಾಗಿ ವಾಪಸ್​ ಬೆಂಗಳೂರಿಗೆ ಮರಳಿದ್ದಾರೆ. ಸುಮಾರು ಒಂದು ತಿಂಗಳುಗಳ ಕಾಲ ಅಮೆರಿಕಾದಲ್ಲಿದ್ದ ಶಿವರಾಜ್ ಕುಮಾರ್ ಇಂದು ಬೆಂಗಳೂರಿಗೆ ವಾಪಸ್ ಆಗಿದ್ದು ಅವರನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಕಾದಿತ್ತು.
ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಅಭಿಮಾನಿಗಳು ಹೂಮಳೆ ಸುರಿಸಿ ಸ್ವಾಗತಕೋರಿದರು. ಕೇಕ್ ಕಟ್​ ಮಾಡಿ ಸಂಭ್ರಮಿಸಿದರು. ನೆಚ್ಚಿನ ನಟನ ಸ್ವಾಗತ ಮಾಡುವ ವೇಳೆ ಅಭಿಮಾನಿಗಳ ನಡುವೆ ನೂಕುನುಗ್ಗಲು ಕೂಡ ಸಂಭವಿಸಿತು. ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯ್ತು.
ಇದನ್ನೂ ಓದಿ:ಕರ್ನಾಟಕ ವೀರನನ್ನು ತಮಿಳಿಗನನ್ನಾಗಿ ತೋರಿಸಿತಾ ಅಕ್ಷಯ್ ಕುಮಾರ್ ಚಿತ್ರ; ಕೆರಳಿ ಕೆಂಡವಾಗಿದ್ದೇಕೆ ಕೊಡವ ಸಮುದಾಯ?
ಇನ್ನು ಶಿವಣ್ಣನ ನಿವಾಸ ಶ್ರೀಮುತ್ತು ಮುಂದೆ ಹಬ್ಬದ ವಾತಾವರಣವೇ ಸೃಷ್ಟಿಯಾಗಿದೆ. ಶಿವಣ್ಣನನ್ನು ಸ್ವಾಗತಿಸಲು ಅಭಿಮಾನಿಗಳ ದಂಡೇ ಸೇರಿದೆ. ಈಗಾಗಲೇ ಏರ್​​ಪೋರ್ಟ್​​ನಿಂದ ಗೀತಾ ಶಿವರಾಜ್​ ಕುಮಾರ್ ಜೊತೆ ಕಾರ್​ನಲ್ಲಿ ಮನೆಗೆ ತೆರಳಿರುವ ಶಿವಣ್ಣ ಕೆಲವೇ ಕ್ಷಣಗಳಲ್ಲಿ ಮನೆ ಸೇರಲಿದ್ದಾರೆ
/newsfirstlive-kannada/media/post_attachments/wp-content/uploads/2025/01/SHIVARAJKUMAR-1.jpg)
ಈಗಾಗಲೇ ಅಭಿಮಾನಿಗಳು ಹೂವುಗಳ ಬುಟ್ಟಿಯನ್ನೇ ತಂದಿಟ್ಟುಕೊಂಡಿದ್ದಾರೆ. ಶಿವಣ್ಣ ಹಾಗೂ ಗೀತಕ್ಕರ ದೊಡ್ಡ ಕಟೌಟ್​ನ್ನು ಮನೆಯ ಮುಂದೆ ನಿಲ್ಲಿಸಿದ್ದಾರೆ ಶಿವರಾಜ್ ಕುಮಾರ್ ಬರುವುದನ್ನೇ ಅವರು ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us