newsfirstkannada.com

VIDEO: ಯುವ ಡಿವೋರ್ಸ್​​ ಬಗ್ಗೆ ಬೇಸರ ಹೊರಹಾಕಿದ ಶಿವಣ್ಣ.. ಈ ಬಗ್ಗೆ ಹೇಳಿದ್ದೇನು?

Share :

Published June 10, 2024 at 7:00pm

Update June 10, 2024 at 7:01pm

    ಡಿವೋರ್ಸ್​ಗೆ ಮುಂದಾದ ದೊಡ್ಮನೆ ಮಗ ಯುವ ರಾಜ್‌ಕುಮಾರ್!

    ತನ್ನ ಕರಿಯರ್​ ಉದ್ಧಕ್ಕೂ ಯುವ ಬೆನ್ನಿಗೆ ನಿಂತಿದ್ದ ಶ್ರೀದೇವಿ ಭೈರಪ್ಪ

    ಯುವ ಡಿವೋರ್ಸ್​ ಬಗ್ಗೆ ನಟ ಶಿವರಾಜ್​ ಕುಮಾರ್​​ ಹೇಳಿದ್ದೇನು?

ಬೆಂಗಳೂರು: ಬಿಗ್​ಬಾಸ್​ ಖ್ಯಾತಿಯ ಚಂದನ್​ ಶೆಟ್ಟಿ, ನಟ ನಿವೇದಿತಾ ಗೌಡ ಇಬ್ಬರು ಡಿವೋರ್ಸ್​ ಮಾಡಿಕೊಂಡ ಬೆನ್ನಲ್ಲೇ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಕಾದಿದೆ. ಡಾ. ರಾಜ್‌ಕುಮಾರ್ ಕುಟುಂಬದ ಕುಡಿ ಹಾಗೂ ರಾಘಣ್ಣ ಅವರ 2ನೇ ಪುತ್ರ ಯುವ ರಾಜ್‌ಕುಮಾರ್‌ ಡಿವೋರ್ಸ್ ಪಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಇನ್ನು, ಈ ಬಗ್ಗೆ ಶಿವರಾಜ್ ಕುಮಾರ್ ಅವರು ಯುವ ಡಿವೋರ್ಸ್​ ಬಗ್ಗೆ ಮಾತಾಡಿದ್ದಾರೆ. ಇದು ನಮ್ಮನೆ ವಿಷಯ. ನಾವು ಟಿವಿಯಲ್ಲಿ ನೋಡಿದ ಮೇಲೆಯೇ ನಮಗೂ ಗೊತ್ತಾಗಿದ್ದು. ವಿಷಯ ಗೊತ್ತಿಲ್ಲದೆ ನಾವು ಮಾತಾಡೋದು ಒಳ್ಳೆಯದಲ್ಲ ಎಂದಿದ್ದಾರೆ.

ನಮಗೂ ಈ ವಿಚಾರದ ಬಗ್ಗೆ ಬೇಸರ ಆಗಿದೆ. ಖಂಡಿತಾ ಈ ಬಗ್ಗೆ ಅವರೊಂದಿಗೆ ಮಾತಾಡುತ್ತೇನೆ. ನಮ್ಮಿಂದ ಏನು ಆಗುತ್ತೋ ಅದನ್ನು ಮಾಡುತ್ತೇನೆ. ಎಲ್ಲರಿಗೂ ಖಾಸಗಿ ಜೀವನ ಇರುತ್ತೆ. ಅದು ಅವರ ಲೈಫ್​ ಎಂದರು.

ಸ್ಯಾಂಡಲ್‌ವುಡ್ ಯುವರಾಜ ನಟ ಯುವ ರಾಜ್‌ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಶ್ರೀದೇವಿ ಅವರಿಂದ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇನ್ನೂ ಯುವ ರಾಜ್‌ಕುಮಾರ್ ಅವರಿಗೆ ವಿಚ್ಛೇದನ ಸಿಕ್ಕಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಯುವ ಡಿವೋರ್ಸ್​​ ಬಗ್ಗೆ ಬೇಸರ ಹೊರಹಾಕಿದ ಶಿವಣ್ಣ.. ಈ ಬಗ್ಗೆ ಹೇಳಿದ್ದೇನು?

https://newsfirstlive.com/wp-content/uploads/2024/06/Shivanna_Yuva.jpg

    ಡಿವೋರ್ಸ್​ಗೆ ಮುಂದಾದ ದೊಡ್ಮನೆ ಮಗ ಯುವ ರಾಜ್‌ಕುಮಾರ್!

    ತನ್ನ ಕರಿಯರ್​ ಉದ್ಧಕ್ಕೂ ಯುವ ಬೆನ್ನಿಗೆ ನಿಂತಿದ್ದ ಶ್ರೀದೇವಿ ಭೈರಪ್ಪ

    ಯುವ ಡಿವೋರ್ಸ್​ ಬಗ್ಗೆ ನಟ ಶಿವರಾಜ್​ ಕುಮಾರ್​​ ಹೇಳಿದ್ದೇನು?

ಬೆಂಗಳೂರು: ಬಿಗ್​ಬಾಸ್​ ಖ್ಯಾತಿಯ ಚಂದನ್​ ಶೆಟ್ಟಿ, ನಟ ನಿವೇದಿತಾ ಗೌಡ ಇಬ್ಬರು ಡಿವೋರ್ಸ್​ ಮಾಡಿಕೊಂಡ ಬೆನ್ನಲ್ಲೇ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಆಘಾತ ಕಾದಿದೆ. ಡಾ. ರಾಜ್‌ಕುಮಾರ್ ಕುಟುಂಬದ ಕುಡಿ ಹಾಗೂ ರಾಘಣ್ಣ ಅವರ 2ನೇ ಪುತ್ರ ಯುವ ರಾಜ್‌ಕುಮಾರ್‌ ಡಿವೋರ್ಸ್ ಪಡೆದಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ.

ಇನ್ನು, ಈ ಬಗ್ಗೆ ಶಿವರಾಜ್ ಕುಮಾರ್ ಅವರು ಯುವ ಡಿವೋರ್ಸ್​ ಬಗ್ಗೆ ಮಾತಾಡಿದ್ದಾರೆ. ಇದು ನಮ್ಮನೆ ವಿಷಯ. ನಾವು ಟಿವಿಯಲ್ಲಿ ನೋಡಿದ ಮೇಲೆಯೇ ನಮಗೂ ಗೊತ್ತಾಗಿದ್ದು. ವಿಷಯ ಗೊತ್ತಿಲ್ಲದೆ ನಾವು ಮಾತಾಡೋದು ಒಳ್ಳೆಯದಲ್ಲ ಎಂದಿದ್ದಾರೆ.

ನಮಗೂ ಈ ವಿಚಾರದ ಬಗ್ಗೆ ಬೇಸರ ಆಗಿದೆ. ಖಂಡಿತಾ ಈ ಬಗ್ಗೆ ಅವರೊಂದಿಗೆ ಮಾತಾಡುತ್ತೇನೆ. ನಮ್ಮಿಂದ ಏನು ಆಗುತ್ತೋ ಅದನ್ನು ಮಾಡುತ್ತೇನೆ. ಎಲ್ಲರಿಗೂ ಖಾಸಗಿ ಜೀವನ ಇರುತ್ತೆ. ಅದು ಅವರ ಲೈಫ್​ ಎಂದರು.

ಸ್ಯಾಂಡಲ್‌ವುಡ್ ಯುವರಾಜ ನಟ ಯುವ ರಾಜ್‌ಕುಮಾರ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಪತ್ನಿ ಶ್ರೀದೇವಿ ಅವರಿಂದ ಯುವ ರಾಜ್‌ಕುಮಾರ್ ಅವರು ವಿಚ್ಛೇದನಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಇನ್ನೂ ಯುವ ರಾಜ್‌ಕುಮಾರ್ ಅವರಿಗೆ ವಿಚ್ಛೇದನ ಸಿಕ್ಕಿಲ್ಲ ಎಂದು ವರದಿಯಾಗಿದೆ.

ಇದನ್ನೂ ಓದಿ: ಯುವ ರಾಜ್‌ಕುಮಾರ್‌ ವಿಚ್ಛೇದನಕ್ಕೆ ಅರ್ಜಿ ಹಾಕಿರೋದು ನಿಜನಾ? ಅಣಾವ್ರ ಕುಟುಂಬ ಹೇಳಿದ್ದೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More