/newsfirstlive-kannada/media/post_attachments/wp-content/uploads/2025/05/muttu-mani.jpg)
ಮಜಾ ಟಾಕೀಸ್ ಶೋನಿಂದ ತರಂಗ ವಿಶ್ವ ಅವ್ರು ಹೊರ ಬಂದಿದ್ದಾರೆ. ಮುತ್ತು ಮಣಿ ಪಾತ್ರದ ಮೂಲಕ ಮನರಂಜನೆ ನೀಡಿದ್ದ ಕಲಾವಿದ ಇನ್ನುಂದೆ ಶೋನಲ್ಲಿ ಇರಲ್ಲ.
ಇದನ್ನೂ ಓದಿ:ಚೈತ್ರಾ ಕುಂದಾಪುರ ಮತ್ತು ಆಕೆಯ ಪತಿ ಇಬ್ಬರು ಕಳ್ಳರು.. ಮದುವೆ ಬೆನ್ನಲ್ಲೇ ತಂದೆಯಿಂದ ಸ್ಫೋಟಕ ಹೇಳಿಕೆ
ತುಜಾ ಬಾರ್, ತುರಿ ಹೀಗೆ ತ ಹಚ್ಚಿ ತೊದಲು ನುಡಿಯಲ್ಲಿ ಮಾತ್ನಾಡ್ತಿದ್ದ ಪಾತ್ರ ಮುತ್ತು ಮಣಿಯದ್ದು. ಮಜಾ ಟಾಕೀಸ್ ಶೋನ ಪ್ರಾರಂಭದಿಂದಲೂ ಇದ್ದ ಕಲಾವಿದ ಇವರು. ಇವರು ವೇದಿಕೆಗೆ ಬಂದ್ರೇ ನಗು ಕಂಟ್ರೋಲ್ ಮಾಡೋದೆ ಕಷ್ಟ ಆಗ್ತಿತ್ತು. ಹಾಸ್ಯ ಭರಿತ ಮಾತುಗಳಿಂದ ಮೋಡಿ ಮಾಡುತ್ತಿದ್ದರು ತರಂಗ ವಿಶ್ವ.
ಸದ್ಯ ಮಜಾ ಟಾಕೀಸ್ ಶೋನಿಂದ ಅರ್ಧಕ್ಕೆ ಹೊರ ಬಂದಿದ್ದಾರೆ. ಈ ಬಗ್ಗೆ ಖುದ್ದು ಅವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಮಜಾ ಟಾಕೀಸ್ ಬಿಡ್ತಿದ್ದೀನಿ. ನನ್ನನ್ನ ಮುತ್ತು ಮಣಿಯಾಗಿ ಒಪ್ಪಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಥ್ಯಾಂಕ್ಯೂ. ಲೋಕೇಶ್ ಪ್ರೊಡಕ್ಷನ್ಗೆ ಥ್ಯಾಂಕ್ಯೂ ಎಂದಿದ್ದಾರೆ.
View this post on Instagram
ಅಷ್ಟಕ್ಕೂ ವಿಶ್ವ ಅವರು ಶೋ ಕ್ವೀಟ್ ಮಾಡೋಕೆ ಬಲವಾದ ಕಾರಣ ಏನು ಅನ್ನೋದನ್ನ ಸ್ಪಷ್ಟಪಡಿಸಿಲ್ಲ. ಆದ್ರೇ ದಿಢೀರ್ ಅಂತ ಇಂತಹ ನಿರ್ಧಾರಕ್ಕೆ ಬಂದಿದ್ದೇಕೆ ಎಂದು ಅಭಿಮಾನಿಗಳು ಬೇಜಾರಾಗಿದ್ದು. ಯಾಕೇ ಹೀಗ್ ಮಾಡಿದ್ರೀ? ಮುತ್ತುಮಣಿ ಇಲ್ಲದೇ ಶೋ ನೋಡೋಕಾಗಲ್ಲ. ಮತ್ತೇ ಬನ್ನಿ ಅಂತ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ