/newsfirstlive-kannada/media/post_attachments/wp-content/uploads/2025/05/muttu-mani.jpg)
ಮಜಾ ಟಾಕೀಸ್ ಶೋನಿಂದ ತರಂಗ ವಿಶ್ವ ಅವ್ರು ಹೊರ ಬಂದಿದ್ದಾರೆ. ಮುತ್ತು ಮಣಿ ಪಾತ್ರದ ಮೂಲಕ ಮನರಂಜನೆ ನೀಡಿದ್ದ ಕಲಾವಿದ ಇನ್ನುಂದೆ ಶೋನಲ್ಲಿ ಇರಲ್ಲ.
ಇದನ್ನೂ ಓದಿ:ಚೈತ್ರಾ ಕುಂದಾಪುರ ಮತ್ತು ಆಕೆಯ ಪತಿ ಇಬ್ಬರು ಕಳ್ಳರು.. ಮದುವೆ ಬೆನ್ನಲ್ಲೇ ತಂದೆಯಿಂದ ಸ್ಫೋಟಕ ಹೇಳಿಕೆ
/newsfirstlive-kannada/media/post_attachments/wp-content/uploads/2025/03/Maja-talkies-manada-kadalu-9.jpg)
ತುಜಾ ಬಾರ್​, ತುರಿ ಹೀಗೆ ತ ಹಚ್ಚಿ ತೊದಲು ನುಡಿಯಲ್ಲಿ ಮಾತ್ನಾಡ್ತಿದ್ದ ಪಾತ್ರ ಮುತ್ತು ಮಣಿಯದ್ದು. ಮಜಾ ಟಾಕೀಸ್ ಶೋನ ಪ್ರಾರಂಭದಿಂದಲೂ ಇದ್ದ ಕಲಾವಿದ ಇವರು. ಇವರು ವೇದಿಕೆಗೆ ಬಂದ್ರೇ ನಗು ಕಂಟ್ರೋಲ್​ ಮಾಡೋದೆ ಕಷ್ಟ ಆಗ್ತಿತ್ತು. ಹಾಸ್ಯ ಭರಿತ ಮಾತುಗಳಿಂದ ಮೋಡಿ ಮಾಡುತ್ತಿದ್ದರು ತರಂಗ ವಿಶ್ವ.
/newsfirstlive-kannada/media/post_attachments/wp-content/uploads/2025/05/muttu-mani1.jpg)
ಸದ್ಯ ಮಜಾ ಟಾಕೀಸ್ ಶೋನಿಂದ ಅರ್ಧಕ್ಕೆ ಹೊರ ಬಂದಿದ್ದಾರೆ. ಈ ಬಗ್ಗೆ ಖುದ್ದು ಅವರೇ ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಮಜಾ ಟಾಕೀಸ್​ ಬಿಡ್ತಿದ್ದೀನಿ. ನನ್ನನ್ನ ಮುತ್ತು ಮಣಿಯಾಗಿ ಒಪ್ಪಿಕೊಂಡಿದ್ದಕ್ಕೆ ಅಭಿಮಾನಿಗಳಿಗೆ ಥ್ಯಾಂಕ್ಯೂ. ಲೋಕೇಶ್​ ಪ್ರೊಡಕ್ಷನ್​ಗೆ ಥ್ಯಾಂಕ್ಯೂ ಎಂದಿದ್ದಾರೆ.
View this post on Instagram
ಅಷ್ಟಕ್ಕೂ ವಿಶ್ವ ಅವರು ಶೋ ಕ್ವೀಟ್​ ಮಾಡೋಕೆ ಬಲವಾದ ಕಾರಣ ಏನು ಅನ್ನೋದನ್ನ ಸ್ಪಷ್ಟಪಡಿಸಿಲ್ಲ. ಆದ್ರೇ ದಿಢೀರ್​ ಅಂತ ಇಂತಹ ನಿರ್ಧಾರಕ್ಕೆ ಬಂದಿದ್ದೇಕೆ ಎಂದು ಅಭಿಮಾನಿಗಳು ಬೇಜಾರಾಗಿದ್ದು. ಯಾಕೇ ಹೀಗ್ ಮಾಡಿದ್ರೀ? ಮುತ್ತುಮಣಿ ಇಲ್ಲದೇ ಶೋ ನೋಡೋಕಾಗಲ್ಲ. ಮತ್ತೇ ಬನ್ನಿ ಅಂತ ವೀಕ್ಷಕರು ಬೇಸರ ಹೊರ ಹಾಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us