newsfirstkannada.com

ನಟ ವಸಿಷ್ಠ ಸಿಂಹಗೆ ನಿರ್ದೇಶಕನಿಂದ ಅನ್ಯಾಯ; ಹೇಳದೆ ಯೂಟ್ಯೂಬ್​​ನಲ್ಲಿ ಹೊಸ ಸಿನಿಮಾ ರಿಲೀಸ್!

Share :

Published January 16, 2024 at 5:05pm

Update January 16, 2024 at 5:17pm

    ಕಾಲಚಕ್ರ ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟ ವಸಿಷ್ಠ ಸಿಂಹ

    ಚಿತ್ರತಂಡದಿಂದ ನಂಬಿಕೆ ದ್ರೋಹವಾಗಿದೆ ಎಂದ ಸ್ಯಾಂಡಲ್​ವುಡ್​ ನಟ

    ಕಂಚಿನ ಕಂಠದ ನಾಯಕನಿಗೆ ಅನ್ಯಾಯ, ಬೇಸರ ವ್ಯಕ್ತಪಡಿಸಿದ ಸಿಂಹ

ಕನ್ನಡದ ಕಂಚಿನ ಕಂಠದ ನಾಯಕ ನಟ ವಸಿಷ್ಠ ಸಿಂಹಗೆ ನಿರ್ದೇಶಕನಿಂದ ಅನ್ಯಾಯವಾಗಿದೆ. ನಿರ್ದೇಶಕ ಸುಮಂತ್ ಕ್ರಾಂತಿಯಿಂದ ಅನ್ಯಾಯ ಆಗಿದೆ ಎಂದು ನಾಯಕ ನಟ ವಸಿಷ್ಠ ಸಿಂಹ ಆರೋಪಿಸಿದ್ದಾರೆ.

2018ರಲ್ಲಿ ಸೆಟ್ಟೇರಿದ ‘ಕಾಲಚಕ್ರ’ ಸಿನಿಮಾದಲ್ಲಿ ನಾಯಕ ನಟನಾಗಿ ವಸಿಷ್ಠ ಸಿಂಹ ಅಭಿನಯಿಸಿದ್ದರು. ನಿರ್ದೇಶಕ ಸುಮಂತ್ ಕ್ರಾಂತಿ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾಗೆ ರಶ್ಮಿ.ಕೆ ಎಂಬುವವರು ಬಂಡವಾಳ ಹೂಡಿದ್ದರು. ಆದರೆ ಈ ಸಿನಿಮಾದ ನಾಯಕನಿಗೆ ಹೇಳದೆ ನಿರ್ದೇಶಕ ಸುಮಂತ್ ಕ್ರಾಂತಿ ಅವರು ಯೂಟ್ಯೂಬ್​​ನಲ್ಲಿ ಚಿತ್ರ ರಿಲೀಸ್ ಮಾಡಿದ್ದಾರೆ. ಇದೀಗ ಕಾಲಚಕ್ರ ಚಿತ್ರ ತಂಡದ ವಿರುದ್ಧ ನಟ ವಸಿಷ್ಠ ಸಿಂಹ ಕೆಂಡಕಾರಿದ್ದಾರೆ.

ಯುವಪ್ರತಿಭೆಗಳಿಗೆ ಕಿವಿ ಮಾತು ಕೊಟ್ಟ ವಸಿಷ್ಠ

ಮುಂದೆ ಯಾವ ಸಿನಿಮಾವಾದರೂ ಅಗ್ರಿಮೆಂಟ್ ಕ್ಲಿಯರ್ ಆಗಿ ಮಾಡಬೇಕು. ಇಲ್ಲ ಅಂದ್ರೆ‌ ಇಂಥಾ ಸಮಸ್ಯೆಯಾಗುತ್ತದೆ. ಯಾವ ನಟನಿಗೂ ಈ ರೀತಿ ಅನ್ಯಾಯ ಆಗಬಾರದು. ಚಿತ್ರತಂಡದಿಂದ ನಂಬಿಕೆ ದ್ರೋಹವಾಗಿದೆ. ಮುಂದೆ ಎಲ್ಲಾ ನಟರೂ ಇದರಿಂದ ಎಚ್ಚೆತ್ತುಕೊಳ್ಳಬೇಕು. ಹಣಕೋಸ್ಕರ ಎಲ್ಲಾ‌ ಸಿನಿಮಾಗಳನ್ನು ಮಾಡಲ್ಲ. ಪ್ರೀತಿ ವಿಶ್ವಾಸದಲ್ಲೂ ಸಿನಿಮಾದಲ್ಲಿ ಅಭಿನಯಿಸುತ್ತೇವೆ. ಏನೇ ದ್ವೇಷ ಇದ್ರೂ ಅದನ್ನು ಈ ರೀತಿ ತೋರಿಸಬಾರದು ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟ ವಸಿಷ್ಠ ಸಿಂಹಗೆ ನಿರ್ದೇಶಕನಿಂದ ಅನ್ಯಾಯ; ಹೇಳದೆ ಯೂಟ್ಯೂಬ್​​ನಲ್ಲಿ ಹೊಸ ಸಿನಿಮಾ ರಿಲೀಸ್!

https://newsfirstlive.com/wp-content/uploads/2024/01/vasista-2.jpg

    ಕಾಲಚಕ್ರ ಸಿನಿಮಾ ಬಗ್ಗೆ ಬೇಸರ ವ್ಯಕ್ತಪಡಿಸಿದ ನಟ ವಸಿಷ್ಠ ಸಿಂಹ

    ಚಿತ್ರತಂಡದಿಂದ ನಂಬಿಕೆ ದ್ರೋಹವಾಗಿದೆ ಎಂದ ಸ್ಯಾಂಡಲ್​ವುಡ್​ ನಟ

    ಕಂಚಿನ ಕಂಠದ ನಾಯಕನಿಗೆ ಅನ್ಯಾಯ, ಬೇಸರ ವ್ಯಕ್ತಪಡಿಸಿದ ಸಿಂಹ

ಕನ್ನಡದ ಕಂಚಿನ ಕಂಠದ ನಾಯಕ ನಟ ವಸಿಷ್ಠ ಸಿಂಹಗೆ ನಿರ್ದೇಶಕನಿಂದ ಅನ್ಯಾಯವಾಗಿದೆ. ನಿರ್ದೇಶಕ ಸುಮಂತ್ ಕ್ರಾಂತಿಯಿಂದ ಅನ್ಯಾಯ ಆಗಿದೆ ಎಂದು ನಾಯಕ ನಟ ವಸಿಷ್ಠ ಸಿಂಹ ಆರೋಪಿಸಿದ್ದಾರೆ.

2018ರಲ್ಲಿ ಸೆಟ್ಟೇರಿದ ‘ಕಾಲಚಕ್ರ’ ಸಿನಿಮಾದಲ್ಲಿ ನಾಯಕ ನಟನಾಗಿ ವಸಿಷ್ಠ ಸಿಂಹ ಅಭಿನಯಿಸಿದ್ದರು. ನಿರ್ದೇಶಕ ಸುಮಂತ್ ಕ್ರಾಂತಿ ನಿರ್ದೇಶನದಲ್ಲಿ ಮೂಡಿ ಬಂದ ಈ ಸಿನಿಮಾಗೆ ರಶ್ಮಿ.ಕೆ ಎಂಬುವವರು ಬಂಡವಾಳ ಹೂಡಿದ್ದರು. ಆದರೆ ಈ ಸಿನಿಮಾದ ನಾಯಕನಿಗೆ ಹೇಳದೆ ನಿರ್ದೇಶಕ ಸುಮಂತ್ ಕ್ರಾಂತಿ ಅವರು ಯೂಟ್ಯೂಬ್​​ನಲ್ಲಿ ಚಿತ್ರ ರಿಲೀಸ್ ಮಾಡಿದ್ದಾರೆ. ಇದೀಗ ಕಾಲಚಕ್ರ ಚಿತ್ರ ತಂಡದ ವಿರುದ್ಧ ನಟ ವಸಿಷ್ಠ ಸಿಂಹ ಕೆಂಡಕಾರಿದ್ದಾರೆ.

ಯುವಪ್ರತಿಭೆಗಳಿಗೆ ಕಿವಿ ಮಾತು ಕೊಟ್ಟ ವಸಿಷ್ಠ

ಮುಂದೆ ಯಾವ ಸಿನಿಮಾವಾದರೂ ಅಗ್ರಿಮೆಂಟ್ ಕ್ಲಿಯರ್ ಆಗಿ ಮಾಡಬೇಕು. ಇಲ್ಲ ಅಂದ್ರೆ‌ ಇಂಥಾ ಸಮಸ್ಯೆಯಾಗುತ್ತದೆ. ಯಾವ ನಟನಿಗೂ ಈ ರೀತಿ ಅನ್ಯಾಯ ಆಗಬಾರದು. ಚಿತ್ರತಂಡದಿಂದ ನಂಬಿಕೆ ದ್ರೋಹವಾಗಿದೆ. ಮುಂದೆ ಎಲ್ಲಾ ನಟರೂ ಇದರಿಂದ ಎಚ್ಚೆತ್ತುಕೊಳ್ಳಬೇಕು. ಹಣಕೋಸ್ಕರ ಎಲ್ಲಾ‌ ಸಿನಿಮಾಗಳನ್ನು ಮಾಡಲ್ಲ. ಪ್ರೀತಿ ವಿಶ್ವಾಸದಲ್ಲೂ ಸಿನಿಮಾದಲ್ಲಿ ಅಭಿನಯಿಸುತ್ತೇವೆ. ಏನೇ ದ್ವೇಷ ಇದ್ರೂ ಅದನ್ನು ಈ ರೀತಿ ತೋರಿಸಬಾರದು ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More