newsfirstkannada.com

ಬಳ್ಳಾರಿಯಲ್ಲಿ ಯಶ್‌ ಅಭಿಮಾನಿಗಳ ನೂಕುನುಗ್ಗಲು.. ರಾಕಿ ಭಾಯ್ ನೋಡುವ ಭರದಲ್ಲಿ ಅನಾಹುತ

Share :

Published February 29, 2024 at 3:48pm

Update February 29, 2024 at 3:58pm

    ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ರಾಕಿಂಗ್ ಸ್ಟಾರ್ ಯಶ್

    ಬಳ್ಳಾರಿಯ ಹೊರವಲಯದಲ್ಲಿ ಇರುವ ಬಾಲಾಜಿ ನಗರದಲ್ಲಿ ಘಟನೆ

    ಯಶ್ ತೆರಳುವ ಸಮಯದಲ್ಲಿ ಕಾರ್ ಹಿಂಬಾಲಿಸಿದ್ದ ಅಭಿಮಾನಿಗಳು

ಬಳ್ಳಾರಿ: ಶ್ರೀಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್‌ ಯಶ್ ಆಗಮಿಸಿದ್ದಾರೆ. ಬಳ್ಳಾರಿಗೆ ಯಶ್ ಆಗಮಿಸೋ ಸುದ್ದಿ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಕಟ್ಟಡದ ಮೇಲೆ ನಿಂತು ಯಶ್ ನೋಡಲು ಅಭಿಮಾನಿಗಳು ಗಂಟೆಗಟ್ಟಲೇ ಕಾಯುತ್ತಿದ್ದರು. ಯಶ್ ಕಂಡ ಕೂಡಲೇ ಅಭಿಮಾನಿಗಳಿಂದ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ನಟ ಯಶ್​ ಅವರನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬರ ಕಾಲಿನ ಮೇಲೆ ಬೆಂಗಾವಲು ವಾಹನ ಹರಿದಿದ್ದು ಅಭಿಮಾನಿ ಗಾಯಗೊಂಡಿದ್ದಾನೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲ ಮೇಲೆ ಕಾರು ಹರಿದಿದೆ. ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಯಶ್ ಅವರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ಯಶ್​ ನೋಡಲೆಂದು ಬಂದಿದ್ದರಿಂದ ರಶ್ ಉಂಟಾಗಿ ನೂಕುನುಗ್ಗಲು ಉಂಟಾಗಿತ್ತು. ಯಶ್ ಅವರು ಕಾರಿನಲ್ಲಿ ತೆರಳುತ್ತಿರುವಾಗ ಅಭಿಮಾನಿಗಳು ಅವರ ಕಾರನ್ನು ಹಿಂಬಾಲಿಸುತ್ತಿದ್ದರು. ಆಗ ಬೆಂಗಾವಲು ಕಾರು ಅಭಿಮಾನಿಯ ಕಾಲಿನ ಮೇಲೆ ಹರಿದಿದೆ.

ಇದನ್ನು ಓದಿ: VIDEO: ರಗಡ್‌ ಲುಕ್‌ನಲ್ಲಿ ಬಳ್ಳಾರಿಗೆ ಎಂಟ್ರಿ ಕೊಟ್ಟ ರಾಕಿಂಗ್ ಸ್ಟಾರ್ ಯಶ್; ಏನಿದರ ವಿಶೇಷ?

ಗಾಯಗೊಂಡ ಯುವಕ

ಸದ್ಯ ಗಾಯಗೊಂಡಿರುವ ಯುವಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇವಾಲಯವನ್ನು ತೆಲುಗು ಸಿನಿಮಾ ನಿರ್ದೇಶಕ ಸಾಯಿ ಕೊರಪಾಟಿ ನಿರ್ಮಾಣ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಳ್ಳಾರಿಯಲ್ಲಿ ಯಶ್‌ ಅಭಿಮಾನಿಗಳ ನೂಕುನುಗ್ಗಲು.. ರಾಕಿ ಭಾಯ್ ನೋಡುವ ಭರದಲ್ಲಿ ಅನಾಹುತ

https://newsfirstlive.com/wp-content/uploads/2024/02/YASH_BLY.jpg

    ದೇವಸ್ಥಾನದ ಉದ್ಘಾಟನೆಗೆ ಆಗಮಿಸಿದ್ದ ರಾಕಿಂಗ್ ಸ್ಟಾರ್ ಯಶ್

    ಬಳ್ಳಾರಿಯ ಹೊರವಲಯದಲ್ಲಿ ಇರುವ ಬಾಲಾಜಿ ನಗರದಲ್ಲಿ ಘಟನೆ

    ಯಶ್ ತೆರಳುವ ಸಮಯದಲ್ಲಿ ಕಾರ್ ಹಿಂಬಾಲಿಸಿದ್ದ ಅಭಿಮಾನಿಗಳು

ಬಳ್ಳಾರಿ: ಶ್ರೀಅಮೃತೇಶ್ವರ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ರಾಕಿಂಗ್ ಸ್ಟಾರ್‌ ಯಶ್ ಆಗಮಿಸಿದ್ದಾರೆ. ಬಳ್ಳಾರಿಗೆ ಯಶ್ ಆಗಮಿಸೋ ಸುದ್ದಿ ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಕಟ್ಟಡದ ಮೇಲೆ ನಿಂತು ಯಶ್ ನೋಡಲು ಅಭಿಮಾನಿಗಳು ಗಂಟೆಗಟ್ಟಲೇ ಕಾಯುತ್ತಿದ್ದರು. ಯಶ್ ಕಂಡ ಕೂಡಲೇ ಅಭಿಮಾನಿಗಳಿಂದ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.

ನಟ ಯಶ್​ ಅವರನ್ನು ನೋಡಲು ಬಂದಿದ್ದ ಅಭಿಮಾನಿಯೊಬ್ಬರ ಕಾಲಿನ ಮೇಲೆ ಬೆಂಗಾವಲು ವಾಹನ ಹರಿದಿದ್ದು ಅಭಿಮಾನಿ ಗಾಯಗೊಂಡಿದ್ದಾನೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲ ಮೇಲೆ ಕಾರು ಹರಿದಿದೆ. ಬಾಲಾಜಿ ನಗರದಲ್ಲಿ ನೂತನವಾಗಿ ನಿರ್ಮಾಣವಾಗಿದ್ದ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನ ಉದ್ಘಾಟನೆಗೆ ಯಶ್ ಅವರು ಆಗಮಿಸಿದ್ದರು. ಈ ಹಿನ್ನೆಲೆಯಲ್ಲಿ ಸಾವಿರಾರು ಅಭಿಮಾನಿಗಳು ಯಶ್​ ನೋಡಲೆಂದು ಬಂದಿದ್ದರಿಂದ ರಶ್ ಉಂಟಾಗಿ ನೂಕುನುಗ್ಗಲು ಉಂಟಾಗಿತ್ತು. ಯಶ್ ಅವರು ಕಾರಿನಲ್ಲಿ ತೆರಳುತ್ತಿರುವಾಗ ಅಭಿಮಾನಿಗಳು ಅವರ ಕಾರನ್ನು ಹಿಂಬಾಲಿಸುತ್ತಿದ್ದರು. ಆಗ ಬೆಂಗಾವಲು ಕಾರು ಅಭಿಮಾನಿಯ ಕಾಲಿನ ಮೇಲೆ ಹರಿದಿದೆ.

ಇದನ್ನು ಓದಿ: VIDEO: ರಗಡ್‌ ಲುಕ್‌ನಲ್ಲಿ ಬಳ್ಳಾರಿಗೆ ಎಂಟ್ರಿ ಕೊಟ್ಟ ರಾಕಿಂಗ್ ಸ್ಟಾರ್ ಯಶ್; ಏನಿದರ ವಿಶೇಷ?

ಗಾಯಗೊಂಡ ಯುವಕ

ಸದ್ಯ ಗಾಯಗೊಂಡಿರುವ ಯುವಕನನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ದೇವಾಲಯವನ್ನು ತೆಲುಗು ಸಿನಿಮಾ ನಿರ್ದೇಶಕ ಸಾಯಿ ಕೊರಪಾಟಿ ನಿರ್ಮಾಣ ಮಾಡಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More