ಪ್ರೇಕ್ಷಕರ ಮನ ಮುಟ್ಟುವಂತಿದೆ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ
ಕನ್ಯಾಕುಮಾರಿ ಸೀರಿಯಲ್ ನಟ ಈ ಪಾತ್ರ ಮಾಡಬೇಕಿತ್ತಂತೆ
‘ಶ್ರಾವಣಿ ಜತೆ ನೀವೇ ಕಾಣಿಸಿಕೊಳ್ಳುವುದು ನಮ್ಮ ಆಸೆಯಾಗಿತ್ತು’
ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಕಥೆಯನ್ನ ತುಂಬಾ ಅದ್ಭುತವಾಗಿ ಹೆಣೆಯಲಾಗಿದೆ. ಇದು ಅದ್ಧೂರಿಯಾಗಿ ಮೂಡಿ ಬಂದಿದೆ. ಅಪ್ಪನಿಗೆ ಮಗಳನ್ನ ಕಂಡ್ರೇ ಆಗಲ್ಲ. ಮಗಳಿಗೆ ಅಪ್ಪನೇ ಜೀವ ಎನ್ನುವ ಶ್ರಾವಣಿ. ಸೀರಿಯಲ್ ಸ್ಟೋರಿನಲ್ಲಿ ಹೊಸ ಹೊಸ ಎಲಿಮೆಂಟ್ಸ್ ಆಡ್ ಮಾಡಲಾಗಿದೆ.
ಇದನ್ನೂ ಓದಿ: ಹೊಸ ಟ್ವಿಸ್ಟ್ ಪಡೆದುಕೊಂಡ ಶ್ರಾವಣಿ ಸುಬ್ರಮಣ್ಯ ಸೀರಿಯಲ್; ಅಪ್ಪನ ನಟನೆಗೆ ವೀಕ್ಷಕರಿಂದ ಬಹುಪರಾಕ್
ಬಡತನ ಸಿರಿತನ ನಡುವೆ ಪ್ರೀತಿಯ ಕೊರತೆ ಹೇಗೆ ಕಾಡುತ್ತೆ ಅನ್ನೋದನ್ನ ಧಾರಾವಾಹಿ ಕಟ್ಟಿಕೊಡುತ್ತೆ. ಸುಬ್ಬು ಕುಟುಂಬದ ಪ್ರೀತಿಯ ಸಂಕೇತ ಆದ್ರೆ ಇನ್ನು ಎಲ್ಲ ಇದ್ದು ಏನೂ ಇಲ್ಲದೇ ಇರುವ ಜೀವನ ಶ್ರಾವಣಿಯದ್ದು. ಸದ್ಯ ಶ್ರಾವಣಿ ಸುಬ್ರಮಣ್ಯ ಈಗ ಟ್ರೆಂಡಿಂಗ್ನಲ್ಲಿರೋ ಧಾರಾವಾಹಿ. ಅಪ್ಪನ ಪ್ರೀತಿಗೆ ಹಂಬಲಿಸುತ್ತಿರೋ ಶ್ರಾವಣಿ ಲೈಫ್ನಲ್ಲಿ ದಿನಕೊಂದು ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅಪ್ಪ ಮತ್ತು ಮಗಳ ಸಂಬಂಧ ಬೆಲೆ ಕಟ್ಟಲಾಗದ್ದು. ಆದ್ರೆ, ಶ್ರಾವಣಿ ಜೀವನದಲ್ಲಿ ಅದು ಇರಲೇ ಇರ್ಲಿಲ್ಲ. ಹಾಗಂತ ಮುಂದೆ ಇರೋಲ್ಲ ಅಂತೇನಿಲ್ಲ. ಹೀಗಾಗಿ ಮಗಳ ಮೇಲೆ ಅಪ್ಪ ವೀರು ವಾತ್ಸಲ್ಯ ಹೆಚ್ಚಾಗ್ತಿದೆ. ಮಗಳ ಪ್ರೀತಿಗೆ ವೀರು ಮನಸೋಲುತ್ತಿದ್ದಾರೆ.
ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಒಂದೊಂದು ಪಾತ್ರಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಒಂದು ಕಡೆ ಶ್ರಾವಣಿ, ಮತ್ತೊಂದು ಕಡೆ ಸುಬ್ಬು. ಹೀಗೆ ದಿನದಿಂದ ದಿನಕ್ಕೆ ಸುಬ್ಬು ಪಾತ್ರಕ್ಕೆ ಜನ ಮನಸೋಲುತ್ತಿದ್ದಾರೆ. ಆದರೆ ಈ ಸುಬ್ಬು ಪಾತ್ರಕ್ಕೆ ನಟ ಯಶ್ವಂತ್ ಆಯ್ಕೆಯಾಗಿದ್ದರಂತೆ. ಕನ್ನಡ ಕಿರುತೆರೆಯ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಕನ್ಯಾಕುಮಾರಿ ಧಾರಾವಾಹಿಯ ನಾಯಕ ನಟ ಕೂಡ ಒಬ್ಬರು. ಸದ್ಯ ಕನ್ಯಾಕುಮಾರಿ ಧಾರಾವಾಹಿಯ ಮುಕ್ತಾಯದ ಬಳಿಕ ತೆಲುಗು ಅಂಗಳಲ್ಲಿ ಮಿಂಚುತ್ತಿದ್ದಾರೆ.
ಇನ್ನು, ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಬಗ್ಗೆ ಮಾತಾಡಿದ ಅವರು, ಆಗಾಗ ನಾನು ಶ್ರಾವಣಿ ಸುಬ್ರಮಣ್ಯ ಪ್ರೋಮೋ ನೋಡುತ್ತಾ ಇದ್ದೆ. ಚೆನ್ನಾಗಿ ಮೂಡಿ ಬರುತ್ತಿದೆ. ಈ ಸೀರಿಯಲ್ ಪ್ರೋಮೋ ನೋಡಿದ ಸಾಕಷ್ಟು ಜನರು ನನಗೆ ಟ್ಯಾಗ್ ಮಾಡುತ್ತಿದ್ದರು. ಇಲ್ಲಿಯೂ ನೀವೇ ಅವರ ಜೊತೆಯಾಗಿ ಇರಬೇಕಾಗಿತ್ತು ಅಂತ ಹೇಳ್ತಾರೆ. ಆದರೆ ಜನರಿಗೆ ಗೊತ್ತಿಲ್ಲ ನಾನೇ ಆ ಸೀರಿಯಲ್ಗೆ ಓಕೆ ಆಗಿದ್ದೇ ಫೈನಲ್ ಕೂಡ ಆಗಿತ್ತು. ಆದರೆ ಚಾನೆಲ್ ಡಿಷಿಶನ್ ಬೇರೆಯಾಗಿತ್ತು. ಆದರೆ ನಾನು ಅದರಲ್ಲಿ ಮಾಡಬೇಕಾಗಿತ್ತು. ತುಂಬಾ ಜನ ಕಾಮೆಂಟ್ ಹಾಕಿ ಟ್ಯಾಗ್ ಮಾಡಿದ್ರು. ನಿಮ್ಮ ಜೋಡಿಯನ್ನು ಮತ್ತೆ ನೋಡುತ್ತೇವೆ ಎಂದರೆ ಅದು ಖುಷಿ ವಿಚಾರ ಅಂತಾ ಹೇಳುತ್ತಿದ್ದರು. ಆದರೆ ಚಾನೆಲ್ ನಿರ್ಧಾರಕ್ಕೆ ನಾವು ಒಪ್ಪಿಗೆ ನೀಡಬೇಕು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರೇಕ್ಷಕರ ಮನ ಮುಟ್ಟುವಂತಿದೆ ಶ್ರಾವಣಿ ಸುಬ್ರಮಣ್ಯ ಧಾರಾವಾಹಿ
ಕನ್ಯಾಕುಮಾರಿ ಸೀರಿಯಲ್ ನಟ ಈ ಪಾತ್ರ ಮಾಡಬೇಕಿತ್ತಂತೆ
‘ಶ್ರಾವಣಿ ಜತೆ ನೀವೇ ಕಾಣಿಸಿಕೊಳ್ಳುವುದು ನಮ್ಮ ಆಸೆಯಾಗಿತ್ತು’
ಅಪ್ಪನ ಪ್ರೀತಿಗಾಗಿ ಹಂಬಲಿಸುತ್ತಿರುವ ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಕಥೆಯನ್ನ ತುಂಬಾ ಅದ್ಭುತವಾಗಿ ಹೆಣೆಯಲಾಗಿದೆ. ಇದು ಅದ್ಧೂರಿಯಾಗಿ ಮೂಡಿ ಬಂದಿದೆ. ಅಪ್ಪನಿಗೆ ಮಗಳನ್ನ ಕಂಡ್ರೇ ಆಗಲ್ಲ. ಮಗಳಿಗೆ ಅಪ್ಪನೇ ಜೀವ ಎನ್ನುವ ಶ್ರಾವಣಿ. ಸೀರಿಯಲ್ ಸ್ಟೋರಿನಲ್ಲಿ ಹೊಸ ಹೊಸ ಎಲಿಮೆಂಟ್ಸ್ ಆಡ್ ಮಾಡಲಾಗಿದೆ.
ಇದನ್ನೂ ಓದಿ: ಹೊಸ ಟ್ವಿಸ್ಟ್ ಪಡೆದುಕೊಂಡ ಶ್ರಾವಣಿ ಸುಬ್ರಮಣ್ಯ ಸೀರಿಯಲ್; ಅಪ್ಪನ ನಟನೆಗೆ ವೀಕ್ಷಕರಿಂದ ಬಹುಪರಾಕ್
ಬಡತನ ಸಿರಿತನ ನಡುವೆ ಪ್ರೀತಿಯ ಕೊರತೆ ಹೇಗೆ ಕಾಡುತ್ತೆ ಅನ್ನೋದನ್ನ ಧಾರಾವಾಹಿ ಕಟ್ಟಿಕೊಡುತ್ತೆ. ಸುಬ್ಬು ಕುಟುಂಬದ ಪ್ರೀತಿಯ ಸಂಕೇತ ಆದ್ರೆ ಇನ್ನು ಎಲ್ಲ ಇದ್ದು ಏನೂ ಇಲ್ಲದೇ ಇರುವ ಜೀವನ ಶ್ರಾವಣಿಯದ್ದು. ಸದ್ಯ ಶ್ರಾವಣಿ ಸುಬ್ರಮಣ್ಯ ಈಗ ಟ್ರೆಂಡಿಂಗ್ನಲ್ಲಿರೋ ಧಾರಾವಾಹಿ. ಅಪ್ಪನ ಪ್ರೀತಿಗೆ ಹಂಬಲಿಸುತ್ತಿರೋ ಶ್ರಾವಣಿ ಲೈಫ್ನಲ್ಲಿ ದಿನಕೊಂದು ಹೊಸ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಅಪ್ಪ ಮತ್ತು ಮಗಳ ಸಂಬಂಧ ಬೆಲೆ ಕಟ್ಟಲಾಗದ್ದು. ಆದ್ರೆ, ಶ್ರಾವಣಿ ಜೀವನದಲ್ಲಿ ಅದು ಇರಲೇ ಇರ್ಲಿಲ್ಲ. ಹಾಗಂತ ಮುಂದೆ ಇರೋಲ್ಲ ಅಂತೇನಿಲ್ಲ. ಹೀಗಾಗಿ ಮಗಳ ಮೇಲೆ ಅಪ್ಪ ವೀರು ವಾತ್ಸಲ್ಯ ಹೆಚ್ಚಾಗ್ತಿದೆ. ಮಗಳ ಪ್ರೀತಿಗೆ ವೀರು ಮನಸೋಲುತ್ತಿದ್ದಾರೆ.
ಶ್ರಾವಣಿ ಸುಬ್ರಮಣ್ಯ ಸೀರಿಯಲ್ನಲ್ಲಿ ಒಂದೊಂದು ಪಾತ್ರಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಒಂದು ಕಡೆ ಶ್ರಾವಣಿ, ಮತ್ತೊಂದು ಕಡೆ ಸುಬ್ಬು. ಹೀಗೆ ದಿನದಿಂದ ದಿನಕ್ಕೆ ಸುಬ್ಬು ಪಾತ್ರಕ್ಕೆ ಜನ ಮನಸೋಲುತ್ತಿದ್ದಾರೆ. ಆದರೆ ಈ ಸುಬ್ಬು ಪಾತ್ರಕ್ಕೆ ನಟ ಯಶ್ವಂತ್ ಆಯ್ಕೆಯಾಗಿದ್ದರಂತೆ. ಕನ್ನಡ ಕಿರುತೆರೆಯ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಕನ್ಯಾಕುಮಾರಿ ಧಾರಾವಾಹಿಯ ನಾಯಕ ನಟ ಕೂಡ ಒಬ್ಬರು. ಸದ್ಯ ಕನ್ಯಾಕುಮಾರಿ ಧಾರಾವಾಹಿಯ ಮುಕ್ತಾಯದ ಬಳಿಕ ತೆಲುಗು ಅಂಗಳಲ್ಲಿ ಮಿಂಚುತ್ತಿದ್ದಾರೆ.
ಇನ್ನು, ಶ್ರಾವಣಿ ಸುಬ್ರಮಣ್ಯ ಸೀರಿಯಲ್ ಬಗ್ಗೆ ಮಾತಾಡಿದ ಅವರು, ಆಗಾಗ ನಾನು ಶ್ರಾವಣಿ ಸುಬ್ರಮಣ್ಯ ಪ್ರೋಮೋ ನೋಡುತ್ತಾ ಇದ್ದೆ. ಚೆನ್ನಾಗಿ ಮೂಡಿ ಬರುತ್ತಿದೆ. ಈ ಸೀರಿಯಲ್ ಪ್ರೋಮೋ ನೋಡಿದ ಸಾಕಷ್ಟು ಜನರು ನನಗೆ ಟ್ಯಾಗ್ ಮಾಡುತ್ತಿದ್ದರು. ಇಲ್ಲಿಯೂ ನೀವೇ ಅವರ ಜೊತೆಯಾಗಿ ಇರಬೇಕಾಗಿತ್ತು ಅಂತ ಹೇಳ್ತಾರೆ. ಆದರೆ ಜನರಿಗೆ ಗೊತ್ತಿಲ್ಲ ನಾನೇ ಆ ಸೀರಿಯಲ್ಗೆ ಓಕೆ ಆಗಿದ್ದೇ ಫೈನಲ್ ಕೂಡ ಆಗಿತ್ತು. ಆದರೆ ಚಾನೆಲ್ ಡಿಷಿಶನ್ ಬೇರೆಯಾಗಿತ್ತು. ಆದರೆ ನಾನು ಅದರಲ್ಲಿ ಮಾಡಬೇಕಾಗಿತ್ತು. ತುಂಬಾ ಜನ ಕಾಮೆಂಟ್ ಹಾಕಿ ಟ್ಯಾಗ್ ಮಾಡಿದ್ರು. ನಿಮ್ಮ ಜೋಡಿಯನ್ನು ಮತ್ತೆ ನೋಡುತ್ತೇವೆ ಎಂದರೆ ಅದು ಖುಷಿ ವಿಚಾರ ಅಂತಾ ಹೇಳುತ್ತಿದ್ದರು. ಆದರೆ ಚಾನೆಲ್ ನಿರ್ಧಾರಕ್ಕೆ ನಾವು ಒಪ್ಪಿಗೆ ನೀಡಬೇಕು ಅಂತ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ