/newsfirstlive-kannada/media/post_attachments/wp-content/uploads/2024/10/Amrutha-Ramamoorthi.jpg)
ಕಲರ್ಸ್ ಕನ್ನಡದ ಟಾಪ್ ಧಾರಾವಾಹಿಗಳ ಲಿಸ್ಟ್ನಲ್ಲಿದ್ದ ಸ್ಟೋರಿ ಕೆಂಡಸಂಪಿಗೆ ಧಾರಾವಾಹಿ ಅಂತ್ಯ ಕಂಡಿದೆ. ಪರಿಣಿತ ಪ್ರೊಡಕ್ಷನ್ಸ್ನಡಿ ಉದಯ್ ಅವರ ನಿರ್ದೇಶನದಲ್ಲಿ 610 ಸಂಚಿಕೆಗಳನ್ನ ಯಶಸ್ವಿಯಾಗಿ ಪೂರೈಸಿ ಮುಕ್ತಾಯಗೊಂಡಿದೆ.
ಇದನ್ನೂ ಓದಿ: BBK11: ಬಿಗ್ ಬಾಸ್ಗೇ ಅವಾಜ್! ಪ್ರೋಗ್ರಾಂ ಹಾಳು ಮಾಡ್ತೀನಿ ಎಂದ ಲಾಯರ್! ವೀಕೆಂಡ್ನಲ್ಲಿ ಇದೆಯಾ ಮಾರಿ ಹಬ್ಬ
ಸುಮನಾ-ತೀರ್ಥ ಸ್ಟೋರಿಗೆ ಫುಲ್ಸ್ಟಾಪ್ ಸಿಕ್ಕಿದೆ. ಸಾಧನಾ ಪಾತ್ರ ತನ್ನ ಎಲ್ಲಾ ತಪ್ಪುಗಳನ್ನ ಒಪ್ಪಿ ಕ್ಷಮೆ ಕೇಳೋ ಮೂಲಕ ಸೀರಿಯಲ್ಗೆ ಒಂದೋಳ್ಳೆ ಅಂತ್ಯ ನೀಡಲಾಗಿದೆ. ಕೆಂಡಸಂಪಿಗೆ ಶುರುವಿನಿಂದ ಸಾಧನಾ ಪಾತ್ರವನ್ನ ಅದ್ಭುತವಾಗಿ ನಿರ್ವಹಿಸಿರೋ ನಟಿ ಅಮೃತಾ ರಾಮಮೂರ್ತಿ ಅವರು ತಮ್ಮ ಜರ್ನಿ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಪಾಸಿಟಿವ್ ಪಾತ್ರಗಳನ್ನ ಮಾಡ್ಕೊಂಡು ಬಂದಿದ್ದೆ.
View this post on Instagram
ಸಾಧನಾ ಪಾತ್ರ ನನ್ನ ಸಂಪೂರ್ಣ ನೆಗೆಟಿವ್ ಪಾತ್ರವಾಗಿತ್ತು. ನನ್ನ ತುಂಬಾ ಬೈಯೊಕೊಂಡಿದ್ದೀರಾ. ಅದು ನನಗೆ ಖುಷಿ ಕೊಟ್ಟಿದೆ. ನನ್ನ ಅಭಿನಯ, ಕಾಸ್ಟ್ಯೂಮ್ನ ತುಂಬಾ ಜನ ಮೆಚ್ಚಿಕೊಂಡಿದ್ದರು. ಅದಕ್ಕೂ ಥ್ಯಾಂಕ್ಯೂ ಎಂದಿದ್ದಾರೆ ಅಮೃತಾ. ವಿಡಿಯೋ ಜೊತೆಗೆ ಕೆಂಡಸಂಪಿಗೆಯ ಒಂದಿಷ್ಟು ಬ್ಯೂಟಿಫುಲ್ ನೆನಪುಗಳನ್ನ ಶೇರ್ ಮಾಡಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ