newsfirstkannada.com

ನಟಿ ಅಪರ್ಣಾ ಕೊನೆ ಸಂದರ್ಶನದಲ್ಲಿ ಆಡಿದ್ದ ಮಾತುಗಳೇನು..? ತಮ್ಮ ಬದುಕಿನ ಬಗ್ಗೆ ಏನಂದಿದ್ರು?

Share :

Published July 11, 2024 at 10:57pm

Update July 11, 2024 at 11:00pm

    ಅಪರ್ಣಾ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ನಿರೂಪಕಿ

    ಇತ್ತೀಚೆಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟಿ ಅಪರ್ಣಾ ಇನ್ನಿಲ್ಲ

    ಇವರು ಟೆಲಿವಿಶನ್​​ ಲೋಕಕ್ಕೆ ಬಂದಿದ್ದು ಹೇಗೆ ಬಂದಿದ್ದು ಗೊತ್ತಾ?

ಅಪರ್ಣಾ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ನಿರೂಪಕಿ. ಇತ್ತೀಚೆಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಇವರು ಇಹಲೋಕ ತ್ಯಜಿಸಿದ್ದಾರೆ. ಇವರು ಟೆಲಿವಿಶನ್​​ ಲೋಕಕ್ಕೆ ಬಂದಿದ್ದು ಹೇಗೆ ಬಂದಿದ್ದು? ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಅಪರ್ಣಾ ಕೊನೆ ಸಂದರ್ಶನದಲ್ಲಿ ಏನಿತ್ತು..?

ದೂರದರ್ಶನ ಎಂಬ ಮಧ್ಯಮ ಆಗಷ್ಟೇ ಹುಟ್ಟಿದ ಕೂಸು. 1983ರಲ್ಲೇ ಟೆಲಿವಿಷನ್ ಶುರುವಾಗಿದ್ದು. ಆಗ ಹಿಂದಿ ಕಾರ್ಯಕ್ರಮಗಳು ಮಾತ್ರ ಪ್ರಸಾರ ಆಗುತ್ತಿದ್ದವು. ನನಗೆ ಮೊದಲ ಬಾರಿ ದೂರದರ್ಶನ ಕಂಡಾಗ ಎಲ್ಲಿಲ್ಲದ ಸಂತೋಷ. ಯಾವತ್ತೋ ಒಂದು ದಿನ ದೂರದರ್ಶನದಲ್ಲಿ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಅವತ್ತೇ ಕನಸು ಕಂಡಿದ್ದೆ ಎಂದಿದ್ದರು ಅಪರ್ಣಾ.

ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದ ಅಪರ್ಣಾ, ಡ್ರಾಮಾ ಆಡಿಷನ್ ಮೂಲಕ ಕಲಾವಿದೆ ಆಗಬೇಕು ಎಂದು ಕನಸು ಕಂಡಿದ್ದೆ. ಆಗ ನನಗೆ ಸಹಾಯ ಮಾಡಿದವರು ಶ್ರೀನಿವಾಸ ಪ್ರಭು ಅವರು. ಬಳಿಕ ಸೂರಿ ಅವರ ನಿರ್ದೇಶನದಲ್ಲಿ ನಾಪತ್ತೆ ಆದ ಪ್ರೇಮಿ ಎಂಬ ನಾಟಕ ಮಾಡಿದೆ ಎಂದರು.

ರಂಗ ಭೂಮಿ ಕಲಾವಿದರಾದ ವಿಶ್ವನಾಥ್ ರಾವ್, ಮಂಗಳ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್​ ಸೇರಿದಂತೆ ಹಲವರು ಚಿತ್ರರಂಗಕ್ಕೆ ಬರುವ ಮುಂಚೆ ನಮ್ಮೊಂದಿಗೆ ಇದ್ದರು. ನಮ್ಮ ಜೊತೆ ರಂಗ ಭೂಮಿಯ ಕಲಾವಿದರಾಗಿ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು ಎಂದರು.

ನಾನು 1989ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದೆ. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್​ ಅವರ ಮಸಣದ ಹೂವು ಚಿತ್ರದಲ್ಲಿ ನಟಿಸಿದ್ದೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. 90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದೇನೆ. ರೇಡಿಯೋ ಜಾಕಿ ಕೂಡ ಆಗಿದ್ದೆ. ಮೂಡಲ ಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್​ನಲ್ಲಿ ಭಾಗವಹಿಸಿದ್ದೇನೆ. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದೆ ಎಂದು ತಮ್ಮ ಕೊನೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ಅಪರ್ಣಾ.

ಇದನ್ನೂ ಓದಿ: BIG BREAKING: ಖ್ಯಾತ ಕನ್ನಡದ ನಿರೂಪಕಿ ಅಪರ್ಣಾ ಇನ್ನಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಟಿ ಅಪರ್ಣಾ ಕೊನೆ ಸಂದರ್ಶನದಲ್ಲಿ ಆಡಿದ್ದ ಮಾತುಗಳೇನು..? ತಮ್ಮ ಬದುಕಿನ ಬಗ್ಗೆ ಏನಂದಿದ್ರು?

https://newsfirstlive.com/wp-content/uploads/2024/07/aparana7.jpg

    ಅಪರ್ಣಾ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ನಿರೂಪಕಿ

    ಇತ್ತೀಚೆಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ನಟಿ ಅಪರ್ಣಾ ಇನ್ನಿಲ್ಲ

    ಇವರು ಟೆಲಿವಿಶನ್​​ ಲೋಕಕ್ಕೆ ಬಂದಿದ್ದು ಹೇಗೆ ಬಂದಿದ್ದು ಗೊತ್ತಾ?

ಅಪರ್ಣಾ ಕನ್ನಡ ಚಿತ್ರರಂಗದ ಖ್ಯಾತ ನಟಿ ಮತ್ತು ನಿರೂಪಕಿ. ಇತ್ತೀಚೆಗೆ ಕ್ಯಾನ್ಸರ್​ನಿಂದ ಬಳಲುತ್ತಿದ್ದ ಇವರು ಇಹಲೋಕ ತ್ಯಜಿಸಿದ್ದಾರೆ. ಇವರು ಟೆಲಿವಿಶನ್​​ ಲೋಕಕ್ಕೆ ಬಂದಿದ್ದು ಹೇಗೆ ಬಂದಿದ್ದು? ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಅಪರ್ಣಾ ಕೊನೆ ಸಂದರ್ಶನದಲ್ಲಿ ಏನಿತ್ತು..?

ದೂರದರ್ಶನ ಎಂಬ ಮಧ್ಯಮ ಆಗಷ್ಟೇ ಹುಟ್ಟಿದ ಕೂಸು. 1983ರಲ್ಲೇ ಟೆಲಿವಿಷನ್ ಶುರುವಾಗಿದ್ದು. ಆಗ ಹಿಂದಿ ಕಾರ್ಯಕ್ರಮಗಳು ಮಾತ್ರ ಪ್ರಸಾರ ಆಗುತ್ತಿದ್ದವು. ನನಗೆ ಮೊದಲ ಬಾರಿ ದೂರದರ್ಶನ ಕಂಡಾಗ ಎಲ್ಲಿಲ್ಲದ ಸಂತೋಷ. ಯಾವತ್ತೋ ಒಂದು ದಿನ ದೂರದರ್ಶನದಲ್ಲಿ ಬದುಕು ಕಟ್ಟಿಕೊಳ್ಳುತ್ತೇನೆ ಎಂದು ಅವತ್ತೇ ಕನಸು ಕಂಡಿದ್ದೆ ಎಂದಿದ್ದರು ಅಪರ್ಣಾ.

ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿದ್ದ ಅಪರ್ಣಾ, ಡ್ರಾಮಾ ಆಡಿಷನ್ ಮೂಲಕ ಕಲಾವಿದೆ ಆಗಬೇಕು ಎಂದು ಕನಸು ಕಂಡಿದ್ದೆ. ಆಗ ನನಗೆ ಸಹಾಯ ಮಾಡಿದವರು ಶ್ರೀನಿವಾಸ ಪ್ರಭು ಅವರು. ಬಳಿಕ ಸೂರಿ ಅವರ ನಿರ್ದೇಶನದಲ್ಲಿ ನಾಪತ್ತೆ ಆದ ಪ್ರೇಮಿ ಎಂಬ ನಾಟಕ ಮಾಡಿದೆ ಎಂದರು.

ರಂಗ ಭೂಮಿ ಕಲಾವಿದರಾದ ವಿಶ್ವನಾಥ್ ರಾವ್, ಮಂಗಳ ಹಾಗೂ ಬಹುಭಾಷಾ ನಟ ಪ್ರಕಾಶ್ ರಾಜ್​ ಸೇರಿದಂತೆ ಹಲವರು ಚಿತ್ರರಂಗಕ್ಕೆ ಬರುವ ಮುಂಚೆ ನಮ್ಮೊಂದಿಗೆ ಇದ್ದರು. ನಮ್ಮ ಜೊತೆ ರಂಗ ಭೂಮಿಯ ಕಲಾವಿದರಾಗಿ ನಾಟಕದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು ಎಂದರು.

ನಾನು 1989ರಲ್ಲಿ ನಿರೂಪಕಿಯಾಗಿ ಟೆಲಿವಿಷನ್ ಸೇರಿದೆ. 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್​ ಅವರ ಮಸಣದ ಹೂವು ಚಿತ್ರದಲ್ಲಿ ನಟಿಸಿದ್ದೆ. ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದೇನೆ. 90ರ ದಶಕದಲ್ಲೇ ಚಂದನ ವಾಹಿನಿಯಲ್ಲಿ ಹಲವು ಕಾರ್ಯಕ್ರಮಗಳನ್ನು ನಿರೂಪಿಸಿದ್ದೇನೆ. ರೇಡಿಯೋ ಜಾಕಿ ಕೂಡ ಆಗಿದ್ದೆ. ಮೂಡಲ ಮನೆ, ಮುಕ್ತ ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದೇನೆ. 2013 ರಲ್ಲಿ ಬಿಗ್ ಬಾಸ್ ಕನ್ನಡದ ಮೊದಲ ಸೀಸನ್​ನಲ್ಲಿ ಭಾಗವಹಿಸಿದ್ದೇನೆ. 2015 ರಲ್ಲಿ ಸೃಜನ್ ಲೋಕೇಶ್ ನೇತೃತ್ವದಲ್ಲಿ ಆರಂಭವಾದ ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ವರಲಕ್ಷ್ಮಿ ಪಾತ್ರ ಮಾಡಿದ್ದೆ ಎಂದು ತಮ್ಮ ಕೊನೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು ಅಪರ್ಣಾ.

ಇದನ್ನೂ ಓದಿ: BIG BREAKING: ಖ್ಯಾತ ಕನ್ನಡದ ನಿರೂಪಕಿ ಅಪರ್ಣಾ ಇನ್ನಿಲ್ಲ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More