ಎಸ್.ಎಂ ಕೃಷ್ಣ ನಿಧನ; ಬೆಂಗಳೂರಿನ ನಿವಾಸಕ್ಕೆ ಕಣ್ಣೀರಿಡುತ್ತ ಬಂದ ನಟಿ ರಮ್ಯಾ

author-image
Bheemappa
Updated On
ಎಸ್.ಎಂ ಕೃಷ್ಣ ನಿಧನ; ಬೆಂಗಳೂರಿನ ನಿವಾಸಕ್ಕೆ ಕಣ್ಣೀರಿಡುತ್ತ ಬಂದ ನಟಿ ರಮ್ಯಾ
Advertisment
  • ಕರ್ನಾಟಕದ ಮಾಜಿ ಸಿಎಂ ಎಸ್.​ಎಂ ಕೃಷ್ಣ ಅವರು ವಿಧಿವಶ
  • ಎಸ್​.ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆದ ನಟಿ ರಮ್ಯಾ
  • ಮಾಧ್ಯಮದವರು ಕೇಳಿದ ಪ್ರಶ್ನೆಗೆ ರಮ್ಯಾ ಅವರು ಏನಂದರು?

ಬೆಂಗಳೂರು: ಕರ್ನಾಟಕದ ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರು ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಡರಾತ್ರಿ ಸದಾಶಿವ ನಗರದ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಆಗಮಿಸಿದ್ದು ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಮಾಜಿ ಸಿಎಂ ಎಸ್​.ಎಂ ಕೃಷ್ಣ ಅವರು ನಿಧನರಾದ ಹಿನ್ನೆಲೆಯಲ್ಲಿ ನಟಿ ರಮ್ಯಾ ಅವರು ಕಣ್ಣೀರು ಹಾಕಿದ್ದಾರೆ. ದುಃಖದಲ್ಲೇ ಸದಾಶಿವ ನಗರದ ನಿವಾಸಕ್ಕೆ ಬಂದ ರಮ್ಯಾ ಅವರು, ಎಸ್​.ಎಂ ಕೃಷ್ಣರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ಕಾಡುಗಳ್ಳ ವೀರಪ್ಪನ್ ತೋಳಿನಿಂದ ಅಣ್ಣಾವ್ರ ಬಿಡಿಸಿಕೊಂಡು ಬಂದಿದ್ದೇ ರೋಚಕ.. SM ಕೃಷ್ಣರ ಪಾತ್ರ ಹೇಗಿತ್ತು..?

publive-image

ಎಸ್​.ಎಂ ಕೃಷ್ಣ ಅವರ ಅಂತಿಮ ದರ್ಶನ ಪಡೆಯಲು ರಮ್ಯಾ ಅವರು ಬರುವಾಗ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಏನನ್ನು ಉತ್ತರಿಸಲಿಲ್ಲ. ನಾನು ಏನೂ ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಪ್ಲೀಸ್ ನನಗೆ ಹೋಗೋಕೆ ದಾರಿ ಬಿಡಿ. ಏನೂ ಹೇಳುವುದಕ್ಕೆ ಆಗಲ್ಲ ಎಂದು ಹೇಳಿ ಹೋದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment