/newsfirstlive-kannada/media/post_attachments/wp-content/uploads/2025/03/RANYA-RAO-3.jpg)
ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿ ರನ್ಯಾ ರಾವ್ ಅವರ ಜಾಮೀನು ಅರ್ಜಿಯನ್ನು ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ನ್ಯಾಯಾಧೀಶರಾದ ವಿಶ್ವನಾಥ್ ಸಿ ಗೌಡರ್ ಅವರಿಂದ ಆದೇಶ ನೀಡಿದ್ದು. ಆರೋಪಿ ತರುಣ್ ಕೊಂಡೂರು ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿದೆ
ಇನ್ನು ನಟಿ ರನ್ಯಾ ಜಾಮೀನು ಅರ್ಜಿ ವಜಾ ಆಗಲು ಪ್ರಮುಖ ಕಾರಣಗಳೇನು ಎಂದು ನೋಡುವುದಾದ್ರೆ. ಕಸ್ಟಮ್ ಬ್ಯಾಗೇಜ್ ನಿಯಮವನ್ನು ಅವರು ಉಲ್ಲಂಘಿಸಿದ್ದು ಗಂಭೀರವಾದ ಕಾರಣ. ಒಂದು ವೇಳೆ ಹೊರ ಬಂದಿದ್ದೆ ಆದಲ್ಲಿ ಸಾಕ್ಷಿ ನಾಶ ಮಾಡಬಹುದು ಹಾಗೂ ತನಿಖೆಯ ದಿಕ್ಕು ತಪ್ಪಿಸುವಂತಹ ಕೆಲಸ ಮಾಡಬಹುದು ಎಂಬುದು ಇನ್ನೊಂದು ಕಾರಣ.
ಇದನ್ನೂ ಓದಿ:ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ.. 3 ಆಯಾಮಗಳಲ್ಲಿ ಶುರುವಾಗಿದೆ ಪ್ರತ್ಯೇಕ ತನಿಖೆ!
ಆಕೆ ಒಂದು ವರ್ಷದ ಅವಧಿಯಲ್ಲಿ 27 ಬಾರಿ ವಿದೇಶ ಪ್ರಯಾಣ ಮಾಡಿದ್ದಾಳೆ ಇದರಿಂದ ಶೇಕಡಾ 38ರಷ್ಟು ಕಸ್ಟಮ್ಸ್ ಸುಂಕ ವಂಚನೆಯಾಗಿದೆ. ಇದರಿಂದ ಒಟ್ಟು 4 ಕೋಟಿ 82 ಲಕ್ಷ 72 ಸಾವಿರದ 694 ರೂಪಾಯಿ ಸುಂಕ ವಂಚನೆಯಾಗಿದ್ದು, ಆಕೆಯ ಬಳಿ ದುಬೈ ರೆಸಿಡೆಂಟ್ ಐಡೆಂಟಿಟಿ ಕಾರ್ಡ್ ಕೂಡ ಇರುವುದರಿಂದ ಜಾಮೀನು ಅರ್ಜಿ ವಜಾ ಆಗಲು ಪ್ರಮುಖ ಕಾರಣಗಳಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ