/newsfirstlive-kannada/media/post_attachments/wp-content/uploads/2024/08/Sam_Nag.jpg)
ಸ್ಟಾರ್ ನಟಿ ಸಮಂತಾಗೆ ಡಿವೋರ್ಸ್ ನೀಡಿದ್ದ ನಟ ನಾಗ ಚೈತನ್ಯ 2ನೇ ಮದುವೆಗೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಬಹುಭಾಷಾ ನಟಿ ಶೋಭಿತಾ ಧುಲಿಪಾಲಾ ಅವರೊಂದಿಗೆ ನಾಗ ಚೈತನ್ಯ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಾಗ ಚೈತನ್ಯ ಹಾಗೂ ಶೋಭಿತಾ ಎಂಗೇಜ್ಮೆಂಟ್ ಬೆನ್ನಲ್ಲೇ ನಟಿ ಸಮಂತಾ ಶಾಕಿಂಗ್ ನಿರ್ಧಾರವೊಂದು ತೆಗೆದುಕೊಂಡಿದ್ದಾರಂತೆ. ಈ ನಿರ್ಧಾರದ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಭಾರೀ ಚರ್ಚೆ ನಡೆಯುತ್ತಿದೆ.
ಸಮಂತಾ ಈಗ ಪ್ಯಾನ್ ಇಂಡಿಯಾ ಹೀರೋಯಿನ್. ಕೇವಲ ತೆಲುಗು ಮತ್ತು ತಮಿಳು ಮಾತ್ರವಲ್ಲ ಹಿಂದಿಯಲ್ಲೂ ಮಿಂಚುತ್ತಿದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಫುಲ್ ಬ್ಯುಸಿ ಆಗಿದ್ದಾರೆ. ಇವರು ನಟಿಸಿರೋ ಬಹುನಿರೀಕ್ಷಿತ ವೆಬ್ ಸೀರಿಸ್ 'ಸಿಟಾಡೆಲ್ ಹನಿ ಬನ್ನಿ' ಇನ್ನೇನು ರಿಲೀಸ್ ಆಗಬೇಕಿದೆ. ಇದರ ಮಧ್ಯೆ ಸ್ಯಾಮ್ ತೆಗೆದುಕೊಂಡ ಖಡಕ್ ನಿರ್ಧಾರ ಟಾಲಿವುಡ್ನಲ್ಲಿ ಹಲ್ಚಲ್ ಎಬ್ಬಿಸಿದೆ.
ನಟಿ ಸ್ಯಾಮ್ಗೆ ಏನಾಯ್ತು?
ಕಳೆದ ಕೆಲವು ದಿನಗಳಿಂದ ಸ್ಯಾಮ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಮಯೋಸೈಟಿಸ್ ಎಂಬ ಖಾಯಿಲೆಯಿಂದ ಬಳಲುತ್ತಿರೋ ಇವರು ಸಿನಿಮಾದಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದಾರೆ. ಇನ್ನೊಂದು ಕಡೆ ನಾಗ ಚೈತನ್ಯ ಎಂಗೇಜ್ಮೆಂಟ್ ಮಾಡಿಕೊಂಡಿದ್ದು ಸ್ಯಾಮ್ಗೆ ಬೇಸರ ತರಿಸಿದೆ. ಹಾಗಾಗಿ ಲಾಂಗ್ ಬ್ರೇಕ್ ಬಳಿಕ ತೆಲುಗು ಚಿತ್ರರಂಗಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಬೇಕು ಎಂದಿದ್ದ ನಿರ್ಧಾರದಿಂದ ಸ್ಯಾಮ್ ಹಿಂದೆ ಸರಿದಿದ್ದಾರೆ. ಮುಂದಿನ ದಿನಗಳಲ್ಲಿ ತೆಲುಗು ಚಿತ್ರರಂಗದಿಂದಲೇ ದೂರ ಉಳಿಯಬೇಕು ಅನ್ನೋ ನಿರ್ಧಾರಕ್ಕೆ ಸ್ಯಾಮ್ ಬಂದಿದ್ದಾರಂತೆ.
ಇದನ್ನೂ ಓದಿ:ಸಮಂತಾ ಸಹೋದರಿ ಜೊತೆ 2ನೇ ಮದುವೆ.. ನಾಗಚೈತನ್ಯ ಕೈ ಹಿಡಿದ ಶೋಭಿತಾ ಧೂಳಿಪಾಲ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ